ಟ್ರೋಲ್‌ಗಳಿಗೆ ಹೆದರಿದ್ರಾ? 'ಆದಿಪುರುಷ್' ಪ್ರಮೋಷನ್‌ನಿಂದ ದೂರಸರಿದಿದ್ದೇಕೆ ಸೈಫ್?

By Shruthi KrishnaFirst Published Jun 7, 2023, 11:22 AM IST
Highlights

ಟ್ರೋಲ್‌ಗಳಿಗೆ ಹೆದರಿತಾ ಸಿನಿಮಾತಂಡ. 'ಆದಿಪುರುಷ್' ಪ್ರಮೋಷನ್‌ನಿಂದ ಸೈಫ್ ಅಲಿ ಖಾನ್ ದೂರ ಇರೋದೇಕೆ ಎನ್ನವ ಚರ್ಚೆ ಪ್ರಾರಂಭವಾಗಿದೆ. 

ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ತಿಂಗಳು 16ಕ್ಕೆ ಆದಿಪುರುಷ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಪ್ರಭಾಸ್ ರಾಮನಾಗಿ ಮಿಂಚಿದ್ರೆ ಸೀತೆಯಾಗಿ ಕೃತಿ ಸನೊನ್ ಕಾಣಿಸಿಕೊಂಡಿದ್ದಾರೆ. ರಾವಣ ಪಾತ್ರದಲ್ಲಿ ಸೈಲ್ ಆಲಿ ಖಾನ್ ನಟಿಸಿದ್ದಾರೆ. ಓಂ ರಾವುತ್ ಸಾರಥ್ಯದಲ್ಲಿ ಬಂದಿರುವ ಆದಿಪುರುಷ್ ಸಿನಿಮಾ ಸದ್ಯ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗಷ್ಟೆ ಸಿನಿಮಾತಂಡ ತಿರುಪತಿಯಲ್ಲಿ ಅದ್ದೂರಿಯಾಗಿ ಪ್ರೀ ರಿಲೀಸ್ ಈವೆಂಟ್ ಮಾಡಿದ್ದು ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದೆ. 

ಅಂದಹಾಗೆ ಇಡೀ ಆದಿಪುರುಷ್ ತಂಡ ಸಿನಿಮಾ ರಿಲೀಸ್‌ನ ಬ್ಯುಸಿಯಲ್ಲಿದೆ. ಆದರೆ ರಾವಣನಾಗಿ ಮಿಂಚಿರುವ ಸೈಫ್ ಅಲಿ ಖಾನ್ ಪ್ರಚಾರ ಕಾರ್ಯದಿಂದ ದೂರ ಉಳಿದಿರುವುದು ಅಚ್ಚರಿ ಮೂಡಿಸಿದೆ. ಸೈಫ್ ಯಾವುದೇ ಪ್ರಮೋಷನ್ನಲ್ಲೂ ಭಾಗಿಯಾಗುತ್ತಿಲ್ಲ. ಮುಂಬೈನಲ್ಲಿಯೇ ಇದ್ದರೂ ಸೈಫ್ ತನ್ನದೇ ಸಿನಿಮಾ ಕಾರ್ಯಕ್ರಮಗಳಿಗೆ ಗೈರಾಗುತ್ತಿರುವುದು ಅನೇಕ ಅನುಮಾನಗಳಿಗೆ ಎಡಿಮಾಡಿಕೊಟ್ಟಿದೆ. ಸಿನಿಮಾ ಪ್ರಾರಂಭದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು ಅಲ್ಲದೇ ಸೈಫ್ ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಸಿನಿಮಾದಿಂದ ದೂರ ಉಳಿದ್ದಾರಾ ಎನ್ನುವ ಪ್ರಶ್ನೆ ಸಹ ಮೂಡಿದೆ. 

Latest Videos

ಈ ಬಗ್ಗೆ ಅನೇಕ ಮಾತುಗಳು ಕೇಳಿ ಬರುತ್ತಿದೆ. ಸೈಫ್ ನಟಿಸಿರುವ ರಾವಣ ಪಾತ್ರದ ಪ್ರಭಾವ ಕೊಂಚ ತಗ್ಗಿಸಲು ಚಿತ್ರತಂಡ ಈ ಕಾರ್ಯತಂತ್ರ ಮಾಡಿದೆ ಎನ್ನಲಾಗುತ್ತಿದೆ. ಈ ಮೊದಲು ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನಲೇ ಬಿಡುಗಡೆಗೂ ಮೊದಲು ಅನಾವಶ್ಯಕ ವಿವಾದಗಳನ್ನು ತಪ್ಪಿಸಲು ಸೈಫ್ ಅವರನ್ನು ದೂರ ಇಟ್ಟಿದೆ ಸಿನಿಮಾತಂಡ ಎನ್ನಲಾಗಿದೆ. ಸೈಫ್ ಗೈರಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ತಿರುಪತಿ ಈವೆಂಟ್‌ನಲ್ಲಾದರೂ ಸೈಫ್ ಕಾಣಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಸೈಫ್ ತಿರುಪತಿ ಈವೆಂಟ್‌ಗೂ ಗೈರಾಗಿದ್ದಾರೆ. ಅಂದಹಾಗೆ ಈ ಮೊದಲು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲೂ ಸೈಫ್ ಕಾಣಿಸಿಕೊಂಡಿಲ್ಲ.

Prabhas: ಪ್ರತಿ ಚಿತ್ರಮಂದಿರಗಳಲ್ಲಿ ಹನುಮನಿಗೆ 1 ಸೀಟು ಮೀಸಲಿಟ್ಟ 'ಆದಿಪುರುಷ' ತಂಡ: ಏನಿದು ವಿಶೇಷ?

ಸೈಫ್ ಮುಂಬೈನಲ್ಲಿದ್ದಾರೆ. ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಮುಂಬೈ ಏರ್ಪೋರ್ಟ್‌‌ನಲ್ಲಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ. ಆದರೆ ಆದಿಪುರುಷ್ ಈವೆಂಟ್‌ಗೆ ಮಿಸ್ ಆಗಿದ್ದಾರೆ. ಸೈಪ್ ಸದ್ಯ ಜೂ.ಎನ್ ಟಿ ಆರ್ ನಟನೆಯ 30ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಧಿಕೃತವಾಗಿ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರುವ ಸೈಫ್ ಆದಿಪುರುಷ್ ಪ್ರಮೋಷನ್ ಮೂಲಕ ಟಾಲಿವುಡ್ ಅಭಿಮಾನಿಗಳ ಮನಸೆಳೆಯುವ ಪ್ರಯತ್ನ ಮಾಡುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಸೈಫ್ ಪ್ರಮೋಷನ್‌ನಿಂದ ದೂರ ಇರುವ ಮೂಲಕ ಚರ್ಚೆಕೆ ಕಾರಣರಾಗಿದ್ದಾರೆ.

 ಜೂ.ಎನ್‌ಟಿಆರ್- ಸೈಫ್ ಅಲಿ ಖಾನ್ ಸಿನಿಮಾದಲ್ಲಿ ಕನ್ನಡ ಕಿರುತೆರೆ ಖ್ಯಾತ ನಟಿ ಚೈತ್ರಾ ರೈ

ಪ್ರಿ ರಿಲೀಸ್ ಈವೆಂಟ್ ಆಗಲಿ ಅಥವಾ ಸಂದರ್ಶನಗಳಲ್ಲಿಯೂ ಸಿನಿಮಾತಂಡ ಸೈಫ್ ಅಲಿ ಬಗ್ಗೆ ಮಾತನಾಡುತ್ತಿಲ್ಲ. ತಿರುಪತಿ ಈವೆಂಟ್‌ನಲ್ಲಿ ಪ್ರಭಾಸ್ ತಂಡದ ಬಗ್ಗೆ ಮಾತನಾಡಿದರು. ಆದರೆ ಸೈಫ್ ಬಗ್ಗೆ ಏನು ಹೇಳಿಲ್ಲ. ಹಾಗಾಗಿ ಸೈಫ್ ಮತ್ತು ಸಿನಿಮಾತಂಡದ ನಡುವೆ ಎಲ್ಲವೂ ಚೆನ್ನಾಗಿಲ್ಲ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಆದರೆ ಇದೆಲ್ಲ ಊಹಾಪೋಹ ಅಷ್ಟೆ, ಸೈಫ್ ನಿಜಕ್ಕೂ ಯಾಕೆ ಭಾಗಿಯಾಗುತ್ತಿಲ್ಲ ಎಂದು ಸಿನಿಮಾತಂಡವೇ ಬಹಿರಂಗ ಪಡಿಸಬೇಕಿದೆ.   

click me!