
ಮುಂಬೈ(ನ.05): ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೋಮವಾರ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದರು.ಭಾರತ ತಂಡಕ್ಕೆ ಉತ್ತಮ ಆಯ್ಕೆಗಾರರ ಅಗತ್ಯವಿದೆ ಎಂದು ಯುವಿ ಅಭಿಪ್ರಾಯಿಸಿದರು. ಈ ಮೊದಲು ನಿವೃತ್ತಿ ಹೇಳುವಾಗಲೂ ಆಯ್ಕೆ ಸಮಿತಿ ವಿರುದ್ಧ ಯುವಿ ಕಿಡಿಕಾರಿದ್ದರು. ನಾನು ಯೋ ಯೋ ಟೆಸ್ಟ್ ಉತ್ತೀರ್ಣರಾದರೂ ಆಯ್ಕೆ ಸಮಿತಿ ನನಗೆ ಆಡಲು ಅವಕಾಶ ನೀಡಿರಲಿಲ್ಲ ಎನ್ನುವ ಕಟು ಸತ್ಯವನ್ನು ಹೊರಹಾಕಿದ್ದರು.
ಅದೇ ಸ್ಟೈಲ್, ಅದೇ ಸಿಕ್ಸರ್; ಈತ ಟೀಂ ಇಂಡಿಯಾದ ಜ್ಯೂ.ಯುವರಾಜ್ ಸಿಂಗ್!
‘ಆಯ್ಕೆಗಾರರ ಕೆಲಸ ಸುಲಭವಲ್ಲ. ಆಧುನಿಕ ಕ್ರಿಕೆಟ್ನ ಗುಣಮಟ್ಟಕ್ಕೆ ಸರಿಹೊಂದುವ ಆಯ್ಕೆಗಾರರು ಬೇಕಿದ್ದಾರೆ. ಬಿಸಿಸಿಐ ಉತ್ತಮ ವ್ಯಕ್ತಿಗಳನ್ನು ನೇಮಿಸಬೇಕಿದೆ’ ಎಂದು ಯುವರಾಜ್ ಹೇಳಿದರು. ‘ಎಷ್ಟೋ ಬಾರಿ ಆಟಗಾರರು ಆಡಲು ಸಾಧ್ಯವಿಲ್ಲದಿದ್ದರೂ, ತಂಡದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದೇವೆ ಎನ್ನುವ ಭಯದೊಂದಿಗೆ ಆಡುತ್ತಾರೆ. ಬಿಸಿಸಿಐ ಅಧ್ಯಕ್ಷ ಗಂಗೂಲಿ, ಆಟಗಾರರಲ್ಲಿ ಭಯ ಹೋಗಲಾಡಿಸಲಿದ್ದಾರೆ ಎನ್ನುವ ಭರವಸೆ ಇದೆ’ ಎಂದು ಯುವಿ ಹೇಳಿದರು.
ಹೊಸ ತಂಡ ಕೂಡಿಕೊಂಡ ಯುವಿ; ಅಬ್ಬರಿಸಲು ಸಿಕ್ಸರ್ ಕಿಂಗ್ ರೆಡಿ
ಇನ್ನು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ಆಯ್ಕೆ ಎಂಬಂತೆ ವಿಜಯ್ ಶಂಕರ್ ಆಯ್ಕೆ ಹಾಗೂ ಗಾಯದಿಂದ ಚೇತರಿಸಿಕೊಂಡರೂ ತಂಡದಲ್ಲಿ ಅವಕಾಶ ನೀಡದೇ ಇರುವುದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯುವಿ, ಕೇವಲ ಮೂರು-ನಾಲ್ಕು ಪಂದ್ಯಗಳಲ್ಲಿ ಅವಕಾಶ ನೀಡಿ ಆಮೇಲೆ ಕಡೆಗಣಿಸುವುದು ಸರಿಯಲ್ಲ. ಮೂರ್ನಾಲ್ಕು ಪಂದ್ಯದ ಪ್ರದರ್ಶನದ ಆದಾರದಲ್ಲಿ ಆಟಗಾರನ ಸಾಮರ್ಥ್ಯ ಅಳೆಯುವುದು ಸರಿಯಲ್ಲ, ಇನ್ನಷ್ಟು ಅವಕಾಶ ಬೀಡಬೇಕಿತ್ತು ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವರ್ಷದ ಜೂನ್’ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ ಯುವರಾಜ್ ಸಿಂಗ್ ಇದೀಗ ಅಬುದಾಬಿಯಲ್ಲಿ ನಡೆಯಲಿರುವ ಟಿ10 ಲೀಗ್’ನಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದಾರೆ. ಇದೇ ನವೆಂಬರ್ 14ರಿಂದ ಟಿ10 ಟೂರ್ನಿಯು ಆರಂಭವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.