ಮದುವೆ ಮನೆಯಲ್ಲಿ ಆಸಿಡ್‌ ದಾಳಿ, ವಧು-ವರರ ಮುಖ ಮಟಾಷ್‌!

Published : Apr 20, 2023, 04:25 PM IST
ಮದುವೆ ಮನೆಯಲ್ಲಿ ಆಸಿಡ್‌ ದಾಳಿ, ವಧು-ವರರ ಮುಖ ಮಟಾಷ್‌!

ಸಾರಾಂಶ

ಮದುವೆ ಸಂಭ್ರಮದಲ್ಲಿದ್ದ ವಧು-ವರ ಇನ್ನೇನು ಮಂಟಪದ ಸನಿಹದಲ್ಲಿರುವಾಗ ಸಡನ್‌ ಆಗಿ ಕರೆಂಟ್‌ ಹೋಗಿದ್ದು ಅವಾಂತರಕ್ಕೆ ಕಾರಣವಾಗಿದೆ. ಈ ವೇಳೆ ಅಪರಿಚಿತನೊಬ್ಬ ಎಸೆದ ಆಸಿಡ್‌ ರೀತಿಯ ದ್ರವದಿಂದ ವಧು ಹಾಗೂ ವರ ಮಾತ್ರವಲ್ಲದೆ 10 ಮಂದಿ ಸಂಬಂಧಿಗಳ ಮುಖ ಸುಟ್ಟುಹೋಗಿದೆ.

ರಾಯ್‌ಪುರ (ಏ.20): ಮದುವೆ ಮಂಟಪದ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಎಸೆದ ಆಸಿಡ್‌ ರೀತಿಯ ದ್ರವದಿಂದಾಗಿ ವಧು, ವರ ಮಾತ್ರವಲ್ಲದೆ ಅವರ 10 ಮಂದಿ ಸಂಬಂಧಿಕರ ಮುಖ ಬಹುತೇಕವಾಗಿ ಸುಟ್ಟುಹೋದ ಘಟನೆ ಛತ್ತೀಸ್‌ಗಢದ ಬಸ್ತಾರ್‌ ಜಿಲ್ಲೆಯಲ್ಲಿ ನಡೆದಿದೆ. ಬಸ್ತಾರ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಮದುವೆ ಸಂಭ್ರಮದಲ್ಲಿದ್ದ ಕುಟುಂಬ ಈಗ ಶೋಕದಲ್ಲಿ ಮುಳುಗಿದೆ. ಆಸಿಡ್‌ ರೀತಿಯ ದ್ರವ ಇದಾಗಿದ್ದು, ವಧು-ವರರ ಮುಖದ ಮೇಲೆ ಸುಟ್ಟ ಗಾಯಗಳಾಗಿವೆ. 10 ಮಂದಿ ಸಂಬಂಧಿಕರೂ ಇದರಲ್ಲಿ  ಗಾಯಗೊಂಡಿದ್ದಾರೆ ಎಂದು ಪೊಲೀಸರು ಗರುವಾರ ತಿಳಿಸಿದ್ದಾರೆ. ಭಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟೆ ಅಮಾಬಲ್ ಗ್ರಾಮದಲ್ಲಿ ಬುಧವಾರ ಸಂಜೆ ವಿವಾಹ ಸಮಾರಂಭ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 25 ವರ್ಷದ ವರ ಧರ್ಮುಧರ್‌ ಬಾಘೇಲ್‌ ಹಾಘೂ 19 ವರ್ಷದ ವಧು ಸುನೀತಾ ಕಶ್ಯಪ್‌ ಅವರಿಗೆ ಹೆಚ್ಚಿನ ಸುಟ್ಟ ಗಾಯಗಳಾಗಿದ್ದು, 10 ಮಂದಿ ಸಂಬಂಧಿಕರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮದುವೆ ಸಮಾರಂಭ ವಧುವಿನ ಮನೆಯಲ್ಲಿ ನಡೆಯುತ್ತಿತ್ತು. ಈ ಹಂತದಲ್ಲಿ ಹಠಾತ್‌ ಆಗಿ ಕರೆಂಟ್‌ ಹೋಗಿದೆ. ಸಂಪೂರ್ಣ ಕತ್ತಲು ಆವರಿಸಿದ್ದ ಸಂದರ್ಭದ ಲಾಭ ಪಡೆದ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ, ಮಂಟಪದಲ್ಲಿ ಕುಳಿತಿದ್ದ ವಧು ಹಾಗೂ ವರರನತ್ತ ಗುರಿಯಾಗಿಸಿ ಆಸಿಡ್‌ ರೀತಿಯ ಲಿಕ್ವಿಡ್‌ ಎಸೆದಿದ್ದಾನೆ. ಇದರ ಬೆನ್ನಲ್ಲಿಯೇ ಅವರಿಗೆ ಸುಟ್ಟ ಗಾಯಗಳಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಈ ವೇಳೆ ಮಂಟಪದಲ್ಲಿ ವಧು-ವರರ ಪಕ್ಕದಲ್ಲಿ ಕುಳಿತಿದ್ದ ಅವರ ಸಂಬಂಧಿಕರಿಗೂ ಈ ಲಿಕ್ವಿಡ್‌ ತಗುಲಿದೆ. ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ. ಮದುವೆ ಸಮಾರಂಭದಲ್ಲಿದ್ದ ನಾರಾಯಣಪುರದ ಕಾಂಗ್ರೆಸ್‌ ಶಾಸಕ ಚಂದನ್‌ ಕಶ್ಯಪ್‌, ಗಾಯಗೊಂಡ ಎಲ್ಲರಲ್ಲೂ ತಮ್ಮ ಹಾಗೂ ಬೆಂಗಾವಲು ಪಡೆಯ ಕಾರಿನಲ್ಲಿ ಭಾನ್‌ಪುರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.ಗಾಯಗೊಂಡ 12 ಜನರಲ್ಲಿ ವಧು, ವರ ಮತ್ತು ಇತರ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಗದಲ್‌ಪುರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಡಿವೋರ್ಸ್ ವಿಚಾರಣೆ ಮುಗಿಸಿ ಬಂದ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪತಿ, ಪೊಲೀಸ್ ಠಾಣೆ ಎದುರಲ್ಲೇ ನಡೆಯಿತು ಘಟನೆ!

ಬಾಘೆಲ್ ಅವರನ್ನು ಗುರುವಾರ ಬೆಳಿಗ್ಗೆ ಡಿಸ್ಚಾರ್ಜ್ ಮಾಡಲಾಗಿದೆ, ಇತರರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೋರ್ಟ್ ಹಾಲ್‌ನಲ್ಲೇ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪಾಪಿ ಪತಿ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ