ಗಂಡ-ಮಕ್ಕಳೊಂದಿಗೆ ಪುಷ್ಪ-2 ನೋಡಲು ಬಂದಿದ್ದ ಮಹಿಳೆ ಕಾಲ್ತುಳಿತಕ್ಕೆ ಸಾವು; ಪುತ್ರ ಗಂಭೀರ

Published : Dec 05, 2024, 10:21 AM ISTUpdated : Dec 05, 2024, 11:27 AM IST
 ಗಂಡ-ಮಕ್ಕಳೊಂದಿಗೆ ಪುಷ್ಪ-2 ನೋಡಲು ಬಂದಿದ್ದ ಮಹಿಳೆ ಕಾಲ್ತುಳಿತಕ್ಕೆ ಸಾವು; ಪುತ್ರ ಗಂಭೀರ

ಸಾರಾಂಶ

ಹೈದರಾಬಾದ್‌ನಲ್ಲಿ ಪುಷ್ಪ 2 ಚಿತ್ರ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ತನ್ನ ಗಂಡ ಮತ್ತು ಮಕ್ಕಳೊಂದಿಗೆ ಚಿತ್ರಮಂದಿರಕ್ಕೆ ಬಂದಿದ್ದರು.

ಗಂಡ-ಮಕ್ಕಳೊಂದಿಗೆ ಪುಷ್ಪ-2 ನೋಡಲು ಬಂದಿದ್ದ ಮಹಿಳೆ ಕಾಲ್ತುಳಿತಕ್ಕೆ ಸಾವು; ಪುತ್ರ ಗಂಭೀರ

ಹೈದರಾಬಾದ್‌: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಚಿತ್ರ ವೀಕ್ಷಿಸಲು ಕುಟುಂಬ ಸಮೇತ ಥಿಯೇಟರ್ ಗೆ ತೆರಳಿದ್ದ ಅಭಿಮಾನಿಯೊಬ್ಬರು ಗುಂಪಿನಲ್ಲಿ ಸಿಲುಕಿದ ಪರಿಣಾಮ ಮೃತರಾಗಿದ್ದಾರೆ.  ಪುಷ್ಪ 2 ರೂ. ಭಾರೀ ನಿರೀಕ್ಷೆಯ ನಡುವೆ ಇಂದು ಬಿಡುಗಡೆಯಾಗಿದೆ. ಚಿತ್ರದ ಬಿಡುಗಡೆಗೂ ಮುನ್ನವೇ ಥಿಯೇಟ್ರಿಕಲ್ ರೈಟ್ಸ್‌ಗಾಗಿ 1000 ಕೋಟಿ ರೂ.ವರೆಗೆ ಕಲೆಕ್ಷನ್ ಮಾಡಿದೆ. ಪುಷ್ಪ 2 ಇಂದು ಡಿಸೆಂಬರ್ 5 ರಂದು ಬಿಡುಗಡೆಯಾಗಿದ್ದು, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಪ್ರದರ್ಶನ ಕಾಣುತ್ತಿದೆ. 

ತಮಿಳಿನಲ್ಲಿ ಇದುವರೆಗೆ ಯಾವುದೇ ದೊಡ್ಡ ಚಿತ್ರ ಇಲ್ಲದಿದ್ದರೂ ಪುಷ್ಪ 2 ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ನಿರೀಕ್ಷೆ ಹುಟ್ಟಿಸಿದ್ದ ಕಂಗುವಾ ವೀಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದ್ದರಿಂದ ಜನರು ಪುಷ್ಪ 2  ಬಿಡುಗಡೆಗಾಗಿ ಕಾಯುತ್ತಿದ್ದರು. ಕರ್ನಾಟಕದಲ್ಲಿ ಪುಷ್ಪ-2 ಬಿಡುಗಡೆಯಾಗಿದೆ.  2021ರಲ್ಲಿ ಪುಷ್ಪ ಚಿತ್ರದ ಮೊದಲ ಭಾಗ ಬಿಡುಗಡೆಯಾಗಿತ್ತು. ಇದೀಗ ಮೂರು  ವರ್ಷಗಳ ನಂತ್ರ ಮುಂದುವರಿದ ಎರಡನೇ ಭಾಗ ಬಿಡುಗಡೆಯಾಗಿದೆ. ಪುಷ್ಪ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಬೇರಾವ ಸಿನಿಮಾಗಳನ್ನು ಸಹ ಒಪ್ಪಿಕೊಂಡಿಲ್ಲ. ಈ ದಿನಕ್ಕಾಗಿ ಕಾಯುತ್ತಿದ್ದರು.

ಇದನ್ನೂ ಓದಿ: ಪುಷ್ಪಾ 2 ಚಿತ್ರದಿಂದ ಷೇರು ಮಾರುಕಟ್ಟೆಯಲ್ಲಿ ಹಂಗಾಮ, ಬರೋಬ್ಬರಿ 426 ಕೋಟಿ ರೂ ಏರಿಕೆ!

ಪುಷ್ಪ 2 ಮಾಫಿಯಾ ಕಿಂಗ್‌ಪಿನ್ ಪುಷ್ಪಾ ರಾಜ್ (ಅಲ್ಲು ಅರ್ಜುನ್) ಮತ್ತು ಪೊಲೀಸ್ ಅಧಿಕಾರಿ ಬನ್ವರ್ ಸಿಂಗ್ ಶೇಖಾವತ್ ನಡುವಿನ ತೀವ್ರವಾದ ದೃಶ್ಯಗಳ ಸುತ್ತ ಸುತ್ತುತ್ತದೆ. ಹೀಗಿರುವಾಗಲೇ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಮುಂಜಾನೆ ಶೋ ವೀಕ್ಷಿಸಲು ಬಂದಿದ್ದ ಅಭಿಮಾನಿಯೊಬ್ಬರು ಗುಂಪಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ಮೃತ ರೇವತಿ (39) ಹೈದರಾಬಾದ್‌ನ ದಿಲ್‌ಸುಖ್ ನಗರದವರು . ಪತಿ ಭಾಸ್ಕರ್ ಮತ್ತು ಮಕ್ಕಳಾದ ತೇಜ್ (9) ಮತ್ತು ಸಾನ್ವಿ (7) ಅವರೊಂದಿಗೆ ಆರ್‌ಟಿಸಿ ರಸ್ತೆಯ ಸಂಧ್ಯಾ 70 ಎಂಎಂ ಥಿಯೇಟರ್‌ನಲ್ಲಿ ಪುಷ್ಪ 2 ವೀಕ್ಷಿಸಲು ಬಂದಿದ್ದರು. ಆದರೆ ಅಭಿಮಾನಿಗಳು ಈಗಾಗಲೇ ಥಿಯೇಟರ್ ಮುಂದೆ ಕಾಯುತ್ತಿದ್ದಾಗ, ಅವರು ಗುಂಪಿನಲ್ಲಿ ಸಿಲುಕಿ ಕಾಲ್ತುಳಿತಕ್ಕೆ ಮೃತರಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪುಷ್ಪ 2 ಸಿನಿಮಾ ಹೇಗಿದೆ? ಫಿಲ್ಮ್ ನೋಡಿದ ನೆಟ್ಟಿಗರು ಏನಂದ್ರು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!
ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!