ಹುಂಡಿಗೆ ದಕ್ಷಿಣೆ ಹಾಕೋದು ದೇವರಿಗೆ ಲಂಚ ಕೊಟ್ಟಂತೆ: ನಟಿಯಿಂದ ವಿವಾದದ ಕಿಡಿ!

Suvarna News   | Asianet News
Published : Apr 24, 2020, 04:36 PM ISTUpdated : Apr 24, 2020, 05:02 PM IST
ಹುಂಡಿಗೆ ದಕ್ಷಿಣೆ ಹಾಕೋದು ದೇವರಿಗೆ ಲಂಚ ಕೊಟ್ಟಂತೆ: ನಟಿಯಿಂದ ವಿವಾದದ ಕಿಡಿ!

ಸಾರಾಂಶ

ಹಿಂದು ದೇವಾಲಯಗಳ ಬಗ್ಗೆ ಬೋಲ್ಡ್‌ ಹೇಳಿಕೆ ನೀಡಿದ ನಟಿ. ಸಾರ್ವಜನಿಕವಾಗಿ ಕ್ಷಮೆ ಕೇಳಲು ಒತ್ತಾಯ...

ಕಾಲಿವುಡ್‌ ಸೂಪರ್‌ ಸ್ಟಾರ್‌ ಸೂರ್ಯ ಹಾಗೂ ಪತ್ನಿ ಜೋತಿಕಾ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಈ ಕಾಲಿವುಡ್‌ ನ ಆದರ್ಶ  ದಂಪತಿಗಳು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. 

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಜೋತಿಕಾ ಈ ಹಿಂದೆ ಪಾಲ್ಗೊಂಡ  ಅವಾರ್ಡ್ ಕಾರ್ಯಕ್ರಮದಲ್ಲಿ ಹಿಂದೂ  ದೇವಾಲಯ ಹಾಗೂ ಸಂಪ್ರದಾಯಗಳ ಬಗ್ಗೆ ಬೋಲ್ಡ್‌ ಹೇಳಿಕೆ ನೀಡಿ ವಿವಾದಕ್ಕೆ  ಗುರಿಯಾಗಿದ್ದಾರೆ.  ರಾಜಕಾರಣಿಗಳು ಅಥವಾ ಸೆಲೆಬ್ರಿಟಿಗಳು ತಾವು ಮಾಡಿದ ಪಾಪ ಕರ್ಮಗಳಿಗೋ ಅಥವಾ ಪುಣ್ಯಕ್ಕೋ, ಅಂದುಕೊಂಡ ಕೆಲಸ ನೆರವೇರಲಿ ಎಂದು ಹುಂಡಿಗೆ ಲಂಚದ ರೀತಿಯಲ್ಲಿ ಹಣ ಹಾಕುತ್ತಾರೆ. ಅದರ ಬದಲು ಆಸ್ಪತ್ರೆಗೆ ಹಾಗೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಿ ಎಂದು ಹೇಳಿರುವ ವಿಡಿಯೋ ಈಗ ವೈರಲ್‌ ಆಗುತ್ತಿದ್ದು ಕೆಲ ಅಭಿಮಾನಿಗಳಿಗೆ  ಜೋತಿಕಾಳ  ನೇರ ಮಾತು ಹಿಂದೂ ಧರ್ಮಕ್ಕೆ ಮಾಡಿದ  ಅವಮಾನದ ರೀತಿ ಕಾಣಿಸಿದೆ.

ಚಿತ್ರರಂಗ ಕಾರ್ಮಿಕರಿಗೆ 10 ಲಕ್ಷ ರೂ ಪರಿಹಾರ ನೀಡಿದ ಕಾಲಿವುಡ್‌ ಬ್ರದರ್ಸ್!

ಅಷ್ಟೇ ಅಲ್ಲದೆ ' ಹಿಂದಿನ ಕಾಲದಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಯಾಕೆ ಅಷ್ಟೊಂದು ಹಣ ಖರ್ಚು ಮಾಡಿದ್ದಾರೆ ಎಂದು ಯೋಚಿಸುತ್ತಲೇ  ಇರುವೆ' ಎಂದು ಮಾತನಾಡಿದ್ದಾರೆ.  ಜೋತಿಕಾಳ ಮಾತು ಕೇಳಿ ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ಕ್ಷಮೆ ಕೇಳಬೇಕೆಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.ಈ ಮಧ್ಯೆ ಎಲ್ಲೆಡೆ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ಜೋತಿಕಾ ಪತಿ ನಟ ಸೂರ್ಯ 10ಲಕ್ಷ ರೂ. ನೇರವು ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!