
ಬೆಂಗಳೂರು (ಜ.5): ಕುಡಿಯಲು ನೈಂಟಿ ಎಣ್ಣೆ ಕೊಡಿಸದ್ದಕ್ಕೆ ಪುಂಡನೋರ್ವ ಹಿರಿಯ ನಾಗರೀಕನ ಮೇಲೆ ಇಟ್ಟಿಗೆಯಿಂದ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ ಘಟನೆ ಗಿರಿನಗರದ ಮೂಕಾಂಬಿಕನಗರದಲ್ಲಿ ನಡೆದಿದೆ.
ಸಿಂಗಾರ ವೇಲು ಹಲ್ಲೆಗೊಳಗಾದ ಹಿರಿಯ ನಾಗರಿಕ. ಮುಖದ ಭಾಗಕ್ಕೆ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿರೋ ಸಿಂಗಾರವೇಲು. ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಹಿಡಿದಿದೆ. ಹಲ್ಲೆ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಧರ್ಮ
ಕುಡುಕಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದಿದ್ದ ನಟಿ ಶ್ರುತಿ ಹಾಸನ್ ಡ್ರಗ್ಸ್ ಕುರಿತು ಹೇಳಿದ್ದೇನು?
ಘಟನೆ ಹಿನ್ನೆಲೆ
ಸಿಂಗಾರ ವೇಲು ಹಿರಿಯ ನಾಗರಿಕನಾಗಿದ್ದು ಗಿರಿನಗರದ ಮನೆಬಳಿ ಕಬಾಬ್ ತಿನ್ನುತ್ತಿದ್ರು. ಈ ವೇಳೆ ಎಂಟ್ರಿಕೊಟ್ಟಿದ್ದ ಆರೋಪಿ ಧರ್ಮ. ಕುಡಿಯಲು ನೈಂಟಿ ಕೊಡಿಸುವಂತೆ ಪೀಡಿಸಿದ್ದಾನೆ. ಆದರೆ ವೇಲು ಎಣ್ಣೆ ಕೊಡಿಸಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡು ಪಕ್ಕದಲ್ಲೇ ಇದ್ದ ಇಟ್ಟಿಗೆ ಕೈಗೆ ತೆಗೆದುಕೊಂಡು ವೇಲು ಎಂಬುವವರಿಗೆ ಕಾಲಲ್ಲಿ ಒದ್ದು, ಮುಖದ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿ.ಇಟ್ಟಿಗೆಯಿಂದ ಹೊಡೆದ ಪರಿಣಾಮ ತುಟಿಗೆ ಗಂಭೀರವಾಗಿದೆ. ಗಾಯಾಳು ವೇಲು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಡಿತೀರಾ? ಏನೂ ತಲೆಯೇ ಓಡ್ತಿಲ್ಲವೆಂದ್ರೆ ಆಲ್ಕೋಹಾಲ್ ನಿಲ್ಲಿಸಿ ನೋಡಿ!
ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಆರೋಪಿ ಪತ್ತೆಗೆ ಶೋಧಕಾರ್ಯಕ್ಕೆ ಮುಂದಾಗಿರುವ ಪೊಲೀಸರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ