ನಟ ಮೋಹನ್ ಬಾಬುಗೆ ಆಗಂತುಕರಿಂದ ಕೊಲೆ ಬೆದರಿಕೆ; ಆತಂಕದಲ್ಲಿ ಕುಟುಂಬ!

Suvarna News   | Asianet News
Published : Aug 02, 2020, 10:36 AM IST
ನಟ ಮೋಹನ್ ಬಾಬುಗೆ ಆಗಂತುಕರಿಂದ ಕೊಲೆ ಬೆದರಿಕೆ; ಆತಂಕದಲ್ಲಿ ಕುಟುಂಬ!

ಸಾರಾಂಶ

ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು, ಪೊಲೀಸರ ರಕ್ಷಣೆ ಪಡೆದ ನಟ ಮೋಹನ್‌ ಬಾಬು.  

ಟಾಲಿವುಡ್‌ ನಟ ಮೋಹನ್ ಬಾಬು ಅವರ ಶಂಶಾಬಾದ್‌ ವಿಮಾನ ನಿಲ್ದಾಣದ ಬಳಿ ಇರುವ ನಿವಾಸಕ್ಕೆ ಶನಿವಾರ ದುಷ್ಕರ್ಮಿಗಳು ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. 

ಕೊರೋನಾ ವಿರುದ್ಧ ಹೋರಾಟಲು ನಟ ಮೋಹನ್‌ ಬಾಬು ಸಾಥ್! 

ಅತಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದ ದುಷ್ಕರ್ಮಿಗಳು ಮೋಹನ್‌ ಬಾಬು ಅವರ ಮನೆಯ ಸೆಕ್ಯುರಿಟಿ ಗಾರ್ಡ್‌ಗೆ ನಟ ಎಲ್ಲಿದ್ದಾರೆ ಎಂದು ವಿಚಾರಣೆ ಮಾಡುವ ವೇಳೆ ಮಾಹಿತಿ ನೀಡುವ ಮೊದಲು ಅವರ ಪರಿಚಯ ಬಗ್ಗೆ  ವಿಚಾರಿಸಲು ಮುಂದಾದಾಗ  ಗಾರ್ಡ್‌ ಜೊತೆ ಅಸಭ್ಯವಾಗಿ ವರ್ತಿಸಿದ್ದಾರಂತೆ.

ಶನಿವಾರ ರಾತ್ರಿ AP 31 AN 0004 ಕಾರಿನಲ್ಲಿ ಅಪರಿಚಿತರ ಗುಂಪು ಬಂದಿರುವುದು ತಿಳಿದು ಬಂದಿದೆ. ತಕ್ಷಣವೇ ನಟನಿಗೆ ಸೆಕ್ಯುರಿಟಿ ಮಾಹಿತಿ ನೀಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ವಿಜಯಲಕ್ಷ್ಮಿ ಎಂಬ ಮಹಿಳೆಯ ಹೆಸರಿನಲ್ಲಿ ನೋಂದಣಿ ಆಗಿರುವುದಾಗಿ ತಿಳಿದು ಬಂದಿದೆ. 

ಅವರು ಯಾರು? ಯಾವ ಕಾರಣಕ್ಕೆ ರಾತ್ರಿ ಇವರ ಮನೆಗೆ ನುಗ್ಗಿದ್ದರು  ಇದರ ಹಿಂದೆ ಹಳೇ ದ್ವೇಷ ಏನಾದರೂ ಇದ್ಯಾ ಎಂಬ ಮಾಹಿತಿಯನ್ನು ಪಡೆಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟ ಮೋಹನ್‌ ಬಾಬು ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!