ಬುರ್ಖಾ ಧರಿಸಿ ಓಡಾಡುತ್ತಿರುವ ನಟಿ; ಇದು ಲವ್‌ ಅಲ್ಲ Live-in-Relationship!

Suvarna News   | Asianet News
Published : Mar 12, 2020, 03:10 PM IST
ಬುರ್ಖಾ ಧರಿಸಿ ಓಡಾಡುತ್ತಿರುವ ನಟಿ; ಇದು ಲವ್‌ ಅಲ್ಲ Live-in-Relationship!

ಸಾರಾಂಶ

ಲವ್ವಲ್ಲಿ ಬಿದ್ದೇ ಬಿಟ್ಟರು ಹೆಬ್ಬುಲಿ ನಟಿ. ಬುರ್ಖಾ ಧರಿಸಿ ಓಡಾಡುತ್ತಿರುವ ನಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪುಲ್‌ ವೈರಲ್‌.....  

ದಕ್ಷಿಣ ಭಾರತದ ಮುದ್ದು ಮುಖದ ಚೆಲುವೆ ಅಮಲಾ ಪೌಲ್‌ ಬಾಳಲ್ಲಿ ಬೆಳಕಾಗಿ ಬಂದಿದ್ದಾರೆ ಸಿಂಗ್! 2014ರಲ್ಲಿ ನಿರ್ದೇಶಕ ವಿಜಯ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮಲಾ, ಕಾರಣಾಂತರಗಳಿಂದ 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದ ಅಮಲಾ ವಿಚ್ಛೇದನ ನಂತರ, ಹಲವು ಸಿನಿಮಾಗಳನ್ನು ಮಾಡಲು ಒಪ್ಪಿಕೊಳ್ಳುತ್ತಿದ್ದರು. ಈ ನಡುವೆ ಮಾಜಿ ಪತಿ ವಿಜಯ್ ಮತ್ತೊಬ್ಬ ನಟಿ ಜೊತೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಆದರೆ, ಅಮಲಾ ಮಾತ್ರ ಒಂಟಿ ಒಂಟಿಯಾಗಿಯೇ ಇದ್ದಾರೆ.

'ಹೆಬ್ಬುಲಿ' ನಟಿ ಮದುವೆ ಮುರಿದು ಬೀಳಲು ಈ ನಟನೇ ಕಾರಣ ಅಂತೆ!

2019ರಲ್ಲಿ ಆದಿಯಾ ಚಿತ್ರ ಪ್ರಚಾರದಲ್ಲಿ ಅಮಲಾ 'ನಿಜವಾದ ಪ್ರೀತಿಗೆ ಅದೆಷ್ಟೋ ನೋವುಗಳನ್ನು ದೂರ ಮಾಡುವ ಸಾಮರ್ಥ್ಯವಿದೆ' ಎಂದು ಹೇಳಿ ಕೊಂಡಿದ್ದರು. ಆದರೆ ಆ ನೈಜ ಪ್ರೀತಿ ತೋರಿಸುವ ಹುಡುಗ ಅಮಲಾಗೆ ಸಿಕ್ಕಿದ್ನಾ ಎಂಬ ಬಗ್ಗೆ ಹಲವು ಗುಸು ಗಸು ಸುದ್ದಿ ಹರಿದಾಡುತ್ತಿತ್ತು. ಇದೀಗ ಅಮಲಾ ಹೃದಯ ಕದ್ದ ಅವನು ಯಾರೆಂದು ಬಹುತೇಕ ಜಗಜ್ಜಾಹೀರವಾಗಿದೆ.

ಮುಂಬೈ ಮೂಲದ ಗಾಯಕ ಭವಿಂದ್ರ ಸಿಂಗ್ ಮತ್ತು ಅಮಲಾ ಲೀವ್‌ ಇನ್‌ ರಿಲೇಷನ್‌‌ಶಿಪ್‌ನಲ್ಲಿ ಇದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚಿಗೆ ಅಮಲಾ ಬುರ್ಖಾ ಧರಿಸಿ ಸಿಂಗ್ ಜೊತೆ ಓಡಾಡುತ್ತಿರುವ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅಷ್ಟೇ ಅಲ್ಲದೇ ಭವಿಂದ್ರ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿಯೂ ಅಮಲಾ ಮುಖ ಅಸ್ಪಷ್ಟವಾಗಿದ್ದರೂ ಅಭಿಮಾನಿಗಳು ಅದರಲ್ಲಿ ಇರುವುದು ಅಮಲಾನೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಏನಮ್ಮಾ ಇದು! ಮತ್ತೆ ಟಾಪ್‌ಲೆಸ್‌ ಆದ ಹೆಬ್ಬುಲಿ ನಟಿ!

ಏನೋ ಅಪ್ಪಾ ಅಮಲಾ ಲೈಫಲ್ಲಿ ಭವಿಂದ್ರ ಬಂದಿದ್ದು ಹೌದೋ, ಇಲ್ಲವೋ ಎನ್ನುವುದು ಮಾತ್ರಿ ಇನ್ನೂ ಗೋಜಲು ಗೋಜಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?