ರಣವೀರ್​ ಸಿಂಗ್​ ಅಂಡರ್​ವೇರ್​ ಹಾಕಲ್ವಂತೆ, ಆಲಿಯಾ ಪತಿಗೆ ದೀಪಿಕಾ ಕಾಂಡೋಮ್​ ಕೊಡ್ತಾರಂತೆ! ಏನಿದು?

Published : Dec 11, 2023, 12:17 PM IST
 ರಣವೀರ್​ ಸಿಂಗ್​ ಅಂಡರ್​ವೇರ್​ ಹಾಕಲ್ವಂತೆ, ಆಲಿಯಾ ಪತಿಗೆ ದೀಪಿಕಾ ಕಾಂಡೋಮ್​ ಕೊಡ್ತಾರಂತೆ! ಏನಿದು?

ಸಾರಾಂಶ

ನಟ ರಣವೀರ್​ ಸಿಂಗ್​ ಅಂಡರ್​ವೇರ್​ ಹಾಕಲ್ವಂತೆ, ನಟಿ ದೀಪಿಕಾ ಕಾಂಡೋಮ್​ ಕೊಡ್ತಾರಂತೆ!  ಕಾಫಿ ವಿತ್​ ಕರಣ್​ ಷೋನಲ್ಲಿ ಏನು ಇದೆಲ್ಲಾ?    

ಹಿಂದಿ ಚಾನೆಲ್​ ವೀಕ್ಷಿಸುವ ಪ್ರೇಕ್ಷಕರಿಗೆ ಕಾಫಿ ವಿತ್​ ಕರಣ್​ ಬಗ್ಗೆ ತಿಳಿದೇ ಇದೆ. ಈ ಕಾರ್ಯಕ್ರಮ ನಡೆಸಿಕೊಡುತ್ತಿರುವವರು ಇನ್ನೂ ಅವಿವಾಹಿತರಾಗಿಯೇ ಇರೋ ನಿರ್ದೇಶಕ ಕರಣ್​ ಜೋಹರ್​. ಆದರೆ ಈ ಕಾರ್ಯಕ್ರಮ ಸದಾ ವಿವಾದಗಳಿಂದಲೇ ಫೇಮಸ್ಸು. ಅದರಲ್ಲಿಯೂ ಸೆಕ್ಸ್​ ಪ್ರಶ್ನೆಗಳಿಗೇ ಇಲ್ಲಿ ಪ್ರಾಧಾನ್ಯ. ಅಶ್ಲೀಲ ಪ್ರಶ್ನೆಗಳನ್ನು ಗೆಸ್ಟ್​ಗಳಿಗೆ ಕೇಳುವ ಮೂಲಕ ತಮ್ಮ ಷೋನ ಟಿಆರ್​ಪಿ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನುವುದೂ ಸುಳ್ಳಲ್ಲ. ಜನರೂ ಬೈಯುತ್ತಲೇ ಇಂಥ ಷೋಗಳನ್ನು ನೋಡುವುದು ಈ ರೀತಿಯ ರಿಯಾಲಿಟಿ ಷೋಗಳ ಟಿಆರ್​ಪಿ ರೇಟ್​ ನೋಡಿದರೆ ತಿಳಿಯುತ್ತದೆ. ಇವರ ಈ ಷೋ ಇದಾಗಲೇ ಹಲವಾರು ಸೆಲೆಬ್ರಿಟಿಗಳ ಗುಟ್ಟುಗಳನ್ನು ಬಯಲು ಮಾಡಿದ್ದೂ ಇದೆ, ಇದೇ ವೇಳೆ ಹಲವು ರೀತಿಯ ಕಾಂಟ್ರವರ್ಸಿಗಳನ್ನು ಸೃಷ್ಟಿಸಿದ್ದೂ ಇದೆ. ಇದೀಗ ಇಂಥದ್ದೇ ಕೆಲವು ಕಾಂಟ್ರವರ್ಸಿಗಳು ಹಾಗೂ ನಟ-ನಟಿಯರ ತೀರಾ ವೈಯಕ್ತಿಯ ವಿಚಾರಗಳ ಥ್ರೋ ಬ್ಯಾಕ್​ ಇರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿವೆ. 

ಅದರಲ್ಲಿ ಮೊದಲನೆಯದ್ದಾಗಿ ಬಾಲಿವುಡ್​ನ ಕ್ಯೂಟ್​ ಕಪಲ್​ಗಳಲ್ಲಿ ಒಬ್ಬರು ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ. ಈ ಜೋಡಿ ಮದುವೆಯಾಗಿ ಕಳೆದ ನವೆಂಬರ್​ 14ಕ್ಕೆ ಐದು ವರ್ಷಗಳು ಕಳೆಯಲಿವೆ. 2018ರ ನವೆಂಬರ್​ 14ರಂದು ಜೋಡಿ  ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿತು. ಕುತೂಹಲದ ವಿಷಯವೇನೆಂದರೆ, ಮದುವೆಯಾಗಿ ಐದು ವರ್ಷವಾದರೂ ಇವರ ವಿಡಿಯೋ ರಿಲೀಸ್​ ಮಾಡಿರಲಿಲ್ಲ ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ವಿಡಿಯೋ ರಿಲೀಸ್​ ಮಾಡಿತ್ತು. ಇದೇ ವೇಳೆ ಪತಿಯ ಎದುರೇ ಪರಪುರುಷರ ಜೊತೆ ಡೇಟಿಂಗ್​ ಬಗ್ಗೆ ಮಾತನಾಡಿ, ದೀಪಿಕಾ ಹಂಗಾಮ ಸೃಷ್ಟಿಸಿದ್ದ ದೊಡ್ಡ ಸುದ್ದಿಯೇ ಆಗಿದೆ. 

ಬೆತ್ತಲೆ ಸೀನ್​ ವೇಳೆ ನಾಲ್ವರು ಇದ್ವಿ, ರಣಬೀರ್​ ನರ್ವಸ್​ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ

ಆದರೆ ಇದೀಗ ಈ ಹಿಂದೆ ದೀಪಿಕಾ ಪಡುಕೋಣೆ ಪತಿ ರಣವೀರ್​ ಸಿಂಗ್​ ನಟಿ ಅನುಷ್ಕಾ ಶರ್ಮಾ ಜೊತೆಗೆ ಬಂದಾಗ  ತೀರಾ ವೈಯಕ್ತಿಯ ವಿಷಯ ಮಾತನಾಡಿದ್ದರು. ಅದೇನೆಂದರೆ, ತಾವು ರಾತ್ರಿ 10 ಗಂಟೆಯ ಬಳಿಕ ಅಂಡರ್​ವೇರ್​ ಧರಿಸುವುದಿಲ್ಲ ಎಂದು ಅವರು ಹೇಳಿದ್ದರು. ನ್ಯೂಡ್ ಫೊಟೋಶೂಟ್ ಮಾಡಿಕೊಂಡು ಸುದ್ದಿಯಾಗಿರೋ ನಟನ ಈ ಹೇಳಿಕೆ ಹಲ್​ಚಲ್​ ಸೃಷ್ಟಿಸಿತ್ತು. ನನಗೆ ರಾತ್ರಿ ಚೆಡ್ಡಿ ಹಾಕಿಕೊಂಡರೆ ಕನ್​ಫರ್ಟ್​ ಆಗಲ್ಲ, ಸೋ ಅದನ್ನು ಹಾಕದೇ ಮಲಗುವೆ ಎಂದಿದ್ದರು. ಇದನ್ನು ಕೇಳಿ ಇವರ ಜೊತೆಗೆ ಬಂದಿದ್ದ ಅನುಷ್ಕಾ ಶರ್ಮಾ ಮುಜುಗರ ಪಟ್ಟುಕೊಂಡಿದ್ದರು. ಇದಕ್ಕೂ ಮುನ್ನ ಅಂದರೆ 2010ರಲ್ಲಿ ನಡೆದ ಕಾಫಿ ವಿತ್ ಕರಣ್ ಷೋನಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಪತಿ ರಣಬೀರ್​ ಕಪೂರ್​ಗೆ ಕಾಂಡೋಮ್​ ಕೊಡಬೇಕು, ಅವರು ಅದಕ್ಕೆ ಅರ್ಹರು ಎಂದಿದ್ದರು. ಇದೇ ಷೋನಲ್ಲಿ ಭಾಗವಹಿಸಿದ್ದ ಸೋನಂ ಕಪೂರ್ ಕೂಡಾ ಈ ಸಂದರ್ಭ ರಣಬೀರ್ ಕಪೂರ್ ಒಳ್ಳೆಯ ಬಾಯ್​ಫ್ರೆಂಡ್ ಅಲ್ಲ ಎಂದಿದ್ದರು.

 
ಇದೇ ಷೋನಲ್ಲಿ  ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು  'ನೆಪೋ ಮಕ್ಕಳು' ಕುರಿತು ಹೇಳಿದ ಮಾತುಗಳು ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಕಂಗನಾ ರಣಾವತ್​ ಕರಣ್​ ಜೋಹರ್​ ವಿರುದ್ಧವೇ ಕಿಡಿ ಕಾರಿದ್ದು,  5 ನೇ ಸೀಸನ್‌ನಲ್ಲಿ ಕರಣ್ ಅವರನ್ನು  'ಸ್ವಜನಪಕ್ಷಪಾತದ ಧ್ವಜಧಾರಿ' ಎಂದಿದ್ದರು.  ಇನ್ನೊಂದು ಎಪಿಸೋಡ್​​ನಲ್ಲಿ, ನಟ ಇಮ್ರಾನ್ ಹಶ್ಮಿ  ಐಶ್ವರ್ಯಾ ರೈ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದರು. ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ಮಾತನಾಡಿದ್ದರು, ಐಶ್ವರ್ಯ ಹೇಗೆ ಮೋಸ ಮಾಡುತ್ತಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಇನ್ನೊಂದು ಎಪಿಸೋಡ್​ನಲ್ಲಿ  ವಿದ್ಯಾ ಬಾಲನ್ ಅವರು ವಿವಾಹಿತ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದರು ಎಂದು ಒಪ್ಪಿಕೊಂಡಿದ್ದರು.  ವಿವಾಹಿತ ವ್ಯಕ್ತಿ ತನ್ನ ಹೆಂಡತಿಗೆ ಮೋಸ ಮಾಡಿ ನನ್ನನ್ನು ಮದುವೆಯಾಗಬೇಕು ಎಂದುಕೊಂಡಿದ್ದೆ, ಹಾಗೂ ಆ  ಶಾರುಖ್ ಖಾನ್ ಆಗಬೇಕೆಂದು ಅವಳು ಬಯಸಿದ್ದೆ ಎಂದಿದ್ದರು. ಕೊನೆಗೂ ಈಕೆ  ಸಿದ್ಧಾರ್ಥ್ ರಾಯ್ ಕಪೂರ್ ಅವರ ಮೂರನೆಯ ಪತ್ನಿಯಾದರು. 

ದೇಶಭಕ್ತಿ ಮೆರೆವ ಚಿತ್ರಕ್ಕೂ ನಟರು ಬೆತ್ತಲಾಗೋದು ಅನಿವಾರ್ಯನಾ? 'ಫೈಟರ್'​ ಟೀಸರ್ ನೋಡಿ ಛೀ ಅಂತಿದ್ದಾರೆ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?