ಕೊಪ್ಪಳ: ದಲಿತನಿಗೆ ಕಟಿಂಗ್‌ ಮಾಡಲು ನಿರಾಕರಣೆ, ಮಾತಿಗೆ ಮಾತು ಬೆಳೆದು ಯುವಕನ ಹತ್ಯೆಗೈದ ಕ್ಷೌರಿಕ..!

Published : Aug 18, 2024, 09:52 AM IST
ಕೊಪ್ಪಳ:  ದಲಿತನಿಗೆ ಕಟಿಂಗ್‌ ಮಾಡಲು ನಿರಾಕರಣೆ, ಮಾತಿಗೆ ಮಾತು ಬೆಳೆದು ಯುವಕನ ಹತ್ಯೆಗೈದ ಕ್ಷೌರಿಕ..!

ಸಾರಾಂಶ

ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಕಟಿಂಗ್ ಶಾಪ್‌ಗೆ ಹೋಗಿದ್ದ. ಈ ವೇಳೆ ದಲಿತರಿಗೆ ಕ್ಷೌರ ಮಾಡೋದು ಕಷ್ಟ ಆಗೈತಿ, ಮೊದಲು ಹಣ ಕೊಡು ಎಂದು ಮುದಕಪ್ಪ ಕೇಳಿದ್ದನಂತೆ. ನಮ್ಮ‌ ಅಣ್ಣ ಬಂದ ಮೇಲೆ ಹಣ ಕೊಡುತ್ತೇನೆ ಎಂದು ಯಮನೂರಪ್ಪ ಹೇಳಿದ್ದನು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ನಡೆದು ಯಮನೂರಪ್ಪನ ಹೊಟ್ಟೆಗೆ ಕತ್ತರಿಯಿಂದ ಚುಚ್ಚಿ ಮುದಕಪ್ಪ ಕೊಲೆ‌ ಮಾಡಿದ್ದಾನೆ.  

ಕೊಪ್ಪಳ(ಆ.18): ದಲಿತ ಯುವಕನಿಗೆ ಕ್ಷೌರ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದು ದಲಿತ ಯುವಕನನ್ನು ಕ್ಷೌರಿಕ ಕೊಲೆ ಮಾಡಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿದೆ. ಯಮನೂರಪ್ಪ ಬಂಡಿಹಾಳ (23) ಕೊಲೆಯಾದ ಯುವಕ. 

ಮುದಕಪ್ಪ ಹಡಪದ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.  ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಕಟಿಂಗ್ ಶಾಪ್‌ಗೆ ಹೋಗಿದ್ದ. ಈ ವೇಳೆ ದಲಿತರಿಗೆ ಕ್ಷೌರ ಮಾಡೋದು ಕಷ್ಟ ಆಗೈತಿ, ಮೊದಲು ಹಣ ಕೊಡು ಎಂದು ಮುದಕಪ್ಪ ಕೇಳಿದ್ದನಂತೆ. ನಮ್ಮ‌ ಅಣ್ಣ ಬಂದ ಮೇಲೆ ಹಣ ಕೊಡುತ್ತೇನೆ ಎಂದು ಯಮನೂರಪ್ಪ ಹೇಳಿದ್ದನು. 

ಸ್ನೇಹಿತೆಯ ಜೊತೆ ಸೇರಿ ಗಂಡನ ಪ್ರೈವೇಟ್‌ ಪಾರ್ಟ್‌ಗೆ ಕತ್ತರಿ ಹಾಕಿದ ಮಹಿಳೆ

ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ನಡೆದು ಯಮನೂರಪ್ಪನ ಹೊಟ್ಟೆಗೆ ಕತ್ತರಿಯಿಂದ ಚುಚ್ಚಿ ಮುದಕಪ್ಪ ಕೊಲೆ‌ ಮಾಡಿದ್ದಾನೆ.  ಸಂಗನಾಳ‌ ಗ್ರಾಮಕ್ಕೆ ಕೊಪ್ಪಳ ಎಸ್ಪಿ ರಾಮ ಎಲ್ ಅರಸಿದ್ದಿ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ