ಪೆಟ್ರೋಲ್ ಬೆಲೆ ಏರಿಕೆ: ವಿರೋಧಿಸದ್ದಕ್ಕೆ ಬಿಗ್‌ಬಿ, ಅಕ್ಷಯ್‌ಗೆ ಕಾಂಗ್ರೆಸ್ ಬೆದರಿಕೆ

Suvarna News   | Asianet News
Published : Feb 19, 2021, 08:04 AM ISTUpdated : Feb 19, 2021, 08:11 AM IST
ಪೆಟ್ರೋಲ್ ಬೆಲೆ ಏರಿಕೆ: ವಿರೋಧಿಸದ್ದಕ್ಕೆ ಬಿಗ್‌ಬಿ, ಅಕ್ಷಯ್‌ಗೆ ಕಾಂಗ್ರೆಸ್ ಬೆದರಿಕೆ

ಸಾರಾಂಶ

ತೈಲ ದರ ಏರಿಕೆ ಖಂಡಿಸದ ಬಚ್ಚನ್‌, ಅಕ್ಷಯ್‌ ಸಿನೆಮಾ ಶೂಟಿಂಗ್‌ಗೆ ಅಡ್ಡಿ: ಕಾಂಗ್ರೆಸ್‌ | ತೈಲ ಬೆಲೆ ಏರಿಕೆ ವಿರೋಧಿಸಿದ ಬಗ್ಗೆ ಕಾಂಗ್ರೆಸ್ ಗರಂ

ಮುಂಬೈ(ಫೆ.19): ಗಗನಕ್ಕೇರಿರುವ ತೈಲ ದರದ ಬಗ್ಗೆ ಖಂಡಿಸದೆ, ಮೌನ ವಹಿಸಿರುವ ನಟರಾದ ಅಮಿತಾಭ್‌ ಬಚ್ಚನ್‌ ಮತ್ತು ಅಕ್ಷಯ್‌ ಕುಮಾರ್‌ ಅವರ ಸಿನಿಮಾಗಳ ಚಿತ್ರೀಕರಣಕ್ಕೆ ತಡೆಯೊಡ್ಡುವುದಾಗಿ ಮಹಾರಾಷ್ಟ್ರ ಕಾಂಗ್ರೆಸ್‌ ಬೆದರಿಕೆ ಹಾಕಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ, ‘ಯುಪಿಎ ಅವಧಿಯಲ್ಲಿ ತೈಲ ದರ ಏರಿಕೆಯಾದಾಗ ಈ ನಟರು ಟ್ವೀಟ್‌ ಮಾಡಿ ಖಂಡಿಸುತ್ತಿದ್ದರು. ಅದರೆ ದೇಶದಲ್ಲಿ ಈಗ ತೈಲ ಬೆಲೆ 100 ರು.ಗೆ ಏರಿಕೆಯಾದರೂ ಮೌನವಾಗಿದ್ದಾರೆ.

'ಹೀಗೆ ಇರೋಣ' ಸ್ನೇಹಿತ 10 ರಾಷ್ಟ್ರಗಳಿಗೆ ಮೋದಿ ಹೇಳಿದ್ದು ಒಂದೇ ಮಾತು

ಒಂದು ವೇಳೆ ಈ ನಟರು ನ್ಯಾಯದ ಪರವಾಗಿ ಮತ್ತು ಜನರ ಪರವಾಗಿ ಮಾತನಾಡದೇ ಇದ್ದರೆ ರಾಜ್ಯದಲ್ಲಿ ಅವರ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

ಈ ಹೇಳಿಕೆ ಬೆನ್ನಲ್ಲೇ, ‘ದೇಶದ ಹಿತಾಸಕ್ತಿಯ ಬಗ್ಗೆ ಟ್ವೀಟ್‌ ಮಾಡುವ ಅಮಿತಾಭ್‌ ಮತ್ತು ಅಕ್ಷಯ್‌ ಕುಮಾರ್‌ ಪರ ಇಡೀ ದೇಶ ಇದೆ’ ಬಿಜೆಪಿ ತಿರುಗೇಟು ನೀಡಿದೆ.

ನಟರ ಪರ ಮಾತನಾಡಿದ ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಅವರು ಕಾಂಗ್ರೆಸ್ ಆತ್ಮವು ಸರ್ವಾಧಿಕಾರವಾಗಿದ್ದು, ಅದು ಪ್ರಜಾಪ್ರಭುತ್ವದ ಮುಖವಾಡವನ್ನು ಧರಿಸಿದೆ. "ಅವರ ಕಚೇರಿ ಅಕ್ಬರ್ ರಸ್ತೆಯಲ್ಲಿರುವುದರಿಂದ, ಅವರು ಅಕ್ಬರ್‌ನ ಹಾದಿಯಲ್ಲಿ ಮಾತ್ರ ನಡೆಯುತ್ತಾರೆ. ಅಮಿತಾಬ್ ಬಚ್ಚನ್ ಅವರ ಬೆದರಿಕೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಶೋಲೆ ಚಿತ್ರದಲ್ಲಿ ಗಬ್ಬರ್ ಸಿಂಗ್ ಅವರಿಂದ ಇದೇ ರೀತಿಯ ಬೆದರಿಕೆಗಳನ್ನು ಅವರು ಎದುರಿಸಿದ್ದರು" ಎಂದು ಟಾಂಗ್ ಕೊಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!