ಪಾಕಿಸ್ತಾನ ಹಿಂದೂ ದೇಗುಲದಲ್ಲಿ ನವರಾತ್ರಿ ಪೂಜೆ, ಕುಟುಂಬ ಸಮೇತ ಪಾಲ್ಗೊಂಡ ಕ್ರಿಕೆಟಿಗ!

Published : Oct 22, 2023, 06:48 PM IST
ಪಾಕಿಸ್ತಾನ ಹಿಂದೂ ದೇಗುಲದಲ್ಲಿ ನವರಾತ್ರಿ ಪೂಜೆ, ಕುಟುಂಬ ಸಮೇತ ಪಾಲ್ಗೊಂಡ ಕ್ರಿಕೆಟಿಗ!

ಸಾರಾಂಶ

ಪಾಕಿಸ್ತಾನದ ಹಿಂದೂ ದೇಗುಲದಲ್ಲಿ ನವರಾತ್ರಿ ಆಚರಣೆ ನಡೆಯುತ್ತಿದೆ. ಐತಿಹಾಸಿಕ ದೇಗುಲದಲ್ಲಿ ನವರಾತ್ರಿ ಪೂಜೆ, ಗರ್ಬಾ ನೃತ್ಯದಲ್ಲೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಶ ಕನೇರಿಯಾ ಪಾಲ್ಗೊಂಡಿದ್ದಾರೆ. ಎಲ್ಲರ ಒಳಿತಿಗಾಗಿ ಜಗದಾಂಬೆಯನ್ನು ಪ್ರಾರ್ಥಿಸಿದ್ದೇನೆ ಎಂದಿದ್ದಾರೆ.

ಸಿಂಧ್(ಅ.22) ಪಾಕಿಸ್ತಾನ ವಿಭಜನೆಗೂ ಮೊದಲು ಹಲವು ಐತಿಹಾಸಿಕ ಹಿಂದೂ ದೇಗುಲಗಳು ಪಾಕ್ ನೆಲದಲ್ಲಿತ್ತು. ಆದರೆ ಪಾಕಿಸ್ತಾನ ರೂಪಗೊಂಡ ಬಳಿಕ ಪಾಕಿಸ್ತಾನದಲ್ಲಿರುವ ಬಹುತೇಕ ಹಿಂದೂ ದೇಗುಲಗಳು ಧ್ವಂಸಗೊಂಡಿದೆ. ಇದೀಗ ಅಳಿದು ಉಳಿದ ದೇವಸ್ಥಾನದಲ್ಲಿ ನವರಾತ್ರಿ ಹಬ್ಬ ಅದ್ಧೂರಿಯಾಗಿ ಆಚರಿಸಲಾಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಕುಟುಂಬ ಸಮೇತರಾಗಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇಷ್ಟೇ ಅಲ್ಲ ಗರ್ಬಾ ನೃತ್ಯದಲ್ಲೂ ಪಾಲ್ಗೊಂಡು ಜಗದಾಂಬೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

9 ದಿನಗಳ ನವರಾತ್ರಿ ಹಬ್ಬ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಪಾಕಿಸ್ತಾನದ ಐತಿಹಾಸಿಕ ಹಿಂದೂ ದೇಗುಲದಲ್ಲಿ ನವರಾತ್ರಿ ಪೂಜೆ ನಡೆಯುತ್ತಿದೆ. ಮಾ ದುರ್ಗೆಯ ಆರಾಧನೆ ಹಾಗೂ ಪೂಜಾ ಕಾರ್ಯಗಳು ನಡೆಯುತ್ತಿದೆ. ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಧಾನೀಶ್ ಕನೇರಿಯಾ ಕುಟುಂಬ ಸಮೇತ ನವರಾತ್ರಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪಾಕ್ ಕ್ರಿಕೆಟಿಗ, ಟ್ರೋಲ್ ಮಾಡಿದವರಿಗೆ ಕೊಟ್ಟ ಉತ್ತರ ವೈರಲ್!

ದೇವಸ್ಥಾನದಲ್ಲಿ ದುರ್ಗಾ ದೇವಿಯ ಪೂಜೆಯಲ್ಲಿ ಆರತಿ ಬೆಳಗಿದ ಧಾನೀಶ್ ಕನೇರಿಯಾ, ಭಜನೆ ಮೂಲಕ ದೇವರ ಸ್ಥುತಿ ಮಾಡಿದ್ದಾರೆ. ಇದಕ್ಕೂ ಮೊದಲು ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಪೂಜೆ ಹಾಗೂ ಗರ್ಬಾ ನೃತ್ಯದ ವಿಡಿಯೋಗಳನ್ನು ದಾನೀಶ್ ಕನೇರಿಯಾ ಹಂಚಿಕೊಂಡಿದ್ದಾರೆ.

 

ಪಾಕಿಸ್ತಾನ ಪರ ಆಡಿದ ಹಿಂದೂ ಕ್ರಿಕೆಟಿಗ ದಾನೀಶ್ ಕನೇರಿಯಾ ಭಾರತ ಕುರಿತು ವಿಶೇಷ ಒಲವು ಹಾಗೂ ಗೌರವ ಹೊಂದಿದ್ದಾರೆ. ಹಿಂದುತ್ವ, ಹಿಂದೂ ಆಚರಣೆಗಳ ಕುರಿತು ಟ್ವೀಟ್ ಮೂಲಕ ಬೆಂಬಲ ವ್ಯಕ್ತಪಡಿಸಿ ಭಾರತೀಯರಿಗೆ ಹತ್ತಿರವಾಗಿದ್ದಾರೆ. 

 

 

ಇದೀಗ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ ಧಾನೀಶ್ ಕನೇರಿಯಾ, ಎಲ್ಲರ ಒಳಿತಿಗಾಗಿ ಜಗದಾಂಬೆಯಲ್ಲಿ ಪಾರ್ಥಿಸಿದ್ದೇನೆ ಎಂದು ಧಾನೀಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ.

ಇಸ್ಲಾಂಗೆ ಮತಾಂತರಕ್ಕೆ ಅಫ್ರಿದಿ ಒತ್ತಡ: ಕನೇರಿಯಾ ಗಂಭೀರ ಆರೋಪ

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ ಕೆಲವು ಸಹ ಆಟಗಾರರು ಹಿಂದು ಎಂಬ ಕಾರಣಕ್ಕಾಗಿ ತನ್ನ ಜೊತೆ ಕೀಳಾಗಿ ಮತ್ತು ತುಚ್ಛವಾಗಿ ವರ್ತಿಸುತ್ತಿದ್ದರು. ಆದಾಗ್ಯೂ, ಸಹ ತಾನು ಎಂದಿಗೂ ಹಿಂದು ಧರ್ಮದಿಂದ ಮತಾಂತರ ಹೊಂದಬೇಕೆಂದು ಎಂದಿಗೂ ಅಂದುಕೊಳ್ಳಲಿಲ್ಲ ಎಂದು ಇತ್ತೀಚೆಗೆ ಕನೇರಿಯಾ ಹೇಳಿದ್ದರು. ಭಾರತದ ಪರವಾಗಿ ಟ್ವೀಟ್ ಮೂಲಕ ಹೆಚ್ಚು ಸಕ್ರಿಯವಾಗಿರುವ ಕನೇರಿಯಾಗೆ ಪಾಕಿಸ್ತಾನದ ಹಿಂದೂ ಹುಲಿ ಎಂದು ಹಲವು ಕಮೆಂಟ್ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!