ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ; ನಟ ವಿಜಯ್ ವಿರುದ್ಧ ಆಕ್ರೋಶ!

Suvarna News   | Asianet News
Published : May 10, 2020, 04:38 PM IST
ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ; ನಟ ವಿಜಯ್ ವಿರುದ್ಧ ಆಕ್ರೋಶ!

ಸಾರಾಂಶ

ವಿಜಯ್ ಸೇತುಪತಿ ವಿರುದ್ಧ ಕೇಳಿ ಬರುತ್ತಿದೆ  ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ . ಅಷ್ಟಕ್ಕೂ ವಿಜಯ್ ಹೇಳಿದ್ದೇನು ?

ಬ್ಯಾಗ್ರೌಂಡ್ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟ ವಿಜಯ್ ಸೇತುಪತಿ ಈಗ  ದಕ್ಷಿಣ ಚಿತ್ರರಂಗದ ಬೇಡಿಕೆಯ ನಾಯಕನಟ ಹಾಗೂ ವಿಲನ್‌ ಆಗಿ ಗುರುತಿಸಿಕೊಂಡಿದ್ದಾರೆ. 16ಕ್ಕೂ ಹೆಚ್ಚು ಬೆಸ್ಟ್‌ ನಟ ಹಾಗೂ ವಿಲನ್ ಪ್ರಶಸ್ತಿ ಪಡೆದಿರುವ ವಿಜಯ್‌ ಹೆಣ್ಣು ಮಕ್ಕಳ ಫೇವರೆಟ್ ಹೀರೋ. ಆದರೀಗ  ಹಿಂದೂ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ ಆರೋಪ ಕೇಳಿ ಬಂದಿದೆ. ಮೊದಲ ಬಾರಿಗೆ ಇಂಥದ್ದೊಂದು ಆರೋಪದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ . 

ಹಿಂದು ದೇವರ ಬಗ್ಗೆ ಹೇಳಿಕೆ:

ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಜಯ್ ಸೇತುಪತಿ ಒಂದು ಪ್ರಸಂಗವನ್ನು ವಿವರಿಸುವ ಮೂಲಕ ಹಿಂದು ಧಾರ್ಮಿಕ ಆಚರಣೆ ಬಗ್ಗೆ ಮಾತನಾಡಿದ್ದಾರೆ. 

'ಚಿಕ್ಕ ಹುಡುಗಿ ತಾತನ ಬಳಿ ಒಂದು ಪ್ರಶ್ನೆ ಕೇಳುತ್ತಿದ್ದಳು. ಯಾಕೆ ತಾತ ದೇವರಿಗೆ ಅಲಂಕಾರ ಮಾಡುವುದನ್ನು ತೋರಿಸುವುದಿಲ್ಲ ಆದರೆ ದೇವರಿಗೆ ಸ್ನಾನ ಮಾಡಿಸುವುದನ್ನು ಮಾತ್ರ ತೋರಿಸುತ್ತಾರೆ ಎಂದು. ಈ ಪ್ರಶ್ನೆಗೆ ನನಗೂ ಉತ್ತರ ತಿಳಿಯಲಿಲ್ಲ' ಎಂದು ಕಾರ್ಯಕ್ರಮದಲ್ಲಿ ವಿಜಯ್ ಮಾತನಾಡಿದ್ದಾರೆ.

ವಿಜಯ್ ದಳಪತಿ 'ಮಾಸ್ಟರ್‌' ಹಾಡಿನಲ್ಲಿ ವಿಜಯ್‌ ಸೇತುಪತಿ; ವಿಡಿಯೋ ವೈರಲ್‌!

ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಅಗುತ್ತಿದ್ದಂತೆ ವಿಜಯ್ ವಿರುದ್ಧ ಅನೇಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 'ಇವರು ವೃತ್ತಿ ಜೀವನದಲ್ಲಿ ಪ್ರಚಾರ ಬೇಕೆಂದು ಹಿಂದು ಧರ್ಮವನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ವಿಜಯ್ ನೀಡಿರುವ ಹೇಳಿಕೆ ತುಂಬಾನೇ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಭಾ ಪೊಲೀಸ್‌ ಕಮಿಷನರ್‌ ಅವರಲ್ಲಿ ಮನವಿ ಮಾಡಿಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್
ತನ್ನ ಮಾತನ್ನೇ ಮುರಿದ ಸಾಯಿ ಪಲ್ಲವಿ.. ಬಾಲಿವುಡ್‌ನಲ್ಲಿ ಇನ್ನೂ ಮಾಡದೇ ಇರುವುದನ್ನು ಮಾಡಿಬಿಟ್ರು!