ತುಮಕೂರಿನಲ್ಲಿ ತಪ್ಪಿತು ದೊಡ್ಡ ಅನಾಹುತ;  ಮಕ್ಕಳ ಕೈಗೆ ಸಿಕ್ಕಿತ್ತು ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆ!

Published : Jan 05, 2024, 09:35 AM ISTUpdated : Jan 05, 2024, 09:39 AM IST
ತುಮಕೂರಿನಲ್ಲಿ ತಪ್ಪಿತು ದೊಡ್ಡ ಅನಾಹುತ;  ಮಕ್ಕಳ ಕೈಗೆ ಸಿಕ್ಕಿತ್ತು ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆ!

ಸಾರಾಂಶ

: ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆ ಶಾಲಾ ಮಕ್ಕಳ ಕೈಗೆ ಸಿಕ್ಕು ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ ನಡೆದಿದೆ.

ತುಮಕೂರು (ಜ.5): ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆ ಶಾಲಾ ಮಕ್ಕಳ ಕೈಗೆ ಸಿಕ್ಕು ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ ನಡೆದಿದೆ.

ಕಾಡು ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆ. ಶಾಲೆ ಪಕ್ಕದಲ್ಲೇ ಎಸೆದುಹೋಗಿರುವ ದುಷ್ಕರ್ಮಿಗಳು. ಬೆಳಗ್ಗೆ ಶಾಲೆಗೆ ಬಂದ ಮಕ್ಕಳು ಮದ್ದಿನ ಉಂಡೆ ನೋಡಿದ್ದಾರೆ. ಯುವರಾಜ್, ಶ್ರೀನಿವಾಸ ಎಂಬ ಶಾಲಾ ಬಾಲಕರು ಮೊದಲು ನೋಡಿದ್ದಾರೆ. ಬಳಿಕ ಸಿಡಿಮದ್ದಿನ ಉಂಡೆ ಬಾಲ್ ನಂತೆ ಕಾಣಿಸಿತೋ ಏನೋ ಜೀವಂತ ಮದ್ದಿನ ಹುಂಡೆಯನ್ನು ಕೈಯಲ್ಲಿಡಿದು ಓಡಾಡಿದ್ದಾನೆ. ಇತರೆ ಮಕ್ಕಳಿಗೆ ತೋರಿಸಿದ್ದಾನೆ. ದುರಾದೃಷ್ಟವಶಾತ್ ಬಾಲ್ ಎಂದು ಆಟವಾಡಿಲ್ಲ ಹೀಗಾಗಿ ಸ್ಫೋಟಗೊಳ್ಳದೆ ಹಾಗೆ ಉಳಿದುಕೊಂಡಿದೆ. 

ಕುಡುಕಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದಿದ್ದ ನಟಿ ಶ್ರುತಿ ಹಾಸನ್​ ಡ್ರಗ್ಸ್​ ಕುರಿತು ಹೇಳಿದ್ದೇನು?

ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗಿರುವ ಶ್ರೀನಿವಾಸ ಆ ಸ್ಪೋಟಕ ಉಂಡೆಯನ್ನು ತಂದೆ ಕೈಗೆ ಕೊಟ್ಟಿದ್ದಾನೆ. ಆದರೆ ಅದು ಬಾಲ್ ಅಲ್ಲ, ಇದು ಯಾವುದೋ ಮಾಟ ಮಂತ್ರದ ಉಂಡೆ ಇರಬೇಕು ಎಂದು ಭಾವಿಸಿ ಅದನ್ನು ದೂರಕ್ಕೆ ಎಸೆದಿರುವ ಶ್ರೀನಿವಾಸ ತಂದೆ. ಉಂಡೆ ಎಸೆಯುತ್ತಿದ್ದಂತೆ ಅದನ್ನ ಹಿಡಿಯಲು ಹೋದ ಬೀದಿ ನಾಯಿ. ಕಚ್ಚಿ ಹಿಡಿಯುವಾಗ ನಾಯಿಯ ಬಾಯಿಯಲ್ಲೇ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಮದ್ದಿನ ಉಂಡೆ ಸ್ಫೋಟಕ್ಕೆ ಬಾಯಿ ಛಿದ್ರಗೊಂಡ ಸ್ಥಳದಲ್ಲೇ ಪ್ರಾಣ ಬಿಟ್ಟ ಬೀದಿ ನಾಯಿ.

ನೈಂಟಿ ಕೊಡಿಸದ್ದಕ್ಕೆ ಹಿರಿಯ ನಾಗರಿಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಪುಂಡ!

ಬೆಚ್ಚಿಬಿದ್ದ ತಂದೆ:

ಮಗನ ಕೈಯಲ್ಲಿದ್ದ ಮದ್ದಿನ ಉಂಡೆ ಬಾಲ್‌ ಅಲ್ಲ, ಸ್ಫೋಟಕ ಎಂದು ತಿಳಿಯುತ್ತಿದ್ದಂತೆ ಬೆಚ್ಚಿಬಿದ್ದ ಬಾಲಕನ ತಂದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಳಿಕ ಶಾಲೆಗೆ ಸುದ್ದಿ ತಿಳಿಸಿದ ಬಾಲಕನ ತಂದೆ. ಇದೀಗ ಶಾಲೆ ಬಳಿ ಮದ್ದಿನ ಉಂಡೆ ಎಸೆದವರು ಯಾರು ಎಂಬ ಬಗ್ಗೆ ಅನುಮಾನ ಉಂಟುಮಾಡಿದೆ. ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಗೊಂಡ ಸ್ಥಳ, ಪತ್ತೆಯಾದ ಜಾಗ ಪರಿಶೀಲಿಸಿರುವ ಪೊಲೀಸರು. ಮಕ್ಕಳೊಂದಿಗೆ ಮಾಹಿತಿ ಪಡೆದು ವಿಚಾರಣೆ ಮುಂದುವರೆಸಿದ ಪೊಲೀಸರು. ಅನಾಹುತ ಸೃಷ್ಟಿಸಲೆಂದು ಎಸೆದು ಹೋದರೆ ದುಷ್ಕರ್ಮಿಗಳು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ