ರಾಜ್ ನಿಡಿಮೋರು ಮಾಜಿ ಪತ್ನಿ ಶ್ಯಾಮಿಲಿ ದುಃಖಕ್ಕೆ 'ಆ ಸಂಗತಿ' ಕಾರಣ, ಇದಲ್ಲ.. ಕ್ಲಾರಿಟಿ ಕೊಟ್ಟ ಪೋಸ್ಟ್!

Published : Dec 04, 2025, 11:49 AM IST
Samantha Raj Nidimoru Shhyamali De

ಸಾರಾಂಶ

ಸಮಂತಾ ಮತ್ತು ರಾಜ್ ನಿಡಿಮೋರು ಅವರ ಮದುವೆಯ ವಿಚಾರಕ್ಕೆ ಬರುವುದಾದರೆ, ಈ ಜೋಡಿ 'ಭೂತ ಶುದ್ಧಿ ವಿವಾಹ' ಎಂಬ ವಿಶಿಷ್ಟ ಯೋಗ ಸಂಪ್ರದಾಯದ ಪ್ರಕಾರ ಹಾರ ಬದಲಾಯಿಸಿಕೊಂಡಿದ್ದಾರೆ. ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಸಮಾರಂಭದ ಫೋಟೋಗಳು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿವೆ.

ಸಮಂತಾ - ರಾಜ್ ನಿಡಿಮೋರು ಮದುವೆ ಬೆನ್ನಲ್ಲೇ ಮಾಜಿ ಪತ್ನಿ ಶ್ಯಾಮಲಿ ಡೇ ಭಾವುಕ ಪೋಸ್ಟ್! 'ನಿದ್ದೆಯಿಲ್ಲದ ರಾತ್ರಿ ಕಳೆದೆ' ಎಂದಿದ್ದೇಕೆ?

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha) ಹಾಗೂ 'ದಿ ಫ್ಯಾಮಿಲಿ ಮ್ಯಾನ್' ಖ್ಯಾತಿಯ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಅವರ ವಿವಾಹವು ಇತ್ತೀಚೆಗೆ ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ (Coimbatore Isha Yoga Center) ನೆರವೇರಿತು. ಡಿಸೆಂಬರ್ 1 ರಂದು ಅತ್ಯಂತ ಸರಳವಾಗಿ ಹಾಗೂ ಯೋಗ ಸಂಪ್ರದಾಯದಂತೆ ನಡೆದ ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅಭಿಮಾನಿಗಳು ಹಾಗೂ ಸಿನಿ ಗಣ್ಯರು ನೂತನ ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ, ಈ ಸಂತಸದ ಸುದ್ದಿಯ ನಡುವೆಯೇ ನೆಟಿಜನ್‌ಗಳ ಕಣ್ಣು ರಾಜ್ ನಿಡಿಮೋರು ಅವರ ಮಾಜಿ ಪತ್ನಿ ಶ್ಯಾಮಲಿ ಡೇ (Shhyamali De) ಅವರ ಕಡೆಗೂ ನೆಟ್ಟಿತ್ತು ಎಂಬುದು ಸುಳ್ಳಲ್ಲ.

ರಾಜ್ ನಿಡಿಮೋರು ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಂತೆಯೇ, ಅವರ ಮಾಜಿ ಪತ್ನಿ ಶ್ಯಾಮಲಿ ಡೇ ಅವರ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ಸಹಜವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿತ್ತು. ಮದುವೆಗೂ ಮುನ್ನ ಹಾಗೂ ಮದುವೆಯಾದ ಒಂದು ದಿನದ ನಂತರ ಶ್ಯಾಮಲಿ ಅವರು ಹಂಚಿಕೊಂಡಿದ್ದ ಕೆಲವು ನಿಗೂಢ ಪೋಸ್ಟ್‌ಗಳು ಈ ಊಹಾಪೋಹಗಳಿಗೆ ತುಪ್ಪ ಸುರಿದಿದ್ದವು. ಇದೀಗ ಸಮಂತಾ ಮತ್ತು ರಾಜ್ ಮದುವೆಯಾದ ಕೆಲವು ದಿನಗಳ ನಂತರ, ಶ್ಯಾಮಲಿ ಡೇ ಅವರು ಮೌನ ಮುರಿದಿದ್ದು, ಸುದೀರ್ಘವಾದ ಹಾಗೂ ಭಾವುಕವಾದ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಿದ್ದೆಯಿಲ್ಲದ ರಾತ್ರಿ ಮತ್ತು ಕೃತಜ್ಞತೆ:

ಶ್ಯಾಮಲಿ ಡೇ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಮಾತುಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ. "ನಾನು ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡುತ್ತಾ ಕಳೆದೆ. ಬಹಳಷ್ಟು ಆಲೋಚನೆಗಳು ನನ್ನ ಮನಸ್ಸಿನಲ್ಲಿ ಸುಳಿದಾಡಿದವು. ಅಂತಿಮವಾಗಿ, ನನಗೆ ಹರಿದು ಬರುತ್ತಿರುವ ಎಲ್ಲ ಒಳ್ಳೆಯತನ ಮತ್ತು ಹಾರೈಕೆಗಳನ್ನು ಒಪ್ಪಿಕೊಳ್ಳದಿರುವುದು ಕೃತಜ್ಞತೆ ಇಲ್ಲದಂತಾಗುತ್ತದೆ ಎಂದು ಅರಿವಾಯಿತು. ನಾನು ಕಳೆದ ಹಲವು ವರ್ಷಗಳಿಂದ 'ಟ್ವಿನ್ ಹಾರ್ಟ್ಸ್' (Twin Hearts) ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದೇನೆ. ತಾಯಿ ಭೂಮಿ ಹಾಗೂ ಸಮಸ್ತ ಜೀವಿಗಳಿಗೆ ಪ್ರೀತಿ, ಶಾಂತಿ, ಕ್ಷಮೆ ಮತ್ತು ಒಳ್ಳೆಯದನ್ನು ಬಯಸುವುದು ಈ ಧ್ಯಾನದ ಭಾಗವಾಗಿದೆ. ನನ್ನ ಸ್ನೇಹಿತೆಯೊಬ್ಬರು ನೆನಪಿಸಿದಂತೆ, ನಾನೀಗ ಪಡೆಯುತ್ತಿರುವುದು ಆ ಶಕ್ತಿಯ ಪ್ರತಿಫಲವಷ್ಟೇ," ಎಂದು ಅವರು ಬರೆದುಕೊಂಡಿದ್ದಾರೆ.

ಮುಂದುವರಿದು, "ನನ್ನ ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿರ್ವಹಿಸಲು ನನಗೆ ಯಾವುದೇ ಪಿಆರ್ (PR) ತಂಡವಿಲ್ಲ, ಸಿಬ್ಬಂದಿಗಳಿಲ್ಲ. ನಾನೇ ಸ್ವತಃ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೇನೆ. ಆದರೆ ಪ್ರಸ್ತುತ ನಾನು ನನ್ನ ಸಂಪೂರ್ಣ ಗಮನವನ್ನು ಬೇಡುವ ಗಂಭೀರ ಸಮಸ್ಯೆಯೊಂದನ್ನು ಎದುರಿಸುತ್ತಿದ್ದೇನೆ," ಎಂದು ಅವರು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಶ್ಯಾಮಲಿ ಅವರ ನೋವಿಗೆ ಅಸಲಿ ಕಾರಣವೇನು?

ನೆಟಿಜನ್‌ಗಳು ಭಾವಿಸಿದಂತೆ ಶ್ಯಾಮಲಿ ಅವರ ಈ ಬೇಸರಕ್ಕೆ ಕೇವಲ ಮಾಜಿ ಪತಿಯ ಮದುವೆ ಕಾರಣವಲ್ಲ. ಅವರು ತಮ್ಮ ಪೋಸ್ಟ್‌ನಲ್ಲಿ ತಾವೇಕೆ ದುಃಖದಲ್ಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. "ನವೆಂಬರ್ 9 ರಂದು ನನ್ನ ಜ್ಯೋತಿಷ್ಯ ಗುರುಗಳಿಗೆ ಸ್ಟೇಜ್ 4 ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ದುರದೃಷ್ಟವಶಾತ್, ಕ್ಯಾನ್ಸರ್ ಅವರ ಮೆದುಳು ಸೇರಿದಂತೆ ದೇಹದ ಹಲವು ಭಾಗಗಳಿಗೆ ಹರಡಿದೆ. ಇಂತಹ ಸಮಯದಲ್ಲಿ ನನ್ನ ಗಮನ ಎಲ್ಲಿರಬೇಕು ಎಂಬುದನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ," ಎಂದು ಶ್ಯಾಮಲಿ ತಮ್ಮ ಗುರುಗಳ ಅನಾರೋಗ್ಯದ ಬಗ್ಗೆ ತಿಳಿಸಿದ್ದಾರೆ.

ತಮ್ಮ ಗುರುಗಳ ಅನಾರೋಗ್ಯದ ಸುದ್ದಿ ಕೇಳಿ ಆಘಾತಕ್ಕೊಳಗಾಗಿರುವ ಶ್ಯಾಮಲಿ, ಈ ಕಠಿಣ ಸಮಯದಲ್ಲಿ ತಮಗೆ ಸಾಂತ್ವನ ಹೇಳಿದ ಹಾಗೂ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅಂತಿಮವಾಗಿ, "ದಯವಿಟ್ಟು ಈ ಜಾಗವನ್ನು (ಕಾಮೆಂಟ್ ಸೆಕ್ಷನ್) ಸ್ವಚ್ಛವಾಗಿಡಿ. ಪ್ರತಿಯೊಬ್ಬರಿಗೂ ಮತ್ತು ಪ್ರತಿಯೊಂದು ಜೀವಿಗೂ ಉತ್ತಮ ಆರೋಗ್ಯ, ಸಂತೋಷ, ಸಮೃದ್ಧಿ ಮತ್ತು ಆಧ್ಯಾತ್ಮಿಕತೆ ಸಿಗಲಿ," ಎಂದು ವಿನಂತಿಸಿಕೊಳ್ಳುವ ಮೂಲಕ ತಮ್ಮ ಪೋಸ್ಟ್ ಅನ್ನು ಅಂತ್ಯಗೊಳಿಸಿದ್ದಾರೆ.

ಸರಳವಾಗಿ ನಡೆದ ಸಮಂತಾ-ರಾಜ್ ವಿವಾಹ:

ಇನ್ನು ಸಮಂತಾ ಮತ್ತು ರಾಜ್ ನಿಡಿಮೋರು ಅವರ ಮದುವೆಯ ವಿಚಾರಕ್ಕೆ ಬರುವುದಾದರೆ, ಈ ಜೋಡಿ 'ಭೂತ ಶುದ್ಧಿ ವಿವಾಹ' ಎಂಬ ವಿಶಿಷ್ಟ ಯೋಗ ಸಂಪ್ರದಾಯದ ಪ್ರಕಾರ ಹಾರ ಬದಲಾಯಿಸಿಕೊಂಡಿದ್ದಾರೆ. ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಸಮಾರಂಭದ ಫೋಟೋಗಳು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿವೆ. ಸದ್ಯ ಶ್ಯಾಮಲಿ ಡೇ ಅವರ ಈ ಪೋಸ್ಟ್, ಅವರು ಎದುರಿಸುತ್ತಿರುವ ವೈಯಕ್ತಿಕ ನೋವು ಮತ್ತು ಅವರು ತೋರಿರುವ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತಿದೆ.

https://www.instagram.com/shhyamalide/?hl=en 

https://www.instagram.com/shhyamalide/?hl=en

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?