ನಟಿ ಊರ್ವಶಿ ರೌಟೇಲಾ ಬಗ್ಗೆ ಬರೆದು ಪೇಚಿಗೆ ಸಿಲುಕಿದ ಪತ್ರಕರ್ತ: ಲೀಗಲ್​ ನೋಟಿಸ್​!

By Suvarna NewsFirst Published Apr 23, 2023, 5:35 PM IST
Highlights

ನಟಿ ಊರ್ವಶಿ ರೌಟೇಲಾ ವಿರುದ್ಧ ಪತ್ರಕರ್ತ ಉಮೇರ್ ಸಂಧು ಸುಳ್ಳು ಸುದ್ದಿ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಇದಕ್ಕೆ ನಟಿ ಲೀಗ್​ ನೋಟಿಸ್​ ನೀಡಿದ್ದಾರೆ. 
 

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ  ಊರ್ವಶಿ ರೌಟೇಲಾ (Uravashi Rautela) ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದ ನಟಿ. ಕ್ರಿಕೆಟಿಗ  ರಿಷಬ್ ಪಂತ್  (Rishab Pant) ಅವರನ್ನು ಬಿಟ್ಟೂಬಿಡದೆ ಕಾಡುತ್ತಿದ್ದ ಈ ನಟಿಯ ಬಗ್ಗೆ ರಿಷಬ್ ಪಂತ್​ ಅಭಿಮಾನಿಗಳು ಹರಿಹಾಯ್ದಿದ್ದರು. ರಿಷಬ್​ ಮತ್ತು ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ಆದರೂ ರಿಷಬ್​ ಅವರನ್ನು ಊರ್ವಶಿ   ಬಿಡದೇ ಕಾಡುತ್ತಿದ್ದರು.  ರಿಷಬ್ ಪಂತ್ ಅವರು ನನಗೆ ತುಂಬ ಸಲ ಫೋನ್ ಮಾಡಿದ್ದರು ಎಂದು ಊರ್ವಶಿ ಹೇಳಿಕೆ ನೀಡಿದ್ದರು. ಆಗ ರಿಷಬ್ ಅವರು, 'ಅಕ್ಕಾ ನನ್ನ ಬಿಟ್ಟು ಬಿಡು' ಎಂದಿದ್ದರು. ಹೀಗೆ ಈಕೆ ಅವರನ್ನು ಕಾಡಿದ್ದು  ಎಲ್ಲಿಯವರೆಗೆ ಎಂದರೆ ಭೀಕರ ಅಪಘಾತದಲ್ಲಿ ರಿಷಬ್​ ಪಂತ್​ ಆಸ್ಪತ್ರೆಗೆ ದಾಖಲಾಗಿದ್ದರೂ  ಊರ್ವಶಿ ರೌಟೇಲಾ ಅವರ ಹಿಂದೆ ಬಿದ್ದಿದ್ದರು ಎಂದು ಸುದ್ದಿಯಾಗಿತ್ತು. ರಿಷಬ್‌ ಅವರಿಗೆ ಅಪಘಾತವಾಗಿದೆ ಎಂದು ತಿಳಿದಾಗ ಊರ್ವಶಿ  'ಪ್ರಾರ್ಥನೆ' (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಇದರಿಂದ ಆಕೆಯನ್ನು ರಿಷಬ್​ ಅಭಿಮಾನಿಗಳು ಛೀಮಾರಿ ಹಾಕಿದ್ದರು.
 
ಆದರೆ ಇದೀಗ ವಿಷಯವೇ ಬೇರೆ. ನಟಿ ಕೋಪದಿಂದ ಕೆಂಡಾಮಂಡಲವಾಗಿದ್ದಾರೆ. ಇದಕ್ಕೆ ಕಾರಣ, ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದರಿಂದಾಗಿ ಅವರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಅಷ್ಟಕ್ಕೂ ಅಂಥದ್ದೇನು ಆಯಿತು ಎಂದು ಯೋಚಿಸುತ್ತಿದ್ದೀರಾ?  ಊರ್ವಶಿ ಇದ್ದಕ್ಕಿದ್ದಂತೆ ಇಷ್ಟು ದೊಡ್ಡ ಹೆಜ್ಜೆ ಇಟ್ಟಿರೋದಕ್ಕೆ ಕಾರಣವೂ ಇದೆ. ವಾಸ್ತವವಾಗಿ, ಏನಾಯಿತು ಎಂದರೆ ತಮ್ಮನ್ನು ಚಲನಚಿತ್ರ ವಿಮರ್ಶಕ, ಪತ್ರಕರ್ತ (Film critic) ಎಂದು ಕರೆದುಕೊಳ್ಳುವ ಉಮರ್ ಸಂಧು (Umair Sandhu) ಸದಾ ತಮ್ಮ  ಟ್ವಿಟರ್ ಖಾತೆಯಲ್ಲಿ ಕೆಟ್ಟ, ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿಯೇ ಫೇಮಸ್​.  ಅವರು ಪ್ರತಿದಿನ ಕೆಲವು ಅಥವಾ ಇತರ ನಟರ ಬಗ್ಗೆ ಅಸಂಬದ್ಧ ಮತ್ತು ನಕಲಿ ವಿಷಯಗಳನ್ನು ಬರೆಯುತ್ತಲೇ ಇರುತ್ತಾರೆ. ನಿರ್ಲಕ್ಷಿಸುವವರು ಅನೇಕರಿದ್ದಾರೆ ಮತ್ತು ಕೆಲವರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ಇತ್ತೀಚೆಗೆ, ಅವರು ಸೆಲಿನಾ ಜೇಟ್ಲಿ ಬಗ್ಗೆ ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು ಫರ್ದೀನ್ ಖಾನ್ ಮತ್ತು ಫಿರೋಜ್ ಖಾನ್ ಅವರೊಂದಿಗೆ ಮಲಗಿದ್ದರು ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ನಟಿ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ. 

ರಿಷಬ್​ ಪಂತ್​ರನ್ನು ಕಾಡುತ್ತಿರೋ ನಟಿ ಊರ್ವಶಿ ರೌಟೇಲಾ ಮತ್ತೆ ಸುದ್ದಿಯಲ್ಲಿ!

Latest Videos

ಈಗ ಊರ್ವಶಿ ಸರದಿ. ನಟಿ ಊರ್ವಶಿ ಬಗ್ಗೆ ಅಸಭ್ಯವಾಗಿ ಬರೆದಿದ್ದಾರೆ. ಯುರೋಪ್‌ನಲ್ಲಿ 'ಏಜೆಂಟ್' (Agent) ಚಿತ್ರದ ಐಟಂ ಸಾಂಗ್ ಚಿತ್ರೀಕರಣದ ವೇಳೆ ಅಖಿಲ್ ಅಕ್ಕಿನೇನಿ (Akhil Akkineni) ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಉಮರ್ ಸಂಧು ಟ್ವೀಟ್ ಮಾಡಿದ್ದಾರೆ. ಇವರಿಬ್ಬರ ಫೋಟೋ ಲಗತ್ತಿಸಿ ತೀರಾ ಕೆಟ್ಟದ್ದಾಗಿ ಬರೆದಿದ್ದಾರೆ. ಇದೀಗ ಈ ಟ್ವೀಟ್ ಓದಿದ ಊರ್ವಶಿ ರೌಟೇಲಾ ಕೆಂಡಾಮಂಡಲವಾಗಿದ್ದಾರೆ.  ಅವರು ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅದರ ಮೇಲೆ ನಕಲಿ ಎಂದು ಬರೆದಿದ್ದಾರೆ.

 ನನ್ನ ಕಾನೂನು ತಂಡವು ನಿಮಗೆ ಮಾನನಷ್ಟ (Defarmation) ನೋಟಿಸ್ ಕಳುಹಿಸುತ್ತಿದೆ. ನಿಮ್ಮಂತಹ ಪತ್ರಕರ್ತರ ಕೊಳಕು ಟ್ವೀಟ್‌ಗಳಿಂದ ಎಲ್ಲರೂ ಕೋಪಗೊಂಡಿದ್ದಾರೆ ಎಂದು ನಟಿ ಹೇಳಿದ್ದಾರೆ. ನೀವು ನನ್ನ ಅಧಿಕೃತ ವಕ್ತಾರರಲ್ಲ. ಅವರಂತೆ ವರ್ತಿಸಬೇಡಿ. ಇದರಿಂದ ಬಹಳಷ್ಟು ಮಂದಿಯ ಮನಸ್ಸಿಗೆ ನೋವುಂಟಾಗುತ್ತದೆ ಎಂದಿರುವ ನಟಿ, ಲೀಗಲ್​ ನೋಟಿಸ್​ ಕಳುಹಿಸಿದ್ದಾರೆ.

Sherlyn Chopra: ಎದೆ ಮುಟ್ಟಿದ, ಕಂಟ್ರೋಲ್​ ಆಗ್ತಿಲ್ಲ ಎಂದ... ಉದ್ಯಮಿ ವಿರುದ್ಧ ನಟಿ ದೂರು

click me!