Breaking News: ‘ಧುರಂಧರ’ ನಟ ರಣವೀರ್ ಸಿಂಗ್‌ಗೆ ಜೀವ ಬೆದರಿಕೆ: ಬೆಚ್ಚಿಬೀಳಿಸುವ ಮಾಹಿತಿ ಹೊರಹಾಕಿದ ಮುಂಬೈ ಪೊಲೀಸರು!

Published : Feb 12, 2026, 12:54 PM IST
Ranveer Singh

ಸಾರಾಂಶ

ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್‌ನಲ್ಲಿ ಬಂದಿರುವ ವಾಯ್ಸ್ ನೋಟ್‌ನಲ್ಲಿ ಅಪರಿಚಿತ ವ್ಯಕ್ತಿಯು ಕೋಟಿ ಕೋಟಿ ರೂಪಾಯಿಗಳ ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಆರೋಪಿಯು ವಿಪಿಎನ್ ಬಳಸಿರುವುದರಿಂದ ಪತ್ತೆ ಕಷ್ಟ!

ಬಾಲಿವುಡ್‌ನ ‘ಧುರಂಧರ’ ರಣವೀರ್ ಸಿಂಗ್‌ಗೆ ಜೀವ ಬೆದರಿಕೆ: ಬೆಚ್ಚಿಬೀಳಿಸುವ ಮಾಹಿತಿ ಹೊರಹಾಕಿದ ಮುಂಬೈ ಪೊಲೀಸರು!

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ Ranveer Singh) ಅವರಿಗೆ ಬೆದರಿಕೆ ಬಂದಿರುವ ಸುದ್ದಿ ಈಗ ಇಡೀ ಸಿನೆಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಇತ್ತೀಚೆಗೆ ಅವರಿಗೆ ವಾಟ್ಸಾಪ್ ಮೂಲಕ ಬಂದಿರುವ ವಾಯ್ಸ್ ನೋಟ್ ಬೆದರಿಕೆಯ ತನಿಖೆಯನ್ನು ಮುಂಬೈ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಬೆದರಿಕೆ ಪ್ರಕರಣದಲ್ಲಿ ಈಗ ಹೈಟೆಕ್ ಕಳ್ಳಾಟ ಬೆಳಕಿಗೆ ಬಂದಿದ್ದು, ಬೆದರಿಕೆ ಹಾಕಿದ ಆರೋಪಿಯು ತನ್ನ ಗುರುತು ಮತ್ತು ನೆಟ್‌ವರ್ಕ್ ಸ್ಥಳವನ್ನು ಮರೆಮಾಚಲು 'ವಿಪಿಎನ್' (Virtual Private Network) ಬಳಸಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ವಾಯ್ಸ್ ನೋಟ್‌

ವರದಿಗಳ ಪ್ರಕಾರ, ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್‌ನಲ್ಲಿ ಬಂದಿರುವ ವಾಯ್ಸ್ ನೋಟ್‌ನಲ್ಲಿ ಅಪರಿಚಿತ ವ್ಯಕ್ತಿಯು ಕೋಟಿ ಕೋಟಿ ರೂಪಾಯಿಗಳ ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಆರೋಪಿಯು ವಿಪಿಎನ್ ಬಳಸಿರುವುದರಿಂದ ಆತನ ನಿಖರ ಸ್ಥಳ ಮತ್ತು ಐಪಿ ವಿಳಾಸವನ್ನು ಪತ್ತೆಹಚ್ಚುವುದು ಸದ್ಯಕ್ಕೆ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಘಟನೆಯ ಬೆನ್ನಲ್ಲೇ ರಣವೀರ್ ಸಿಂಗ್ ಅವರ ಸುರಕ್ಷತೆಯ ದೃಷ್ಟಿಯಿಂದ ಮುಂಬೈ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಂಬೈನ ವರ್ಲಿಯಲ್ಲಿರುವ ಅವರ 'ಬ್ಯೂ ಮೊಂಡೆ' ನಿವಾಸಕ್ಕೆ ಸುಮಾರು ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಬಾಲಿವುಡ್‌ನಲ್ಲಿ ಈಗ ಬೆದರಿಕೆಗಳ ಸರಣಿಯೇ ನಡೆಯುತ್ತಿರುವಂತೆ ಕಾಣುತ್ತಿದೆ. ರಣವೀರ್ ಸಿಂಗ್ ಅವರಿಗೆ ಬೆದರಿಕೆ ಬಂದ ಬೆನ್ನಲ್ಲೇ, ಸಲ್ಮಾನ್ ಖಾನ್ ಅವರ ಭಾವ ಮತ್ತು ನಟ ಆಯುಷ್ ಶರ್ಮಾ ಅವರಿಗೂ ಕೂಡ ಜೀವ ಬೆದರಿಕೆಯ ಇಮೇಲ್ ಬಂದಿದೆ. ಆಯುಷ್ ಶರ್ಮಾಗೆ ಬಂದಿರುವ ಇಮೇಲ್ 'ಪ್ರೋಟಾನ್ ಮೇಲ್' (Proton Mail) ಮೂಲಕ ಬಂದಿದ್ದು, ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವನು ಎಂದು ಕಳುಹಿಸಿದವನು ಹಕ್ಕು ಸಾಧಿಸಿದ್ದಾನೆ.

ಇತ್ತೀಚೆಗಷ್ಟೇ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಯ ಮುಂದೆ ನಡೆದ ಗುಂಡಿನ ದಾಳಿಯು ಚಿತ್ರರಂಗದಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ. ರೋಹಿತ್ ಶೆಟ್ಟಿ ಪ್ರಕರಣದ ತನಿಖೆಯಲ್ಲಿ ಶುಭಂ ಲೋಂಕರ್ ಎಂಬಾತ ಮುಂಬೈನಲ್ಲಿ ಭಯ ಹುಟ್ಟಿಸಲು ಈ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ.

'ಡಾನ್ 3' ಸಿನಿಮಾ

ಇನ್ನು ರಣವೀರ್ ಸಿಂಗ್ ಅವರ ವೃತ್ತಿಜೀವನದ ವಿಷಯಕ್ಕೆ ಬಂದರೆ, ಅವರು ಪ್ರಸ್ತುತ ತಮ್ಮ 'ಡಾನ್ 3' ಸಿನಿಮಾದಿಂದ ಹೊರಬಂದಿರುವ ಕಾರಣ ಸುದ್ದಿಯಲ್ಲಿದ್ದಾರೆ. ನಿರ್ಮಾಪಕರೊಂದಿಗೆ ಮೂಡಿದ ಕೆಲವು ಭಿನ್ನಾಭಿಪ್ರಾಯಗಳಿಂದ ಅವರು ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ, ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿರುವ 'ಧುರಂಧರ 2' ಸಿನಿಮಾದ ಬಿಡುಗಡೆಗಾಗಿ ಅವರು ಸಜ್ಜಾಗುತ್ತಿದ್ದಾರೆ.

ಈ ಚಿತ್ರವು 2026ರ ಮಾರ್ಚ್ 19 ರಂದು ಅದ್ದೂರಿಯಾಗಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಈ ಜೀವ ಬೆದರಿಕೆ ಪ್ರಕರಣವು ಸಿನೆಮಾ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಆರೋಪಿಯನ್ನು ಸೆರೆಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಬಾಲಿವುಡ್ ತಾರೆಯರ ಮೇಲೆ ಪದೇ ಪದೇ ಇಂತಹ ದಾಳಿಗಳು ಮತ್ತು ಬೆದರಿಕೆಗಳು ಕೇಳಿಬರುತ್ತಿರುವುದು ಚಿತ್ರರಂಗದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್‌ಪಾಲ್ ಯಾದವ್ ಮೊದಲ ಪತ್ನಿಗೇನಾಗಿತ್ತು? ಆ ದುರಂತದ ಬಗ್ಗೆ ಕಣ್ಣೀರಿಟ್ಟ ಹಾಸ್ಯ ನಟ
RGV: ಅಂಡರ್‌ವರ್ಲ್ಡ್ ಪಿಡುಗು ಮತ್ತೆ ಬಾಲಿವುಡ್ ಸಿನಿರಂಗವನ್ನು ಆವರಿಸಲಿದೆಯೇ? ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?