
ಬಾಲಿವುಡ್ ನಟ ರಣವೀರ್ ಸಿಂಗ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಧುರಂಧರ್ 2'. ಇದು ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಚಿತ್ರದ ಎರಡನೇ ಭಾಗವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಭಾಗಕ್ಕಿಂತ ಸೀಕ್ವೆಲ್ಗೆ ದೊಡ್ಡ ಮಟ್ಟದ ಸ್ವಾಗತ ಸಿಗುವ ಸೂಚನೆಯನ್ನು ಈ ಟ್ರೇಲರ್ ನೀಡಿದೆ. ಈ ಚಿತ್ರ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ತೆರೆ ಕಾಣುತ್ತಿರುವುದರಿಂದ, ಮೊದಲ ಭಾಗಕ್ಕಿಂತ ದೊಡ್ಡ ಯಶಸ್ಸನ್ನು ಗಳಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ.
ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಜಸ್ಕಿರತ್ ಸಿಂಗ್ ರಂಗಿ ಮತ್ತು ಹಂಸ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ 2026ರ ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ವಿಶೇಷ ಅಂದರೆ, ಥಿಯೇಟರ್ ರಿಲೀಸ್ಗೂ ಮೊದಲೇ ಚಿತ್ರದ ಓಟಿಟಿ ಸ್ಟ್ರೀಮಿಂಗ್ ದಿನಾಂಕದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಜಿಯೋ ಹಾಟ್ಸ್ಟಾರ್ (JioHotstar) ಈ ಚಿತ್ರದ ಓಟಿಟಿ ಹಕ್ಕುಗಳನ್ನು ಪಡೆದುಕೊಂಡಿದೆ. ಅನಧಿಕೃತ ವರದಿಗಳ ಪ್ರಕಾರ, 2026ರ ಮೇ 14 ರಂದು ಈ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಬ್ಲಾಕ್ಬಸ್ಟರ್ ಹಿಟ್ ಆಗಿದ್ದ ಮೊದಲ ಭಾಗದ ನಂತರ ಬರುತ್ತಿರುವ 'ಧುರಂಧರ್ 2' ಸದ್ಯ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದೆ. ಟ್ರೇಲರ್ನಲ್ಲಿ ರಣವೀರ್ ಸಿಂಗ್ ಅವರನ್ನು ಜಸ್ಕಿರತ್ ಸಿಂಗ್ ರಂಗಿ ಮತ್ತು ಹಂಸ ಎಂಬ ದ್ವಿಪಾತ್ರದಲ್ಲಿ ಪರಿಚಯಿಸಲಾಗಿದೆ. ಚಿತ್ರದಲ್ಲಿ ಆರ್. ಮಾಧವನ್ ಅವರು ತಂತ್ರಗಾರಿಕೆಯ ಅಜಯ್ ಸನ್ಯಾಲ್ ಪಾತ್ರದಲ್ಲಿ, ಅರ್ಜುನ್ ರಾಂಪಾಲ್ ಐಎಸ್ಐ ಮೇಜರ್ ಇಕ್ಬಾಲ್ ಆಗಿ ಮತ್ತು ಸಂಜಯ್ ದತ್ ಎಸ್ಪಿ ಚೌಧರಿ ಅಸ್ಲಂ ಆಗಿ ಬಣ್ಣ ಹಚ್ಚಿದ್ದಾರೆ.
ಭರ್ಜರಿ ಆಕ್ಷನ್, ಖಡಕ್ ಡೈಲಾಗ್ಗಳು ಮತ್ತು ಸೀಟಿನ ತುದಿಯಲ್ಲಿ ಕೂರಿಸುವಂತಹ ದೃಶ್ಯಗಳಿಂದ ತುಂಬಿರುವ ಟ್ರೇಲರ್, ಇದೊಂದು ದೊಡ್ಡ ಮಟ್ಟದ ಸೇಡಿನ ಕಥೆ ಎಂಬುದರ ಸುಳಿವು ನೀಡುತ್ತದೆ. ಜಸ್ಕಿರತ್ ಸಿಂಗ್ ಎಂಬ ಮುಖ್ಯ ಪಾತ್ರ ಯಾವ ಪರಿಸ್ಥಿತಿಯಲ್ಲಿ ಹಂಸ ಅಲಿ ಮಸಾರಿ ಆಗುತ್ತಾನೆ ಮತ್ತು ಪಾಕಿಸ್ತಾನದಲ್ಲಿ ಭಾರತೀಯ ಗೂಢಚಾರನಾಗಿ ಕೆಲಸ ಮಾಡುವಾಗ ಅವನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಈ ಚಿತ್ರದ ಕಥಾವಸ್ತು. ಮೊದಲ ಭಾಗದಲ್ಲಿ ಪ್ರೇಕ್ಷಕರು ನೋಡಿದ್ದಕ್ಕಿಂತ ಹಂಸ ಅಲಿ ಮಸಾರಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ಆಕ್ಷನ್ ಮತ್ತು ಸಸ್ಪೆನ್ಸ್ ಮೂಲಕ ಕಟ್ಟಿಕೊಡಲಾಗಿದೆ.
ಧೈರ್ಯ, ಕಿಚ್ಚು ಮತ್ತು ಬದಲಾವಣೆಯ ಹಾದಿಯಲ್ಲಿ ಸಾಗುವ ಒಂದು ಸೇಡಿನ ಕಥೆಯನ್ನು ಟ್ರೇಲರ್ ಬಿಂಬಿಸುತ್ತದೆ. ರಣವೀರ್ ಸಿಂಗ್ ಜೊತೆಗೆ ಅರ್ಜುನ್ ರಾಂಪಾಲ್, ಸಂಜಯ್ ದತ್, ಮಾಧವನ್, ಅಕ್ಷಯ್ ಖನ್ನಾ, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. B62 ಸ್ಟುಡಿಯೋಸ್ ನಿರ್ಮಿಸಿ, ಜಿಯೋ ಸ್ಟುಡಿಯೋಸ್ ಅರ್ಪಿಸುತ್ತಿರುವ 'ಧುರಂಧರ್ 2' ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ಆದಿತ್ಯ ಧರ್ ಅವರೇ ಬರೆದು ನಿರ್ದೇಶಿಸಿದ್ದಾರೆ. ಜ್ಯೋತಿ ದೇಶಪಾಂಡೆ, ಲೋಕೇಶ್ ಧರ್ ಮತ್ತು ಆದಿತ್ಯ ಧರ್ ಸೇರಿ ಈ ಮೆಗಾ ಮಾಸ್ ಆಕ್ಷನ್ ಸ್ಪೈ ಥ್ರಿಲ್ಲರ್ ಅನ್ನು ನಿರ್ಮಿಸಿದ್ದಾರೆ. 2026ರ ಮಾರ್ಚ್ 19ರಂದು ಈ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.