ಬೆಂಗಳೂರು: ಶೀಲ ಶಂಕಿಸಿ ಪತ್ನಿ ಕೊಂದು ಪರಾರಿಯಾಗಿದ್ದ ಪತಿ ಆತ್ಮಹತ್ಯೆಗೆ ಶರಣು..!

By Kannadaprabha NewsFirst Published Aug 18, 2024, 5:02 AM IST
Highlights

ದೊಡ್ಡಕಮ್ಮನಹಳ್ಳಿ ಮಹೇಶ್ ನಿವಾಸಿ ದುರ್ದೈವಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿ ಮೀನಾ (36) ಮೇಲೆ ಕಬ್ಬಿಣ ಸಲಾಕೆಯಿಂದ ಹಲ್ಲೆ ನಡೆಸಿ ಶುಕ್ರವಾರ ಮಧ್ಯಾಹ್ನ ಕೊಂದು ಮಹೇಶ್ ಪರಾರಿಯಾ ಗಿದ್ದ. ಈ ಕೃತ್ಯದ ಬಳಿಕ ಮನೆ ಸಮೀಪ ನಿರ್ಜನ ಪ್ರದೇಶಕ್ಕೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು(ಆ.18):  ದೊಡ್ಡಕಮ್ಮನಹಳ್ಳಿಯಲ್ಲಿ ಶೀಲ ಶಂಕಿಸಿ ಪತ್ನಿಯ ಕೊಂದು ಶುಕ್ರವಾರ ಪರಾರಿ ಆಗಿದ್ದ ಕಾರ್ಮಿಕ ಆತ್ಮಹತ್ಯೆಗೆ ಶರಣಾದ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಕಮ್ಮನಹಳ್ಳಿ ಮಹೇಶ್ (40) ನಿವಾಸಿ ದುರ್ದೈವಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿ ಮೀನಾ (36) ಮೇಲೆ ಕಬ್ಬಿಣ ಸಲಾಕೆಯಿಂದ ಹಲ್ಲೆ ನಡೆಸಿ ಶುಕ್ರವಾರ ಮಧ್ಯಾಹ್ನ ಕೊಂದು ಮಹೇಶ್ ಪರಾರಿಯಾ ಗಿದ್ದ. ಈ ಕೃತ್ಯದ ಬಳಿಕ ಮನೆ ಸಮೀಪ ನಿರ್ಜನ ಪ್ರದೇಶಕ್ಕೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಮಾಡಿಕೊಂ ರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Latest Videos

ಮೈಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!

20 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ ಬಾಗೇಪಲ್ಲಿ ತಾಲೂಕಿನ ಮೀನಾ ಜ- ಮಹೇಶ್ 2ನೇ ವಿವಾಹವಾಗಿದ್ದ. ಇದಕ್ಕೂ ಮುನ್ನ ತನ್ನ ಮೊದಲಪತಿಯಿಂದ ಪ್ರತ್ಯೇಕವಾಗಿ ಇಬ್ಬರು ಮಕ್ಕಳ ಜತೆ ನಗರಕ್ಕೆ ಮೀನಾ ಬಂದಿ ದ್ದಳು. ಮೀನಾ ಮಕ್ಕಳ ಜನ ಮಹೇಶ್‌ ಅನ್ನೋನ್ಯವಾಗಿಯೆ ಇದ್ದ. ಆದರೆ ಇತ್ತೀಚಿಗೆ ಪತ್ನಿ ನಡವಳಿ ಮೇಲೆ ಶಂಕೆಗೊಂಡಿದ್ದ ಆತ, ಸದಾ ಮೊ ಲ್‌ನಲ್ಲಿ ಮಾತುಕತೆಯಲ್ಲಿ ನಿರತಳಾಗಿದ ಮೀನಾ ವರ್ತನೆಗೆ ಆಕ್ಷೇಪಿಸಿದ್ದ. ಇದೆ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾ ವಾಗಿತ್ತು. ಮನೆಯಲ್ಲಿ ಶುಕ್ರವಾದ ಮಧ್ಯಾಹ್ನ ಸತಿ-ಪತಿ ಮಧ್ಯೆ ಜಗಳವಾಗಿದೆ ಆಗ ಪತ್ನಿಯನ್ನ ಹತ್ಯೆ ಮಾಡಿದ್ದ. 

click me!