Ind vs Zim: ಮೂರನೇ ಪಂದ್ಯದಲ್ಲೂ ಟಾಸ್‌ ಗೆದ್ದ ಕೆಎಲ್‌ ರಾಹುಲ್‌, ಬ್ಯಾಟಿಂಗ್‌ ಆಯ್ಕೆ

By Sharath SharmaFirst Published Aug 22, 2022, 12:33 PM IST
Highlights

India vs Zimbave 3rd ODI: ಭಾರತ ಮತ್ತು ಜಿಂಬಾಬ್ವೆ ನಡುವಿನ ಕಡೆಯ ಏಕ ದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲೆರಡು ಪಂದ್ಯದಲ್ಲಿ ಜಿಂಬಾಬ್ವೆ ಸಾಧಾರಣ ಮೊತ್ತ ಕಲೆ ಹಾಕಿತ್ತು. ಇಂದು ಭಾರತ ಮೊದಲು ಆಡುತ್ತಿದ್ದು ಬೃಹತ್‌ ಮೊತ್ತ ದಾಖಲಿಸುವ ಸಾಧ್ಯತೆಯಿದೆ.

ಹರಾರೆ(ಆ.20): ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಕೆ ಎಲ್ ರಾಹುಲ್ ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತ ತಂಡದಲ್ಲಿ ಒಂದು ಹಾಗೂ ಜಿಂಬಾಬ್ವೆ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಗೆಲುವು ಮತ್ತು ಎರಡನೇ ಪಂದ್ಯದಲ್ಲಿ ಐದು ವಿಕೆಟ್‌ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ, ಇಂದಿನ ಪಂದ್ಯವನ್ನು ಗೆದ್ದು ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳಲು ಎದುರು ನೋಡುತ್ತಿದೆ.

ಇಲ್ಲಿನ ಹರಾರೆ ಕ್ರಿಕೆಟ್ ಕ್ಲಬ್‌ನಲ್ಲಿ ಆರಂಭವಾದ ಮೂರನೇ ಏಕದಿನ ಪಂದ್ಯದಲ್ಲಿ ದೀಪಕ್ ಚಹರ್‌ ಮತ್ತು ಆವೇಶ್‌ ಖಾನ್‌ ತಂಡಕ್ಕೆ ವಾಪಸಾಗಿದ್ದಾರೆ. ಕನ್ನಡಿಗ ಪ್ರಸಿದ್‌ ಕೃಷ್ಣ ಮತ್ತು ಆರ್‌ಸಿಬಿ ಆಟಗಾರ ಮೊಹಮ್ಮದ್‌ ಸಿರಾಜ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದನ್ನು ಹೊರತುಪಡಿಸಿ ಯಾವುದೇ ಬದಲಾವಣೆಯನ್ನೂ ಟೀಮ್‌ ಇಂಡಿಯಾ ಮಾಡಿಲ್ಲ. ಇನ್ನು ಜಿಂಬಾಬ್ವೆ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ರಿಚರ್ಡ್‌ ಎಂಗರ್ವ ಮತ್ತು ಮುನ್ಯೊಂಗ ತಂಡ ಕೂಡಿಕೊಂಡಿದ್ದಾರೆ.

ಇದನ್ನೂ ಓದಿ: Ind vs ZIM ಏಕದಿನ ಸರಣಿ ಜಯದ ವಿಶ್ವಾಸದಲ್ಲಿ ಟೀಂ ಇಂಡಿಯಾ

ಮೊದಲ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಮೊದಲು ಬ್ಯಾಟ್ ಮಾಡಿ ಕೇವಲ 189 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಸಾದಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ 10 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತ್ತು. ಶಿಖರ್ ಧವನ್ ಹಾಗೂ ಶುಭ್‌ಮನ್ ಗಿಲ್‌ ಆಕರ್ಷಕ ಅರ್ಧಶತಕ ಬಾರಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಹಾಗೂ ಶುಭ್‌ಮನ್ ಗಿಲ್ ಅವರೇ ಇನಿಂಗ್ಸ್ ಆರಂಭಿಸುತ್ತಾರೋ ಅಥವಾ ಕೆ ಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಾರೋ ಎನ್ನುವ ಕುತೂಹಲ ಜೋರಾತ್ತು. ಅದರಂತೆ ಎರಡನೇ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್‌ ರಾಹುಲ್‌ ಕೇವಲ ಒಂದು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಮೂರನೇ ಪಂದ್ಯದಲ್ಲಾದರೂ ಕೆಎಲ್‌ ರಾಹುಲ್‌ ಲಯ ಕಂಡುಕೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕು. ಮುಂಬರುವ ಏಷ್ಯಾ ಕಪ್‌ ದೃಷ್ಟಿಯಿಂದ ಕೆಎಲ್‌ ರಾಹುಲ್‌ ಲಯಕ್ಕೆ ವಾಪಸಾಗುವುದು ತಂಡಕ್ಕೆ ಸಹಕಾರಿಯಾಗಲಿದೆ. 

ಭಾರತ: ಶಿಖರ್ ಧವನ್‌, ಶುಭ್‌ಮನ್‌ ಗಿಲ್‌, ಇಶಾನ್ ಕಿಶನ್‌, ಕೆ ಎಲ್ ರಾಹುಲ್‌(ನಾಯಕ), ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌, ಅಕ್ಷರ್‌ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್‌ ಯಾದವ್, ದೀಪಕ್‌ ಚಹರ್‌, ಆವೇಶ್‌ ಖಾನ್‌.

ಇದನ್ನೂ ಓದಿ: ಶಾರ್ದೂಲ್ ಠಾಕೂರ್ ಮಾರಕ ದಾಳಿ; ಸಾಧಾರಣ ಮೊತ್ತಕ್ಕೆ ಜಿಂಬಾಬ್ವೆ ಆಲೌಟ್

ಜಿಂಬಾಬ್ವೆ: ಇನೊಸೆಂಟ್‌,  ತಕುವಾನ್ಸೆ ಕೈಟಾನೊ, ಮಧೆವೆರೆ, ಸೀನ್ ವಿಲಿಯಮ್ಸ್‌, ಸಿಕಂದರ್ ರಾಜಾ, ಚಕಾಬ್ವ(ನಾಯಕ), ರಿಯಾನ್ ಬರ್ಲ್‌, ಜಾಂಗ್ವೆ, ಬ್ರಾಡ್ ಎವಾನ್ಸ್‌, ಮುನ್ಯೊಂಗ, ರಿಚರ್ಡ್‌ ಎಂಗರ್ವ.

ಪಂದ್ಯ ಆರಂಭ: ಮಧ್ಯಾಹ್ನ 12.45ಕ್ಕೆ
ನೇರ ಪ್ರಸಾರ: ಸೋನಿ ಟೆನ್‌

click me!