ವಿಜಯ್ ದಳಪತಿ ಮನೆಯಲ್ಲಿ ಬಾಂಬ್; 21 ವರ್ಷದ ಸೈಕೋ ಹುಡುಗನಿಂದ ಕಾಲ್!

Suvarna News   | Asianet News
Published : Jul 06, 2020, 03:13 PM IST
ವಿಜಯ್ ದಳಪತಿ ಮನೆಯಲ್ಲಿ ಬಾಂಬ್; 21 ವರ್ಷದ ಸೈಕೋ ಹುಡುಗನಿಂದ ಕಾಲ್!

ಸಾರಾಂಶ

ಚೆನ್ನೈ ಪೊಲೀಸ್‌ಗೆ ಕರೆ ಮಾಡಿ ವಿಜಯ್ ದಳಪತಿ ಮನೆಯಲ್ಲಿ ಬಾಂಬ್‌ ಇದೆ ಎಂದ ಫೋನ್ ಮಾಡಿದ  21 ವರ್ಷದ ಮಾನಸಿಕ ಅಸ್ವಸ್ಥ. ಆಮೇಲೆ ಏನಾಯ್ತು ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ 

ಕಾಲಿವುಡ್‌ ಮಾಸ್ಟರ್‌ ಹೀರೋ ವಿಜಯ್ ದಳಪತಿ ಮನೆಯಲ್ಲಿ ಬಾಂಬ್‌ ಇದೆ ಎಂಬ ಸುದ್ದಿ ರಾತ್ರೋರಾತ್ರಿ ಅನೇಕರ ನಿದ್ದೆಗೆಡಿಸಿತ್ತು ಅದರಲ್ಲೂ ಅಕ್ಕ-ಪಕ್ಕದ ಮನೆಯವರು ಭಯಭೀತರಾಗಿ ರೋಡಿಗೆ ಬಂದು ನಿಂತುಕೊಂಡರು. ಇಡೀ ಮನೆ ತನಿಖೆ ಮಾಡಿದ ನಂತರ ಯಾವುದೇ ಬಾಂಬ್ ಪತ್ತೆಯಾಗದ ಕಾರಣ ಪೊಲೀಸರು ಕರೆ ಮಾಡಿರುವ ವ್ಯಕ್ತಿ ಯಾರೆಂದು ವಿಚಾರಣೆ ಪ್ರಾರಂಭಿಸಿದರು. 

ರಜನಿಕಾಂತ್ ಮನೆಯಲ್ಲಿ ಬಾಂಬ್; ಯಾರ ಕೈವಾಡವಿದು! 

 ಜುಲೈ 4ರಂದು ಮಧ್ಯರಾತ್ರಿ 4 ಗಂಟೆಗೆ ತಮಿಳುನಾಡು ಪೊಲೀಸ್‌ ಮಾಸ್ಟರ್ ಕಂಟ್ರೋಲ್‌ ರೂಮ್‌ಗೆ ನಟ ವಿಜಯ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಒಂದು ದೂರವಾಣಿ ಕರೆ ಬರುತ್ತದೆ. ಕರೆ ಮಾಡಿದವರು ಯಾರೆಂದು ತಿಳಿದುಕೊಳ್ಳದೇ ಕೂಡಲೇ ಸ್ಥಳಕ್ಕೆ ಧಾವಿಸುತ್ತಾರೆ. ಆದರೆ ಅದು ಹುಸಿ ಬಾಂಬ್ ಕರೆ ಎಂದು ತಿಳಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಸೈಕೋ ಕಾಲ್:

ವಿಚಾರಣೆ ಶುರು ಮಾಡಿದ ಪೊಲೀಸರು ಕರೆ ಮಾಡಿದ ವ್ಯಕ್ತಿ ಯಾರೆಂದು ಪತ್ತೆ ಹಚ್ಚಿದ್ದಾರೆ. ಈ ಹಿಂದೆಯೂ ಇಂತದೇ ಅನೇಕ ಪ್ರ್ಯಾಂಕ್ ಕಾಲ್ ಮಾಡಿದ್ದ ವ್ಯಕ್ತಿಯೇ ಈ ಸಲವೂ ಮಾಡಿರುವುದಾಗಿ ತಿಳಿದು ಬಂದಿದೆ. ಮೂಲತಃ ಚೆನ್ನೈನ ವಿಲ್ಲುಪುರಂನಲ್ಲಿರುವ ಮರಕ್ಕನಂ ಈತ 21 ವರ್ಷದ ವ್ಯಕ್ತಿ ಎಂದು ಹೇಳಲಾಗಿದೆ. 

ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ, ಪುದುಚರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಪುದುಚರಿ ರಾಜ್ಯಪಾಲರಾದ ಕಿರಣ್ ಬೇಡಿ ಮನೆಯಲ್ಲಿ ಬಾಂಡ್‌ ಇಟ್ಟಿರುವುದಾಗಿ ಈ ಹಿಂದೆಯೂ ಈ ವ್ಯಕ್ತಿ ಕಾಲ್ ಮಾಡಿದ್ದ ಎನ್ನಲಾಗಿದೆ. ಪ್ರತೀ  ಪ್ರಕರಣದ ಹಿಂದೆಯೂ ಈತನಿದ್ದು, ಪೊಲೀಸರು ವಾರ್ನಿಂಗ್ ಕೊಟ್ಟು ಕಳುಹಿಸುತ್ತಿದ್ದರು. 

#HappyBirthDay Vijay; ತಲಪತಿಗೆ 46ನೇ ಹುಟ್ಟಿದ ಹಬ್ಬ

' ಆತ ಮಾನಸಿಕವಾಗಿ ಸರಿ ಇಲ್ಲದ ಕಾರಣ ಪೋಷಕರು ಅತನಿಗೆ  ಪೋನ್ ನೀಡಿಲ್ಲ ಆದರೂ ಆತ ಕುಟುಂಬಸ್ಥರ ಪೋನ್ ಬಳಸಿ ಇಂತಹ  ಪ್ರ್ಯಾಂಕ್ ಕಾಲ್ ಮಾಡುತ್ತಾನೆ. ಮಾನಸಿಕವಾಗಿ ಸ್ಥಿರವಿಲ್ಲದ ಕಾರಣ ನಾವು ಯಾವುದೇ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲು  ಸಾಧ್ಯವಿಲ್ಲ' ಎಂದು ಚೆನ್ನೈ ಪೊಲೀಸರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?