ಹಿಂದಿ ಚಿತ್ರ ಸೋಲಿನ ಬಳಿಕ ಸೌತ್ ಸಿನಿರಂಗಕ್ಕೆ ಮಾಜಿ ವಿಶ್ವ ಸುಂದರಿ ಮಾನುಷಿ; ಯಾವ ಸಿನಿಮಾದಲ್ಲಿ ನಟನೆ?

Published : Mar 05, 2023, 01:22 PM IST
ಹಿಂದಿ ಚಿತ್ರ ಸೋಲಿನ ಬಳಿಕ ಸೌತ್ ಸಿನಿರಂಗಕ್ಕೆ ಮಾಜಿ ವಿಶ್ವ ಸುಂದರಿ ಮಾನುಷಿ; ಯಾವ ಸಿನಿಮಾದಲ್ಲಿ ನಟನೆ?

ಸಾರಾಂಶ

ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಸೌತ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮಾಜಿ ವಿಶ್ವ ಸುಂದರಿ, ನಟಿ ಮಾನುಷಿ ಚಿಲ್ಲರ್ ಸೌತ್ ಸಿನಿಮಾರಂಗದ ಕಡೆ ಮುಖ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು ಮಾನುಷಿ. ಆ ಸಿನಿಮಾ ಬಳಿಕ ಮಾನುಷಿ ಮತ್ತೆ ತೆರೆಮೇಲೆ ಬಂದಿಲ್ಲ. ಮೊದಲ ಸಿನಿಮಾ ಸೋಲಿನ ಬಳಿಕ ಮಾನುಷಿ ಇದೀಗ ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೌದು, ತೆಲುಗು ಸಿನಿಮಾ ಮೂಲಕ ಮಾನುಷಿ ಸೌತ್ ಸಿನಿಮಾದ ಖಾತೆ ತೆರೆಯುತ್ತಿದ್ದಾರೆ. ಟಾಲಿವುಡ್‌ನ ಖ್ಯಾತ ನಟ ವರುಣ್ ತೇಜ್ ಜೊತೆ ಮಾನುಷಿ ನಟಿಸುತ್ತಿದ್ದಾರೆ. 

ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗುತ್ತಿರುವ ಭಾರತೀಯ ವಾಯುಪಡೆ ಆಧಾರಿತ ಚಿತ್ರಕ್ಕಾಗಿ ಇಬ್ಬರೂ ಜೋಡಿಯಾಗುತ್ತಿದ್ದಾರೆ. ಈ ಚಿತ್ರದಲ್ಲಿ ಮಾನುಷಿ ರಾಡಾರ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾನುಷಿ ಚಿಲ್ಲರ್ ಪ್ರತಿಕ್ರಿಯೆ ನೀಡಿದ್ದು ಈ ಸಿನಿಮಾದಲ್ಲಿ ನಟಿಸಲು ತುಂಬಾ ಉತ್ಸುಕಳಾಗಿದ್ದೀನಿ, ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಿವೆ' ಎಂದು ಹೇಳಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಅವಕಾಶ ನೀಡಿದ ನಿರ್ದೇಶಕರಿಗೆ ಕೃತಜ್ಞನಾಗಿದ್ದೇನೆ.  ಭಾರತೀಯ ವಾಯುಪಡೆಯ ಅಧಿಕಾರಿಗಳ ಜೀವನ ಮತ್ತು ಪ್ರಯಾಣವನ್ನು ತಿಳಿಯಲು ಉತ್ಸುಕನಾಗಿದ್ದೇನೆ' ಎಂದು ಹೇಳಿದರು. ಜೊತೆಗೆ ವರುಣ್ ತೇಜ್ ಜೊತೆ ನಟಿಸುತ್ತಿರುವುದು ಖುಷಿ ಎಂದರು. 

ಹೊಂಬಾಳೆ ಜೊತೆ ಮಾನುಷಿ ಚಿಲ್ಲರ್ ಸಿನಿಮಾ; ಪೃಥ್ವಿರಾಜ್‌ಗೆ ಜೋಡಿಯಾಗ್ತಾರಾ ವಿಶ್ವ ಸುಂದರಿ?

ಅಂದಹಾಗೆ ಚಿತ್ರಕ್ಕೆ ಶಕ್ತಿ ಪ್ರತಾಪ್ ಸಿಂಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಾಹೀರಾತು ನಿರ್ದೇಶಕ ಮತ್ತು ಛಾಯಾಗ್ರಾಹಕ ಆಗಿರುವ ಶಕ್ತಿ ಪ್ರತಾಪ್ ಅವರಿಗೆ ಇದು ಮೊದಲ ಸಿನಿಮಾವಾಗಿದೆ. ಇನ್ನು ಹೆಸಡಿರದ ಈ ಸಿನಿಮಾ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದೆ.  ಈ ಚಿತ್ರಕ್ಕೆ ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ಸ್ ಮತ್ತು ರಿನೈಸಾನ್ಸ್ ಪಿಕ್ಚರ್ಸ್‌ ನಿರ್ಮಾಣ ಮಾಡುತ್ತಿದೆ. ವಿಶೇಷ ಎಂದರೆ ಈ ಸಿನಿಮಾದ ಕಥೆಯನ್ನು ನಿರ್ದೇಶಕ ಶಕ್ತಿ ಪ್ರತಾಪ್ ಸಿಂಗ್ ಜೊತೆಗೆ ಆಮೀರ್ ಖಾನ್ ಮತ್ತು ಸಿದ್ಧಾರ್ಥ್ ರಾಜ್ ಬರೆದಿದ್ದಾರೆ. ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. 

ಝೆರೋಧಾ ಮುಖ್ಯಸ್ಥನ ಜೊತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡೇಟಿಂಗ್; ಫೋಟೋ ವೈರಲ್

ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ ಇದಾಗಿದ್ದು ಈ ಚಿತ್ರದಲ್ಲಿ ಭಾರತ ಕಂಡ ಭೀಕರ ವೈಮಾನಿಕ ದಾಳಿಗಳಲ್ಲಿ ಒಂದನ್ನು ಪ್ರದರ್ಶಿಸುತ್ತದೆ ಎಂದು ವರುಣ್ ತೇಜ್ ಹಿಂದಿನ ಸಂದರ್ಶನದಲ್ಲಿ ಹೈದರಾಬಾದ್ ಟೈಮ್ಸ್‌ಗೆ ತಿಳಿಸಿದ್ದರು. 'ಪಾತ್ರಕ್ಕೆ ತಯಾರಾಗಲು ನಾನು ಕೆಲವು ವಾಯುಪಡೆ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ತೆರೆಯ ಮೇಲೆ ಅವರ ಶೌರ್ಯವನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ಗೌರವವಿದೆ. ಚಿತ್ರಕ್ಕಾಗಿ ನಾನು ಅಪಾರ ತರಬೇತಿಯನ್ನು ಪಡೆದಿದ್ದೇನೆ' ಎಂದು ಹೇಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

45 Movie Trailer Release: ಚೆಲುವೆಯ ನೋಟ ಚೆನ್ನ..ಸಿನಿಮಾ ನೋಡಲೇಬೇಕು ಎಂದು ಸೈಕ್‌ ಮಾಡಿದ ಕಾರಣಗಳಿವು!
ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!