
ದೆಹಲಿ ಮೂಲದ ರ್ಯಾಪರ್ 22 ವರ್ಷದ ಎಂಸಿ ಕೋಡ್ ಆದಿತ್ಯ ತಿವಾರಿ, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸುಳಿವು ನೀಡುವ ಇನ್ಸ್ಟಾಗ್ರಾಂ ಸ್ಟೋರಿ ಪೋಸ್ಟ್ ಮಾಡಿದ ನಂತರ ಇದೀಗ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ.
ಅವರ ಸ್ನೇಹಿತರು ದೆಹಲಿ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಆದಿತ್ಯ ಅವರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾಋಎ. ಅವರ ಅಭಿಮಾನಿಗಳು ಮತ್ತು ಸ್ನೇಹಿತರು ದೆಹಲಿ ಪೊಲೀಸರನ್ನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ ನೂರಾರು ಟ್ವೀಟ್ಗಳಲ್ಲಿ ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ನಾಪತ್ತೆಯಾದವರ ದೂರು ಸಹ ಜೂನ್ 4 ರಂದು ದಾಖಲಾಗಿದೆಯೆಂದು ಅವರ ಸ್ನೇಹಿತರು ತಿಳಿಸಿದ್ದಾರೆ. ಆದರೆ ಈ ಸಂಬಂಧ ಎಫ್ಐಆರ್ ದಾಖಲಾಗಿಲ್ಲ.
ಡ್ರೀಮ್ ಗರ್ಲ್ ನಟಿ ರಿಂಕು ಕೊರೋನಾದಿಂದ ಸಾವು
ಕಾಣೆಯಾಗುವ ಮೊದಲು ಆದಿತ್ಯ ಈ ಕೆಳಗಿನ ಸಂದೇಶವನ್ನು ಹೊರಹಾಕಿದ್ದಾನೆ: 'ನಾನು ಯಾರನ್ನೂ ದೂಷಿಸುವುದಿಲ್ಲ. ನನ್ನ ಸ್ವಂತ ಅಸ್ತಿತ್ವದಿಂದ ನಾನು ದೂರವಾಗುವುದು ಇಡೀ ದೇಶವು ಬಯಸಿದ ಶಿಕ್ಷೆಯಾಗಿದೆ' ಎಂದು ಬರೆದಿದ್ದಾರೆ.
2016ರ ಅವರ ವೀಡಿಯೊವೊಂದರ ನಂತರ ಮಹಾಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಆದಿತ್ಯಗೆ ಬೆದರಿಕೆಗಳು, ನಿಂದನೆ, ದೂರುಗಳು ಮತ್ತು ನಿರಂತರವಾಗಿ ವಾಗ್ದಾಳಿ ನಡೆಯುತ್ತಿತ್ತು. ಆದಿತ್ಯ ಕ್ಷಮೆ ಯಾಚಿಸಿದ ಹೊರತಾಗಿಯೂ ದ್ವೇಷವು ಹೆಚ್ಚುತ್ತಲೇ ಇತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.