
ರಾಂಚಿ[ನ.02]: ಆರಂಭಿಕರಾದ ಮಯಾಂಕ್ ಅಗರ್ವಾಲ್ (120) ಹಾಗೂ ಶುಭ್ಮನ್ ಗಿಲ್ (143) ಅವರ ಶತಕದ ನೆರವಿನಿಂದ ಭಾರತ ‘ಸಿ’, ಭಾರತ ‘ಎ’ ವಿರುದ್ಧ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 232 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಫೈನಲ್ ಹಾದಿಯನ್ನು ಸುಗಮವಾಗಿಸಿಕೊಂಡಿದೆ.
"
ಬ್ಯಾಟ್ ಬಿಟ್ಟು ಸೌಟು ಹಿಡಿದ ಸ್ಮೃತಿ ಮಂಧನಾ
ನ. 4 ರಂದು ನಡೆಯುವ ಫೈನಲ್ನಲ್ಲಿ ಭಾರತ ‘ಬಿ’ ಹಾಗೂ ‘ಸಿ’ ತಂಡಗಳು ಎದುರಾಗುವುದು ಖಚಿತವಾಗಿದೆ. ಈ ಎರಡೂ ತಂಡಗಳು ತಲಾ 1 ಪಂದ್ಯವನ್ನು ಗೆದ್ದಿದ್ದು, ಪಟ್ಟಿಯಲ್ಲಿ ತಲಾ 4 ಅಂಕಗಳಿಂದ ಮೊದಲ 2 ಸ್ಥಾನ ಪಡೆದಿವೆ. ಆಡಿದ ಎರಡೂ ಪಂದ್ಯಗಳನ್ನು ಸೋತ ಭಾರತ ‘ಎ’ ಟೂರ್ನಿಯಿಂದ ಹೊರಬಿತ್ತು.
"
ದೇವಧರ್ ಟೂರ್ನಿ: ಮಯಾಂಕ್ ಸೇರಿ 3 ಕನ್ನಡಿಗರಿಗೆ ಸ್ಥಾನ
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ‘ಸಿ’ 50 ಓವರಲ್ಲಿ 3 ವಿಕೆಟ್ ನಷ್ಟಕ್ಕೆ 366 ರನ್ಗಳ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿ ಬೆನ್ನತ್ತಿದ ಭಾರತ ‘ಎ’ 29.5 ಓವರಲ್ಲಿ 134 ರನ್ಗೆ ಆಲೌಟ್ ಆಯಿತು. ಸ್ಪಿನ್ನರ್ ಜಲಜ್ ಸಕ್ಸೇನಾ 41 ರನ್ಗೆ 7 ವಿಕೆಟ್ ಕಬಳಿಸಿದರು.
ಸ್ಕೋರ್:
ಭಾರತ ‘ಸಿ’ 366/3
ಭಾರತ ‘ಎ’ 134/10
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.