ಮದ್ಯಕ್ಕಾಗಿ ಶಿಷ್ಯನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಗಾಯಕ; ವಿಡಿಯೋ ವೈರಲ್

Published : Jan 28, 2024, 02:01 PM IST
ಮದ್ಯಕ್ಕಾಗಿ ಶಿಷ್ಯನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಗಾಯಕ; ವಿಡಿಯೋ ವೈರಲ್

ಸಾರಾಂಶ

ಜನಪ್ರಿಯ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ತನ್ನ ಶಿಷ್ಯನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸೋಷ್ಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಚರ್ಚೆಯಾಗುವುದು ತಿಳಿಯುತ್ತಿದ್ದಂತೆಯೇ ಈ ಕೃತ್ಯಕ್ಕೆ ತೇಪೆ ಹಾಕುವ ಕೆಲಸವನ್ನು ಗಾಯಕ ಮಾಡಿದ್ದಾರೆ. 

ಹೆಸರಾಂತ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ಉದ್ಯೋಗಿಯೊಬ್ಬನಿಗೆ ಮದ್ಯದ ಬಾಟಲ್ ಬಗ್ಗೆ ಕೇಳಿ ಕೋಪದಲ್ಲಿ ಕೆಂಡಾಮಂಡಲವಾಗಿ ಶೂ ತೆಗೆದುಕೊಂಡು ಹಿಗ್ಗಾಮುಗ್ಗಾ ಬಾರಿಸುವ ವಿಡಿಯೋ ವೈರಲ್ ಆಗಿದೆ.

ಗಾಯಕನು ನನ್ನ ಬಾಟಲ್ ಎಲ್ಲಿದೆ ಎಂದು ಕೇಳುತ್ತಾ ವ್ಯಕ್ತಿಗೆ ಥಳಿಸಿದ್ದಾರೆ. ಇದರಲ್ಲಿ ಉದ್ಯೋಗಿಯು 'ನನಗೆ ಗೊತ್ತಿಲ್ಲ' ಎಂದು ಹೇಳುವುದನ್ನು ಕೇಳಬಹುದು. ಅಷ್ಟಾದರೂ ಸುಮ್ಮನಾಗದ ಗಾಯಕ ಆತನನ್ನು ಎಳೆದಾಡಿ ಬಾರಿಸುತ್ತಿದ್ದಾರೆ. ಶೂನಲ್ಲಿ ಹೊಡೆಯುವುದಷ್ಟೇ ಅಲ್ಲ, ಕಪಾಳಮೋಕ್ಷ ಮಾಡುವುದನ್ನು ಕೂಡಾ ಕಾಣಬಹುದು. ಈ ವಿಡಿಯೋ ವೈರಲ್ ಆಗಿ ಎಲ್ಲೆಡೆ ಗಾಯಕನ ವಿರುದ್ಧ ಮಾತುಗಳು ಕೇಳಿ ಬರುತ್ತಿದ್ದಂತೆಯೇ ಇದು 'ಉಸ್ತಾದ್ ಮತ್ತು ಶಾಗಿರ್ದ್ ನಡುವಿನ ವೈಯಕ್ತಿಕ ವಿಷಯ' ಎಂದು ತೇಪೆ ಹಾಕುವ ಕೆಲಸವನ್ನು ಗಾಯಕ ಮಾಡಿದ್ದಾರೆ. 

ಬಹುಕಾಲದ ಗೆಳತಿ ಪೂಜಾ ಕೈ ಹಿಡಿದ 'ಟಗರುಪಲ್ಯ' ನಟ ನಾಗಭೂಷಣ್

ಪಾಕಿಸ್ತಾನಿ ಹಿನ್ನಲೆ ಮತ್ತು ಕವ್ವಾಲಿ ಗಾಯಕ ರಹತ್ ಫತೇಹ್ ಅಲಿ ಖಾನ್ ಪಕ್ಕದಲ್ಲಿ ವ್ಯಕ್ತಿಯು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಮಯದಲ್ಲಿ ಬಾಟಲ್‌ನಲ್ಲಿ ಪವಿತ್ರ ನೀರು ಇದೆ ಎಂದು ಆ ವ್ಯಕ್ತಿ ಹೇಳುತ್ತಿದ್ದಂತೆ ಅದನನು ಬದಲಿಸಿದ್ದು ಯಾರು ಎಂದು ಕೇಳುತ್ತಾ ಆತನ ಮೇಲೆ ಹಿಂಸಾಚಾರ ನಡೆಸಿದ್ದಾರೆ ಗಾಯಕ. 

ರಾಹತ್ ಫತೇಹ್ ಅಲಿ ಖಾನ್ ಅವರ ಕೃತ್ಯ ಮತ್ತು ನಡವಳಿಕೆಯನ್ನು ಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಈ ಘಟನೆಯು ಆನ್‌ಲೈನ್‌ನಲ್ಲಿ ಬಹಳ ಟೀಕೆಗೆ ಕಾರಣವಾಯಿತು. ಇದರ ನಂತರ, ಹಿನ್ನೆಲೆ ಗಾಯಕ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿ ಇಡೀ ಘಟನೆಯನ್ನು ವಿವರಿಸಲು ಪ್ರಯತ್ನಿಸಿದರು. ಇದು ಕೂಡಾ ವಿವಿಧ ವಲಯಗಳಿಂದ ಟೀಕೆಗೆ ಗುರಿಯಾಯಿತು.

ರಾವಣನ ಮಗಳಾ ಸೀತೆ? ಜಾನಕಿಯ ಕುರಿತ 6 ಅಪರೂಪದ ವಿಷಯಗಳು

ವಿವರಣೆ ವೀಡಿಯೊದಲ್ಲಿ, 'ಅವನು ನನ್ನ ಮಗನಿದ್ದಂತೆ ಮತ್ತು ಇದು ಉಸ್ತಾದ್ ಮತ್ತು ಶಾಗಿರ್ದ್ ನಡುವಿನ ಸಂಬಂಧವಾಗಿದೆ. ನಾವು ಕೆಲವೊಮ್ಮೆ ಒಳ್ಳೆಯ ಕೆಲಸಕ್ಕಾಗಿ ಶಾಗಿರ್ದ್‌ನ ಮೇಲೆ ಪ್ರೀತಿಯನ್ನು ತೋರಿಸುತ್ತೇವೆ ಮತ್ತು ಕೆಲವು ತಪ್ಪುಗಳಿಗೆ ಶಿಕ್ಷೆಯನ್ನು ನೀಡುತ್ತೇವೆ, ' ಎಂದು ಗಾಯಕ ಹೇಳಿದ್ದಾರೆ. ಜೊತೆಗೆ ಆತನ ಬಳಿ ಕ್ಷಮೆ ಯಾಚಿಸಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಹೊಡೆತ ತಿಂದ ವ್ಯಕ್ತಿ ಹಾಗೂ ಆತನ ತಂದೆಯನ್ನು ನಿಲ್ಲಿಸಿಕೊಂಡಿದ್ದಾರೆ.

ಇಲ್ಲಿದೆ ವಿಡಿಯೋ..


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?
ಮಹೇಶ್ ಬಾಬು ಯಾರೆಂದು ನನಗೆ ಗೊತ್ತಿಲ್ಲ, ಪ್ರಭಾಸ್ ಬಿಟ್ಟರೆ ಎಲ್ಲರೂ ಕುಳ್ಳರು.. ಸ್ಟಾರ್ ನಟಿಯ ಹೇಳಿಕೆ ವೈರಲ್!