ಭಾರತ ಕ್ರಿಕೆಟ್ ತಂಡಕ್ಕೆ ಆ್ಯಡಿ​ಡಾಸ್‌ ಕಿಟ್‌ ಪ್ರಾಯೋಜಕತ್ವ?

By Naveen KodaseFirst Published Feb 22, 2023, 12:14 PM IST
Highlights

ಬಿಸಿಸಿಐ ಮತ್ತೊಂದು ಬಹು​ಕೋಟಿ ಒಪ್ಪಂದಕ್ಕೆ ರೆಡಿ
ಪ್ರತಿಷ್ಠಿತ ಆ್ಯಡಿ​ಡಾಸ್‌ ಸಂಸ್ಥೆ​ಯೊಂದಿಗೆ ಕಿಟ್‌ ಪ್ರಾಯೋ​ಜ​ಕ​ತ್ವ ಒಪ್ಪಂದಕ್ಕೆ ಸಹಿ?
ಬಿಸಿಸಿಐ ಮುಂದಿನ ತಿಂಗಳು ಅಧಿಕೃತ ಮಾಹಿತಿ ಪ್ರಕಟಣೆ?

ನವ​ದೆ​ಹ​ಲಿ(ಫೆ.22): ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡ​ಳಿ​(​ಬಿ​ಸಿ​ಸಿ​ಐ​) ಮತ್ತೊಂದು ಬಹು​ಕೋಟಿ ಒಪ್ಪಂದಕ್ಕೆ ರೆಡಿ​ಯಾ​ಗಿದ್ದು, ಶೀಘ್ರ​ದಲ್ಲೇ ಪ್ರತಿಷ್ಠಿತ ಆ್ಯಡಿ​ಡಾಸ್‌ ಸಂಸ್ಥೆ​ಯೊಂದಿಗೆ ಕಿಟ್‌ ಪ್ರಾಯೋ​ಜ​ಕ​ತ್ವ ಒಪ್ಪಂದಕ್ಕೆ ಸಹಿ ಹಾಕ​ಲಿದೆ ಎಂದು ರಾಷ್ಟ್ರೀಯ ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿ​ದೆ.

ಆ್ಯಡಿಡಾಸ್‌ ಜೊತೆಗಿನ ಒಪ್ಪಂದದ ಬಗ್ಗೆ ಬಿಸಿಸಿಐ ಮುಂದಿನ ತಿಂಗಳು ಅಧಿಕೃತ ಮಾಹಿತಿ ಪ್ರಕಟಿಸಲಿದ್ದು, ಜೂನ್‌ನಿಂದ ಒಪ್ಪಂದ ಚಾಲ್ತಿಗೆ ಬರಲಿದೆ. 2028ರ ವರೆಗೂ ಅಂದರೆ 5 ವರ್ಷ ಪ್ರಾಯೋಜಕತ್ವ ಚಾಲ್ತಿಯಲ್ಲಿ ಇರಲಿದೆ ಎಂದು ತಿಳಿದುಬಂದಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಆಡುವುದು ಬಹುತೇಕ ಖಚಿತವಾಗಿದ್ದು, ಆ ಪಂದ್ಯದಲ್ಲಿ ಭಾರತ ಮೊದಲ ಬಾರಿಗೆ ಆ್ಯಡಿಡಾಸ್‌ ಜೆರ್ಸಿ ತೊಡಬಹುದು ಎನ್ನಲಾಗಿದೆ.

2006ರಿಂದ 2020ರ ವರೆಗೂ ಪ್ರತಿಷ್ಠಿತ ನೈಕಿ ಸಂಸ್ಥೆ ಭಾರತದ ಜೆರ್ಸಿ ಪ್ರಾಯೋಜಕತ್ವ ಹೊಂದಿತ್ತು. ಬಳಿಕ ಎಂಪಿಎಲ್‌ ಸ್ಪೋಟ್ಸ್‌ರ್‍ ಸಂಸ್ಥೆಯು ಪ್ರತಿ ಪಂದ್ಯಕ್ಕೆ 65 ಲಕ್ಷ ರುಪಾಯಿ ಪಾವತಿಸುತ್ತಿತ್ತು. ಆದರೆ ಅವಧಿ ಮುಗಿಯುವ ಮೊದಲೇ ಪ್ರಾಯೋಜಕತ್ವ ಹಕ್ಕನ್ನು ಕಿಲ್ಲರ್‌ ಜೀನ್ಸ್‌ ಸಂಸ್ಥೆಗೆ ಹಸ್ತಾಂತರಿಸಿತ್ತು.

ಭಾರ​ತ​ ಕ್ರಿಕೆಟ್‌ ತಂಡಕ್ಕೆ ಆ್ಯಡಿಡಾಸ್‌ ಪ್ರಾಯೋಜಕತ್ವ?

ನವ​ದೆ​ಹ​ಲಿ: ಆಸ್ಪ್ರೇ​ಲಿಯಾ ವಿರು​ದ್ಧದ 2ನೇ ಟೆಸ್ಟ್‌ ಪಂದ್ಯ​ವನ್ನು ಕೇವಲ 3 ದಿನ​ಗ​ಳೊ​ಳಗೆ ಜಯಿ​ಸಿದ್ದ ಭಾರತ ಕ್ರಿಕೆಟ್‌ ತಂಡಕ್ಕೆ ಹೆಚ್ಚು​ವರಿ ವಿಶ್ರಾಂತಿ ಲಭಿ​ಸಿದ್ದು, ಆಟ​ಗಾ​ರ​ರಿಗೆ ಬಿಸಿ​ಸಿಐ 6 ದಿನಗಳ ಕಾಲ ರಜೆ ನೀಡಿದೆ. ಸತತ ಸರ​ಣಿ​ಗ​ಳಿಂದ ದಣಿದಿರುವ ಆಟಗಾರರಿಗೆ ಈ ಬಿಡುವು ಮಹ​ತ್ವ​ದ್ದೆ​ನಿ​ಸಿ​ದೆ.

ಫೆಬ್ರವರಿ 17ಕ್ಕೆ ಆರಂಭ​ಗೊಂಡಿ​ದ್ದ 2ನೇ ಪಂದ್ಯ ಮೂರೇ ದಿನಕ್ಕೆ ಕೊನೆ​ಗೊಂಡಿತ್ತು. ಬಳಿಕ ಆಟ​ಗಾ​ರರು ನವ​ದೆ​ಹ​ಲಿಯಲ್ಲಿರು​ವ ಪ್ರಧಾನಮಂತ್ರಿ ಮ್ಯೂಸಿ​ಯಂಗೆ ತೆರ​ಳಿದ್ದರು. ಸದ್ಯ ಕೆಲ ಆಟ​ಗಾ​ರರು ತಮ್ಮ ಮನೆಗಳಿಗೆ ತೆರಳಿದ್ದು, ಇನ್ನೂ ಕೆಲವರು ಪ್ರವಾಸಕ್ಕೆ ಹೋಗಿದ್ದಾರೆ. 3ನೇ ಟೆಸ್ಟ್‌ ಪಂದ್ಯ ಮಾ.1ರಂದು ಆರಂಭ​ಗೊ​ಳ್ಳ​ಲಿದ್ದು, ಫೆ.25ರಂದು ಆಟ​ಗಾ​ರರು ಇಂದೋ​ರ್‌​ನಲ್ಲಿ ಮತ್ತೆ ತಂಡ​ವನ್ನು ಕೂಡಿಕೊಂಡು ಅಭ್ಯಾಸ ಆರಂಭಿ​ಸ​ಲಿ​ದ್ದಾರೆ.

'ತವರಿನಲ್ಲಿ ಟೀಂ ಇಂಡಿಯಾ ಸೋಲಿಸೋದು ಸುಲಭವಲ್ಲ' ರೋಹಿತ್ ಪಡೆ ಕೊಂಡಾಡಿದ ಪಾಕ್‌ ಕ್ರಿಕೆಟಿಗ

ಸರ​ಣಿಯ 4ನೇ ಟೆಸ್ಟ್‌ ಪಂದ್ಯ ಮಾ.9ರಿಂದ 13ರ ವರೆಗೆ ನಡೆ​ಯ​ಲಿದೆ. 3 ಪಂದ್ಯ​ಗಳ ಏಕ​ದಿನ ಸರಣಿ ಮಾ.17ರಿಂದ 22ರ ವರೆಗೆ ನಿಗ​ದಿ​ಯಾ​ಗಿದೆ. ಬಳಿಕ ಕೇವಲ 9 ದಿನ​ಗ​ಳಲ್ಲೇ ಐಪಿ​ಎಲ್‌ ಆರಂಭ​ವಾ​ಗ​ಲಿರುವ ಕಾರಣ ಆಟ​ಗಾ​ರ​ರಿಗೆ ಹೆಚ್ಚಿನ ವಿಶ್ರಾಂತಿ ಸಿಗು​ವು​ದಿಲ್ಲ. ಜೂ.7ರಿಂದ ಟೆಸ್ಟ್‌ ವಿಶ್ವ​ಕಪ್‌ ಫೈನಲ್‌ ಕೂಡಾ ನಡೆ​ಯ​ಲಿದ್ದು, ಭಾರತ ಫೈನ​ಲ್‌​ಗೇ​ರಿ​ದರೆ ಆಟ​ಗಾ​ರರು ಐಪಿ​ಎಲ್‌ ಬೆನ್ನಲ್ಲೇ ಮತ್ತೆ ಮೈದಾ​ನಕ್ಕೆ ಮರ​ಳ​ಲಿ​ದ್ದಾ​ರೆ. ಹೀಗಾಗಿ ಟೆಸ್ಟ್‌ ಸರ​ಣಿ ನಡು​ವೆಯೇ ಬಿಸಿ​ಸಿಐ ಆಟ​ಗಾ​ರ​ರಿಗೆ ಬಿಡುವು ನೀಡಿದೆ.

ತಿರು​ಪ​ತಿಗೆ ಸೂರ್ಯಕುಮಾರ್ ಯಾದವ್  ಭೇಟಿ: ಭಾರತದ ಬ್ಯಾಟರ್‌ ಸೂರ‍್ಯ​ಕು​ಮಾರ್‌ ಯಾದವ್‌ ಅವರು ತಮ್ಮ ಪತ್ನಿ ದೇವಿಶಾ ಜೊತೆ ಮಂಗ​ಳ​ವಾರ ತಿರು​ಪ​ತಿಯ ತಿರುಮಲ ದೇವಾಲಯಕ್ಕೆ ಭೇಟಿ ನೀಡಿ​ ದೇವರ ದರ್ಶನ ಪಡೆದರು.

ಆಸೀ​ಸ್‌ಗೆ ಸಲಹೆ ನೀಡ​ಲು ಸಿದ್ಧ: ಮ್ಯಾಥ್ಯೂ ಹೇಡನ್‌ ಪ್ರಸ್ತಾ​ಪ:

ನವದೆಹಲಿ: ಸಂಕಷ್ಟದಲ್ಲಿರುವ ಆಸ್ಪ್ರೇಲಿಯಾ ತಂಡಕ್ಕೆ ಉಚಿತವಾಗಿ ಸಲಹೆ, ಮಾರ್ಗದರ್ಶನ ನೀಡುವುದಾಗಿ ಆಸೀಸ್‌ ಮಾಜಿ ಆರಂಭಿಕ ಬ್ಯಾಟರ್‌ ಮ್ಯಾಥ್ಯೂ ಹೇಡನ್‌ ತಿಳಿ​ಸಿ​ದ್ದಾರೆ. ಆಸೀಸ್‌ ಆಟ​ಗಾ​ರರು ಭಾರ​ತ​ದಲ್ಲಿ ಸ್ಪಿನ್‌ ದಾಳಿ​ಯನ್ನು ಸಮ​ರ್ಥ​ವಾಗಿ ಎದು​ರಿ​ಸಲು ವಿಫ​ಲ​ ರಾ​ಗು​ತ್ತಿ​ದ್ದಾರೆ. ಆಟ​ಗಾ​ರ​ರಿಗೆ ಈ ಬಗ್ಗೆ ಸಲಹೆ ಬೇಕಿ​ದ್ದರೆ ಕ್ರಿಕೆಟ್‌ ಆಸ್ಪ್ರೇ​ಲಿಯಾ ನನ್ನನ್ನು ಸಂಪ​ರ್ಕಿ​ಸ​ಬ​ಹುದು. ಯಾವುದೇ ಕ್ಷಣ​ದಲ್ಲಿ ಬೇಕಾ​ದರೂ ಉಚಿ​ತ​ವಾಗಿ ಆಟ​ಗಾ​ರ​ರಿಗೆ ಮಾರ್ಗ​ದ​ರ್ಶನ ನೀಡಲು ನಾನು ಸಿದ್ಧ’ ಎಂದಿದ್ದಾರೆ.

click me!