
ಬೆಂಗಳೂರು(ಮೇ.19): ಚೆಂಡಿನ ಹೊಳಪನ್ನು ಕಾಪಾಡಲು ಬೌಲರ್ಗಳು ಎಂಜಲು ಬಳಸುವುದನ್ನು ನೋಡಿರುತ್ತೇನೆ. ಕರೋನಾ ಭೀತಿಯಿಂದಾಗಿ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸುವಂತೆ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಶಿಫಾರಸು ಮಾಡಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸೇರಿದ ಸಮಿತಿ, ಮುಂಬರುವ ದಿನಗಳಲ್ಲಿ ಎಂಜಲು ಬಳಕೆ ನಿಷೇಧಕ್ಕೆ ಬರವಂತೆ ಶಿಫಾರಸು ಮಾಡಿದೆ. ಆದರೆ ಇದೇ ವೇಳೆ ಬೆವರು ಹಚ್ಚುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಅಂದರೆ ಬೌಲರ್ಗಳು ಚೆಂಡಿಗೆ ಬೆವರನ್ನು ಹಚ್ಚಿ ಹೊಳಪನ್ನು ಕಾಯ್ದುಕೊಳ್ಳಬಹುದಾಗಿದೆ. ಇನ್ನು ಈ ಸಮಿತಿಯು ಪ್ರತಿ ಇನಿಂಗ್ಸ್ನಲ್ಲಿ ಡಿಆರ್ಎಸ್(ಡಿಶಿಷನ್ ರಿವ್ಯೂ ಸಿಸ್ಟಂ) ಹೆಚ್ಚು ಮಾಡುವುದಕ್ಕೂ ಶಿಫಾರಸು ಮಾಡಿದೆ. ಪ್ರಸ್ತುತ ಒಂದು ಇನಿಂಗ್ಸ್ನಲ್ಲಿ ಎರಡು ಡಿಆರ್ಎಸ್ ತೆಗೆದುಕೊಳ್ಳಲು ಅವಕಾಶವಿದೆ.
ಕ್ರಿಕೆಟ್ ಚೆಂಡಿನ ಹೊಳಪು ಕಾಪಾಡಲು ಎಂಜಲಿನ ಬದಲು ಮೇಣ ಬಳಕೆ?
ಈ ಸಭೆಯ ಬಳಿಕ ಅನಿಲ್ ಕುಂಬ್ಳೆ ನಾವೀಗ ಸಂಕಷ್ಟದ ಸಮಯದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಕ್ರಿಕೆಟ್ ಸೊಬಗನ್ನು ಕಾಪಾಡುವ ಹಾಗೆಯೇ ಸುರಕ್ಷಿತವಾಗಿ ಕ್ರೀಡಾಕೂಟ ಆರಂಭಕ್ಕೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ಇಂದು ಒಂದಷ್ಟು ಶಿಫಾರಸುಗಳನ್ನು ಮಾಡಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೆಂಡಿಗೆ ಎಂಜಲು ಹಚ್ಚುವ ಬಗ್ಗೆ ಬೌಲರ್ಗಳಿಗೆ ಶುರುವಾಯ್ತು ಚಿಂತೆ..!
2018ರಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಕೇಪ್ಟೌನ್ ಟೆಸ್ಟ್ ಪಂದ್ಯ ಬಾಲ್ ಟ್ಯಾಂಪರಿಂಗ್ಗೆ ಸಾಕ್ಷಿಯಾಗಿತ್ತು. ಇದಾದ ಬಳಿಕ ಐಸಿಸಿ ಚೆಂಡಿನ ಬಗ್ಗೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.