
ಬೆಂಗಳೂರು(ಜೂ.30): ಏಕದಿನ ವಿಶ್ವಕಪ್ಗೆ ಇನ್ನು ಮೂರು ತಿಂಗಳು ಮಾತ್ರ ಬಾಕಿಯಿದೆ. ಆದ್ರೆ, ಟೀಂ ಇಂಡಿಯಾಗೆ ಮೇಲಿಂದ ಮೇಲೆ ಆಘಾತ ಎದುರಾಗ್ತಿದೆ. ಇಂಜುರಿಯಿಂದ ತಂಡದಿಂದ ಹೊರಗುಳಿದಿರೋ ಶ್ರೇಯಸ್ ಅಯ್ಯರ್, ಏಕದಿನ ವಿಶ್ವಕಪ್ ಆಡೋದು ಡೌಟ್. ಇದೇ ಈಗ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಟೀಂ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ.
ಈಗಾಗಲೇ ಪ್ರಮುಖ ಆಟಗಾರರು ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಈ ಆಟಗಾರರು ಅದ್ಯಾವಾಗ ರಿಕವರಿ ಆಗ್ತಾರೆ ಅನ್ನೋದೆ ಕ್ಲಾರಿಟಿ ಇಲ್ಲ. ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಕೆ.ಎಲ್ ರಾಹುಲ್ ವೇಗವಾಗಿ ರಿಕವರಿ ಆಗ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಏಷ್ಯಾಕಪ್ ಟೂರ್ನಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಮತ್ತೆ ಬ್ಯಾಟ್ ಬೀಸಲಿದ್ದಾರೆ. ಮತ್ತೊಂದೆಡೆ ರಿಷಭ್ ಪಂತ್ ವಿಶ್ವಕಪ್ ವೇಳೆಗೆ ಗುಣಮುಖರಾಗೋದು ಅನುಮಾನವಾಗಿದೆ.
ವಿಶ್ವಕಪ್ ವೇಳೆಗೆ ಶ್ರೇಯಸ್ ಅಯ್ಯರ್ ರಿಕವರಿ ಆಗೋದು ಡೌಟ್..!
ಹೌದು, ರಿಷಭ್ ಪಂತ್ ಜೊತೆಗೆ ಶ್ರೇಯಸ್ ಅಯ್ಯರ್ ಕೂಡ ಸದ್ಯಕ್ಕೆ ಗುಣಮುಖರಾಗೊ ಲಕ್ಷಣ ಕಾಣಿಸ್ತಿಲ್ಲ. ಕೆ ಎಲ್ ರಾಹುಲ್ ಮತ್ತು ಬುಮ್ರಾರಂತೆ ಶ್ರೇಯಸ್ ಅಯ್ಯರ್ ಸ್ಪೀಡಾಗಿ ರಿಕವರಿ ಆಗ್ತಿಲ್ಲ. ಇದರಿಂದ ಶ್ರೇಯಸ್ ವಿಶ್ವಕಪ್ ಆಡಲಿದ್ದಾರೆ ಅಂತ ಹೇಳಲು ಸಾಧ್ಯವಿಲ್ಲ. ಹಾಗಂತ, ಇದನ್ನು ನಾವೇಳ್ತಿಲ್ಲ, ಬಿಸಿಸಿಐ ಮೂಲಗಳೇ ಸ್ಪಷ್ಟಪಡಿಸಿವೆ. ಒಂದು ವೇಳೆ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಆಡದಿದ್ರೆ, ತಂಡಕ್ಕೆ ದೊಡ್ಡ ಪೆಟ್ಟು ಬೀಳಲಿದೆ.
ICC ಮನಗೆದ್ದ 3 ಕ್ರಿಕೆಟ್ ಸ್ಟೇಡಿಯಂ; ಆ ಮೂರು ಕ್ರೀಡಾಂಗಣಕ್ಕೆ ವಿಶ್ವಕಪ್ ಆತಿಥ್ಯ ಸಿಕ್ಕಿದ್ದು ಹೇಗೆ..?
ಏಕದಿನ ಫಾರ್ಮ್ಯಾಟ್ನಲ್ಲಿ ಶ್ರೇಯಸ್ ಅಯ್ಯರ್, ತಂಡದ ಪ್ರಮುಖ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಆಗಿದ್ದಾರೆ. 4ನೇ ಕ್ರಮಾಂಕದಲ್ಲಿ ಅಯ್ಯರ್, ಅದ್ಭುತ ದಾಖಲೆ ಹೊಂದಿದ್ದಾರೆ. ಈವರೆಗು ಭಾರತ ಪರ 42 ಏಕದಿನ ಪಂದ್ಯಗಳನ್ನಾಡಿರೋ ಶ್ರೇಯಸ್ ಅಯ್ಯರ್, 46.6ರ ಸರಾಸರಿಯಲ್ಲಿ 1,631 ರನ್ಗಳಿಸಿದ್ದಾರೆ. ಇದ್ರಲ್ಲಿ 2 ಶತಕ 14 ಅರ್ಧಶತಕ ಸೇರಿವೆ. ಈ ಅಂಕಿ-ಅಂಶಗಳೇ, ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಅಯ್ಯರ್ ಎಷ್ಟು ಇಂಪಾರ್ಟೆಂಟ್ ಅನ್ನೋದನ್ನ ಹೇಳುತ್ತಿವೆ.
ಮುಂಬೈಕರ್ ಸ್ಥಾನದ ಮೇಲೆ ಮತ್ತೊಬ್ಬ ಮುಂಬೈಕರ್ ಕಣ್ಣು..!
ಯೆಸ್, ಈಗಾಗಲೇ ಟೆಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡಿರೋ ಅಜಿಂಕ್ಯ ರಹಾನೆ, ಏಕದಿನ ತಂಡದ ಮೇಲೆ ಕಣ್ಣಿಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಇಂಜುರಿಯಿಂದಾಗಿ ಟೆಸ್ಟ್ ತಂಡದಲ್ಲಿ ರಹಾನೆಗೆ ಸ್ಥಾನ ಸಿಕ್ತು. ಈಗ ಮತ್ತೊಮ್ಮೆ ಶ್ರೇಯಸ್ ಸ್ಥಾನವನ್ನ ಆಕ್ರಮಿಸಿಕೊಳ್ಳಲು ರಹಾನೆ ರೆಡಿಯಾಗಿದ್ದಾರೆ. ಅಯ್ಯರ್ ವಿಶ್ವಕಪ್ ಆಡದಿದ್ರೆ, ವಲ್ಡ್ಕಪ್ನಲ್ಲಿ 4ನೇ ಕ್ರಮಾಂಕಕ್ಕೆ ರಹಾನೆ ಸೂಕ್ತ ಅನ್ನೋ ಮಾತುಗಳು ಕೇಳಿ ಬರ್ತಿವೆ.
ODI World Cup 2023: ಜುಲೈ 01ರಿಂದ ಏಕದಿನ ವಿಶ್ವಕಪ್ ಟಿಕೆಟ್ ಮಾರಾಟ?
ಏಕದಿನ ಫಾರ್ಮ್ಯಾಟ್ನಲ್ಲಿ ಅಜಿಂಕ್ಯ ರಹಾನೆ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಅಲ್ಲದೇ, ರಹಾನೆಗೆ ಈ ಹಿಂದೆ 2015ರ ವಿಶ್ವಕಪ್ ಆಡಿದ ಅನುಭವವಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ರಹಾನೆ ಉತ್ತಮ ಪ್ರದರ್ಶನ ನೀಡಿದ್ರು. ಈ ಎಲ್ಲಾ ಕಾರಣಗಳು ರಹಾನೆಗೆ ಪ್ಲಸ್ ಪಾಯಿಂಟ್ ಆಗಲಿವೆ. ಇದರಿಂದ ರಹಾನೆ 5 ವರ್ಷಗಳ ನಂತರ ಏಕದಿನ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ರು ಅಚ್ಚರಿ ಇಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.