ಪತ್ನಿ ಜತೆ ತೆರಳುತ್ತಿದ್ದಾಗ ದಕ್ಷಿಣದ ಸ್ಟಾರ್‌ ನಟನ ಕಾರು ಅಪಘಾತ, ನೆರೆದಿದ್ದ ಜನರ ಮೇಲೆ ಗರಂ!

Published : Sep 11, 2024, 09:32 PM IST
ಪತ್ನಿ ಜತೆ ತೆರಳುತ್ತಿದ್ದಾಗ ದಕ್ಷಿಣದ ಸ್ಟಾರ್‌ ನಟನ ಕಾರು ಅಪಘಾತ, ನೆರೆದಿದ್ದ ಜನರ ಮೇಲೆ ಗರಂ!

ಸಾರಾಂಶ

ಸೌತ್ ಇಂಡಿಯನ್ ಸ್ಟಾರ್ ಜೀವ ಮತ್ತು ಅವರ ಪತ್ನಿ ಸುಪ್ರಿಯಾ ಅವರು ಬುಧವಾರ ಸಂಜೆ ತಮಿಳುನಾಡಿನಲ್ಲಿ ಕಾರು ಅಪಘಾತಕ್ಕೆ ಒಳಗಾಗಿದ್ದಾರೆ. ಅಪಘಾತದಲ್ಲಿ ಅವರ ಕಾರು ತೀವ್ರವಾಗಿ ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಮಿಳು ನಟ ಜೀವಾ  ಕಾರು ಅಪಘಾತದಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರು ಚೆನ್ನೈಗೆ ತೆರಳುತ್ತಿದ್ದಾಗ ಚಿನ್ನಸೇಲಂನ ಅಮಿಯಕರಂ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.  ಪತ್ನಿ ಕೂಡ ಕಾರಿನಲ್ಲಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಯುವಕ ಇದ್ದಕ್ಕಿದ್ದಂತೆ ರಸ್ತೆಗೆ ತಿರುಗಿದ್ದು, ಆ ಸಮಯದಲ್ಲಿ ಅನಾಹುತ ತಪ್ಪಿಸಲು ಹೋಗಿ ಡಿವೈಡರ್‌ ಗೆ ಕಾರು ಗುದ್ದಿದೆ.

ರಣವೀರ್ ಸಿಂಗ್ ನಟನೆಯ '83' ಚಿತ್ರದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಉರ್ಫ್ ಚಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೌತ್ ಇಂಡಿಯನ್ ಸ್ಟಾರ್ ಜೀವ ಅವರ ಕಾರು ಅಪಘಾತ ಘಟನೆ ಬುಧವಾರ (ಆಗಸ್ಟ್ 11) ಸಂಜೆ ಅವರು ಪತ್ನಿ ಸುಪ್ರಿಯಾ ಅವರೊಂದಿಗೆ ತಮಿಳುನಾಡಿನ ಕಲ್ಲಕುರಿಚಿಗೆ ತೆರಳುತ್ತಿದ್ದಾಗ ಸಂಭವಿಸಿದೆ. ಈ ವೇಳೆ ಅವರ ಕಾರು ರಸ್ತೆಯಲ್ಲಿದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಕಾರು ತೀವ್ರವಾಗಿ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಜೀವ ಮತ್ತು ಸುಪ್ರಿಯಾ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ನಂತರ ಹಾನಿಗೊಳಗಾದ ಕಾರಿನ ಚಿತ್ರಗಳು ವೈರಲ್ ಆಗಿವೆ. ಘಟನಾ ಸ್ಥಳದಿಂದ ಜೀವ ಅವರ ವೀಡಿಯೊ ಕೂಡ ಹೊರಬಿದ್ದಿದ್ದು, ಅದರಲ್ಲಿ ಅವರು ಕಿರುಚುತ್ತಾ  ಕೋಪಗೊಳ್ಳುತ್ತಿರುವುದನ್ನು ಕಾಣಬಹುದು.

ಮಲೈಕಾ ತಂದೆ ಸೂಸೈಡ್ ಗೆ ಕಾರಣವೇನು? ತಾಯಿ ಹೇಳಿಕೆ ದಾಖಲು, ವಿಷ್ಯ ತಿಳಿದು ಬಂದ ಸಲ್ಮಾನ್ ಕುಟುಂಬ

ಅಪಘಾತದ ನಂತರ ಯಾರ ಮೇಲೆ ಸಿಟ್ಟಾಗಿದ್ದರು ಜೀವ?: ವೈರಲ್ ಆಗಿರುವ ವಿಡಿಯೋದಲ್ಲಿ ಜೀವ ಅವರು ಸಹಾಯ ಮಾಡುವ ಬದಲು ಏನೇನೋ ಕಾಮೆಂಟ್ ಮಾಡುತ್ತಿದ್ದ ಜನರ ಮೇಲೆ ಸಿಟ್ಟಾಗುತ್ತಿರುವುದನ್ನು ಕಾಣಬಹುದು. ಜೀವ ಅಪಘಾತಕ್ಕೀಡಾದ ಕಾರಿನಿಂದ ಪತ್ನಿ ಸುಪ್ರಿಯಾ ಅವರನ್ನು ಹೊರಗೆಳೆಯಲು ಸಹಾಯ ಮಾಡುತ್ತಿದ್ದಾರೆ ಮತ್ತು ಆ ಜನರ ಮೇಲೆ ಕಿರುಚುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಪಘಾತದ ನಂತರ ಚಿನ್ನ ಸೇಲಂ ಪೊಲೀಸ್ ಠಾಣೆಯಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಹಾನಿಗೊಳಗಾದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಅದನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಜೀವ ಯಾರು?: 40 ವರ್ಷದ ಜೀವ ತಮಿಳು ಚಿತ್ರರಂಗದ ಸ್ಟಾರ್ ನಟ. ಅವರು ಹಿಂದಿ, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರು ತಮಿಳಿನಲ್ಲಿ 'ಗೊರಿಲ್ಲಾ', 'ಜಿಪ್ಸಿ', 'ವರಲಾರು ಮುಕ್ಕಿಯಂ', ಕಸ್ಟಡಿ (ತೆಲುಗಿನಲ್ಲಿಯೂ), ತೆಲುಗಿನಲ್ಲಿ 'ಯಾತ್ರ 2', ಮಲಯಾಳಂನಲ್ಲಿ 'ಕೀರ್ತಿ ಚಕ್ರ' ಮತ್ತು ಹಿಂದಿಯಲ್ಲಿ ಕ್ರೀಡಾ ಆಧಾರಿತ ಚಿತ್ರ '83' ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ನನ್ನ ರೂಮ್ ಮೇಟ್, ಅರ್ಧರಾತ್ರಿ ರೋಡಲ್ಲಿ ಹೀಗೆ ಇದ್ವಿ ಬಿಗ್‌ಬಾಸ್‌ ಪ್ರೇರಣಾ ಬಿಚ್ಚಿಟ್ಟ ರಹಸ್ಯ!

ಹೇಮಾ ಸಮಿತಿ ವರದಿಗೆ ಪ್ರತಿಕ್ರಿಯೆ ನೀಡಿ ಸುದ್ದಿಯಲ್ಲಿದ್ದರು ಜೀವ: ಇತ್ತೀಚೆಗೆ ಮಲಯಾಳಂ ಸಿನಿಮಾದಲ್ಲಿ ಮಹಿಳೆಯರ ಸ್ಥಿತಿಗತಿಗಳ ಕುರಿತು ಜಸ್ಟೀಸ್ ಹೇಮಾ ಸಮಿತಿ ವರದಿ ಬಂದಾಗ ಜೀವ ಸುದ್ದಿಯಲ್ಲಿದ್ದರು. ತೇಣಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವರದಿಗೆ ಪ್ರತಿಕ್ರಿಯಿಸಿದ್ದ ಜೀವ, "ನಾನು ಇದರ ಬಗ್ಗೆ ಕೇಳಿದ್ದೇನೆ. ಇದು ತಪ್ಪು. ನಮ್ಮಲ್ಲಿ #MeToo ಭಾಗ 1 ಇತ್ತು ಮತ್ತು ಈಗ #MeToo ಭಾಗ 2 ಬಂದಿದೆ. ಈಗ ಜನರು ಬಹಿರಂಗವಾಗಿ ದೌರ್ಜನ್ಯ ಎಸಗುವವರ ಹೆಸರನ್ನು ಹೇಳುತ್ತಿದ್ದಾರೆ. ಇದು ತಪ್ಪು. ನಾವು ಸಿನಿಮಾದಲ್ಲಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಬೇಕು" ಎಂದು ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಲು ಮುಂದಾದ ಪತ್ರಕರ್ತರೊಬ್ಬರನ್ನು ತಡೆದ ಅವರು, ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡಿ, ನಾವು ಒಳ್ಳೆಯ ಕಾರ್ಯಕ್ರಮಕ್ಕೆ ಬಂದಿದ್ದೇವೆ, ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡೋಣ ಎಂದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!