ಅಲ್ಲು ಅರ್ಜುನ್-ಸುಕುಮಾರ್ ಮಧ್ಯೆಯ ವಾರ್​ಗೆ ಬಿತ್ತಾ ಬ್ರೇಕ್?: ಅರ್ಧಕ್ಕೆ ನಿಂತೇ ಹೋಗುತ್ತಾ ಪುಷ್ಪ 2 ಸಿನಿಮಾ?

Published : Aug 23, 2024, 04:50 PM IST
ಅಲ್ಲು ಅರ್ಜುನ್-ಸುಕುಮಾರ್ ಮಧ್ಯೆಯ ವಾರ್​ಗೆ ಬಿತ್ತಾ ಬ್ರೇಕ್?: ಅರ್ಧಕ್ಕೆ ನಿಂತೇ ಹೋಗುತ್ತಾ ಪುಷ್ಪ 2 ಸಿನಿಮಾ?

ಸಾರಾಂಶ

ಇಬ್ಬರ ಜಗಳಕ್ಕೆ ಪುಷ್ಪ2 ಸಿನಿಮಾ ನಿಂತೇ ಹೋಯ್ತು ಅಂತೆಲ್ಲಾ ಸೌತ್ ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು ಅಲ್ಲು ಅರ್ಜುನ್ ಹಾಗು ನಿರ್ದೇಶಕ ಸುಕುಮಾರ್​ ಜಗಳದ ವಿಚಾರ. ಪುಷ್ಪ 2 ಚಿತ್ರದ ಕೊನೆ ಹಂತದ ಶೂಟಿಂಗ್ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. 

ಅಲ್ಲು ಅರ್ಜುನ್ ಸುಕುಮಾರ್ ನಡುವೆ ವಾರ್​.. ಅರ್ಧಕ್ಕೆ ನಿಂತೇ ಹೋಗುತ್ತಾ ಪುಷ್ಪ 2 ಸಿನಿಮಾ.?. ಹೀಗೊಂದು ಟಾಕ್​ ಸೌತ್ ಸಿನಿ ಜಗತ್ತನ್ನ ಆವರಿಸಿಕೊಂಡಿತ್ತು. ಇದು ನಿಜ ಆಯ್ತಾ..? ಅಥವ ಆ ವಾರ್​ ವಿವಾದಕ್ಕೆ ಅಲ್ಲು ಅರ್ಜುನ್ ಸುಕುಮಾರ್ ತೆರೆ ಎಳೆದ್ರಾ..? ಈ ಬಗ್ಗೆ ಸರ್​ಪ್ರೈಸ್​ ಸುದ್ದಿಯೊಂದು ಟಾಲಿವುಡ್‌ನಿಂದಲೇ ಎದ್ದು ಬಂದಿದೆ. ಅದೇನು ಅಂತ ನೋಡೋಣ ಬನ್ನಿ. ಅಲ್ಲು ಅರ್ಜುನ್ ನಿರ್ದೇಶಕ ಸುಕುಮಾರ್​ ಕಿತ್ತಾಡಿಕೊಂಡಿದ್ದಾರೆ. ಗಂಡ ಹಂಡತಿ ಜಗಳದಿಂದ ಕೂಸು ಬಡವಾಯ್ತು ಅನ್ನೋ ಹಾಗೆ ಅಲ್ಲು ಅರ್ಜುನ್ ಸುಕುಮಾರ್​ ಜಗಳದಿಂದ ಪುಷ್ಪ 2 ಸಿನಿಮಾ ಬಡವಾಯ್ತು. 

ಇಬ್ಬರ ಜಗಳಕ್ಕೆ ಪುಷ್ಪ2 ಸಿನಿಮಾ ನಿಂತೇ ಹೋಯ್ತು ಅಂತೆಲ್ಲಾ ಸೌತ್ ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು ಅಲ್ಲು ಅರ್ಜುನ್ ಹಾಗು ನಿರ್ದೇಶಕ ಸುಕುಮಾರ್​ ಜಗಳದ ವಿಚಾರ. ಪುಷ್ಪ 2 ಚಿತ್ರದ ಕೊನೆ ಹಂತದ ಶೂಟಿಂಗ್ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ನಿರ್ದೇಶಕ ಸುಕುಮಾರ್ ಮೇಲಿನ ಸಿಟ್ಟಿಗೆ ನಟ ಅಲ್ಲು ಅರ್ಜುನ್ ಗಡ್ಡ ತೆಗೆದು ಟ್ರಿಪ್ ಹೋಗಿದ್ದಾರೆ ಅಂತ ದೊಡ್ಡ ಸುದ್ದಿಯಾಗಿತ್ತು. ಆದ್ರೆ ಈಗ ಇಬ್ಬರ ವಾರ್​ಗೆ ಬ್ರೇಕ್ ಬಿದ್ದಿದೆ. ಒಂದೇ ವೇಧಿಕೆ ಮೇಲೆ ಬಿನ್ನಿ, ಸುಕುಮಾರ್​ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

ಅಷ್ಟೆ ಅಲ್ಲ ಅಲ್ಲು ಅರ್ಜುನ್ ಪುಷ್ಪ 2 ಬಗ್ಗೆ ಭರ್ಜರಿ ಸುದ್ದಿಯನ್ನ ಬಾಯ್ಬಿಟ್ಟಿದ್ದಾರೆ. ‘ಪುಷ್ಪ 2 ಸಿನಿಮಾ ಬರ್ತಿರೋ ವಿಧಾನ ಬೇರೆಯದೇ ರೀತಿ ಇದೆ. ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತೆ. ನಾನು ಈಗ ಏನನ್ನೂ ಹೇಳುವುದಿಲ್ಲ. ಡಿಸೆಂಬರ್ 6ಕ್ಕೆ ತಗ್ಗೋ ಮಾತೇ ಇಲ್ಲ. ಇದು ಫಿಕ್ಸ್’. ಅಲ್ಲು ಅರ್ಜುನ್ ರ ಈ ಮಾತು ಕೇಳಿ ಅಲ್ಲೇ ಇದ್ದ ನಿರ್ದೇಶಕ ಸುಕುಮಾರ್ ಮುಗುಳು ನಕ್ಕಿದ್ದಾರೆ. ಪುಷ್ಪ2 ಬಗ್ಗೆ ಈಗ ಏನನ್ನು ಹೇಳಲ್ಲ. ಡಿಸೆಂಬರ್​ 6ಕ್ಕೆ ತಗ್ಗೋ ಮಾತೇ ಇಲ್ಲ ಅಂತ ಅಲ್ಲು ಅರ್ಜುನ್ ಹೇಳುತ್ತಿದ್ದಂತೆ ಅಲ್ಲಿದ್ದವರಿಂದ ಶಿಳ್ಳೆ ಚಪ್ಪಾಳೆ ಬಿದ್ವು. 

ಕಾಂತಾರ ಚಾಪ್ಟರ್​ 1 ಸೀಕ್ರೆಟ್ ಬಿಚ್ಚಿಟ್ಟ ರಿಷಬ್ ಶೆಟ್ಟಿ: ಸಮರ ವೀರನಾಗಿ ಹೊಸ ಅವತಾರ ಎತ್ತಿದ ಡಿವೈನ್ ಸ್ಟಾರ್!

ಆ ಕಡೆ ಸುಕುಮಾರ್ ಕೂಡ ಮೈಕ್ ಎತ್ತಿಕೊಂಡು ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ದಯವಿಟ್ಟು ಡಿಸ್ಟರ್ಬ್ ಮಾಡಬೇಡಿ ಅಂದ್ರು. ಇವರಿಬ್ಬರ ಬಾಂಡಿಂಗ್ ನೋಡಿ ಈಗ ಇಬ್ಬರು ಜಗಳ ಮಾಡಿಕೊಳ್ಳೋಕೆ ಸಾಧ್ಯವೇ ಇಲ್ಲ. ಪುಷ್ಪ2 ರಿಲೀಸ್​ ಬಗ್ಗೆ ಯಾವ್ದೇ ಭಯ ಬೇಡ ಅಂತ ಮತ್ತೆ ಮಾತು ಎತ್ತಿದ್ದಾರೆ. ಏನಿ ವೇ ಸಿನಿಮಾ ತಂಡ ಅಂದ್ಮೇಲೆ ಅಲ್ಲಿ ಜಗಳ ಇದ್ದಿದ್ದೆ. ಅದನ್ನ ಮರೆತು ಮುಂದೆ ಹೋದ್ರೆ ಅದ್ಭುತ ಸಿನಿಮಾ ಮಾಡೋಕೆ ಸಾಧ್ಯ ಅನ್ನೋದಂತು ಸತ್ಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?