Illicit Relationship : ಕುಡಿದ ಮತ್ತಿನಲ್ಲಿ  ಪತ್ನಿಯ  ಕುತ್ತಿಗೆಗೆ ಸೀರೆ ಸುತ್ತಿ ಕೊಲೆ! ಪಾಪಿ ಗಂಡ

Published : Feb 26, 2022, 07:06 PM ISTUpdated : Feb 26, 2022, 07:07 PM IST
Illicit Relationship : ಕುಡಿದ ಮತ್ತಿನಲ್ಲಿ  ಪತ್ನಿಯ  ಕುತ್ತಿಗೆಗೆ ಸೀರೆ ಸುತ್ತಿ ಕೊಲೆ! ಪಾಪಿ ಗಂಡ

ಸಾರಾಂಶ

* ಅಕ್ರಮ ಸಂಬಂಧದ ಶಂಕೆ * ಪತ್ನಿಯನ್ನು ದಾರುಣ ರೀತಿ ಹತ್ಯೆ ಮಾಡಿದ ಗಂಡ * ಉಸಿರುಕಟ್ಟಿಸಿ ಪತ್ನಿ ಹತ್ಯೆ

ಚಿಕ್ಕೋಡಿ( ಫೆ.  26)  ಪತ್ನಿ ಮೇಲೆ ಅಕ್ರಮ (Illicit Relationship) ಸಂಬಂಧ ಸಂಶಯ ಪಟ್ಟುಕೊಂಡ  ಗಂಡ ದಾರುಣ ರೀತಿಯಲ್ಲಿ ಪತ್ನಿಯನ್ನು ಹತ್ಯೆ  (Murder) ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಸೀರೆಯಿಂದ ಕುತ್ತಿಗೆಗೆ ಉರುಳು ಹಾಕಿ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ.

ಆಶಾ ಪ್ರದೀಪ ಕಾಂಬಳೆ (35 ) ಗಂಡನಿಂದಲೇ ಹತ್ಯೆಯಾಗಿದ್ದಾಳೆ.. ಪ್ರತಾಪ್ ಅಲಿಯಾಸ್ ಪ್ರದೀಪ ಕಾಂಬಳೆ (40 ) ಪತ್ನಿಯನ್ನೇ ಹತ್ಯೆಗೈದ ದುರುಳ. ರಾಯಬಾಗ (Raibag)ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಗಂಡ ಪತ್ನಿಯ ಹತ್ಯೆ ಮಾಡಿದ್ದಾನೆ.  ಕೊಲೆ ಆರೋಪಿ ಕಾಂಬಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಗಳ ಸಂಸಾರವನ್ನೇ ಕೊಂದು ಮುಗಿಸಿದ ಅಪ್ಪ:   ಪಿಎಸ್‌ಐ ಪುತ್ರನ ಹತ್ಯೆ(Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು(Police) ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

Online Dating Fraud : ಆನ್ ಲೈನ್ ಮಾಯಾಂಗನೆ ವಿಡಿಯೋ ಚಾಟಿಂಗ್ ಮೋಹ, ಲಕ್ಷ ಲಕ್ಷ ಕಳಕೊಂಡ ಚಿಕ್ಕಮಗಳೂರು ಟೆಕ್ಕಿ!

ಪಾಲಿಕೆ ಮಾಜಿ ಸದಸ್ಯ ರೌಫ ಶೇಖ, ರೌಫ ಪುತ್ರ ಆತೀಫ್‌ ಶೇಖ, ವಿಲಾಸ ರಾಠೋಡ, ಅನಿಲ ಚವ್ಹಾಣ ಬಂಧಿತ ಆರೋಪಿಗಳು. ಪಾಲಿಕೆ ಮಾಜಿ ಸದಸ್ಯ ರೌಫ ಶೇಖ ಅವರ ಪುತ್ರಿ ಅತೀಕಾಳನ್ನು ಗಾಂಧಿ ಚೌಕ ಕ್ರೈಂ ಪಿಎಸ್‌ಐ ರಿಯಾಜ ಕೂಡಗಿ ಅವರ ಪುತ್ರ ಮುಸ್ತಕಿನ್‌ ಕೂಡಗಿ ಪ್ರೇಮಿಸಿ ಮದುವೆಯಾಗಿದ್ದ. ಈ ಸಿಟ್ಟಿನಿಂದಾಗಿ ಫೆ.15ರಂದು ವಿಜಯಪುರ (Vijayapura) ನಗರದ ರೇಡಿಯೋ ಕೇಂದ್ರದ ಬಳಿ ಮುಸ್ತಕಿನ್‌ ಕೂಡಗಿ ಭೀಕರ ಹತ್ಯೆ ನಡೆದಿತ್ತು. ಇದು ವಿಜಯಪುರ ನಗರದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ನಾಲ್ವರು ಆರೋಪಿಗಳು ಬಂಧಿಸಿದ್ದಾರೆ.

8 ಗಂಟೆಯಲ್ಲೇ ಐವರು ಅಪಹರಣಕಾರರ ಹೆಡೆಮುರಿ ಕಟ್ಟಿದ ಪೊಲೀಸರು:   ಬೇಕರಿ ಮಾಲೀಕನನ್ನು ಅಪಹರಣ(Kidnap) ಮಾಡಿ 20 ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು(Accused) ಕೇವಲ ಎಂಟು ಗಂಟೆಯೊಳಗೆ ಬಂಧಿಸಿ ಬೇಕರಿ ಮಾಲೀಕನನ್ನು ರಕ್ಷಣೆ ಮಾಡಿದ್ದ ಪ್ರಕರಣ ಇಂಡಿಯಿಂದ ವರದಿಯಾಗಿತ್ತು.

ಬೇಕರಿ  ಇಟ್ಟುಕೊಂಡಿದ್ದ ಮಾನಸಿಂಗ್‌ ಎಂಬುವವರನ್ನು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ವಿಜಯಪುರ ರಸ್ತೆಯ ಭಾರತ ಗ್ಯಾಸ್‌ ಏಜೆನ್ಸಿ ಬಳಿ ಕಾರ್‌ನಲ್ಲಿ ಹಾಕಿಕೊಂಡು ಹೋಗಿ 20 ಲಕ್ಷ ಹಣಕ್ಕೆ(Money) ಬೇಡಿಕೆ ಇಟ್ಟಿದ್ದರು. ಕಿಡ್ನಾಪ್‌ ಮಾಡಿ ಬೇಕರಿ ಮಾಲೀಕನ ಕೈ ಹಾಗೂ ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದಾರೆ. ಇಂಡಿ ಪೊಲೀಸರು(Police) ಮಿಂಚಿನ ಕಾರ್ಯಾಚರಣೆ ನಡೆಸಿದ್ದರ ಪರಿಣಾಮ ಲೋಣಿ ಕ್ರಾಸ್‌ ಬಳಿ ಆರೋಪಿತರ ಕಾರು ಬೆನ್ನಟ್ಟಿ ಕಾರು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!