The Kerala story: 3 ದಿನದಲ್ಲಿ ₹35 ಕೋಟಿ ಬಾಚಿದ ‘ಕೇರಳ ಸ್ಟೋರಿ’ !

Published : May 09, 2023, 12:59 AM IST
The Kerala story: 3 ದಿನದಲ್ಲಿ ₹35 ಕೋಟಿ ಬಾಚಿದ ‘ಕೇರಳ ಸ್ಟೋರಿ’ !

ಸಾರಾಂಶ

ಹಲವು ವಿವಾದಗಳ ನಡುವೆಯೂ ‘ದ ಕೇರಳ ಸ್ಟೋರಿ’ ಸಿನಿಮಾ ದಿನದಿಂದ ದಿನಕ್ಕೆ ಉತ್ತಮ ಗಳಿಕೆ ತೋರುತ್ತಿದೆ. ಬಿಡುಗಡೆ ಆದ ಮೂರನೇ ದಿನವಾದ ಸೋಮವಾರ ಮೊದಲ 2 ದಿನಗಳಿಗಿಂತ ಉತ್ತಮ ಗಳಿಕೆಯಾದ 15 ಕೋಟಿ ರು.ಗಳನ್ನು ಸಂಪಾದಿಸಿದ್ದು, ಮೂರೇ ದಿನದಲ್ಲಿ 35 ಕೋಟಿ ರು.ಗಳನ್ನು ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದೆ.

ನವದೆಹಲಿ (ಮೇ.9): ಹಲವು ವಿವಾದಗಳ ನಡುವೆಯೂ ‘ದ ಕೇರಳ ಸ್ಟೋರಿ’ ಸಿನಿಮಾ ದಿನದಿಂದ ದಿನಕ್ಕೆ ಉತ್ತಮ ಗಳಿಕೆ ತೋರುತ್ತಿದೆ. ಬಿಡುಗಡೆ ಆದ ಮೂರನೇ ದಿನವಾದ ಸೋಮವಾರ ಮೊದಲ 2 ದಿನಗಳಿಗಿಂತ ಉತ್ತಮ ಗಳಿಕೆಯಾದ 15 ಕೋಟಿ ರು.ಗಳನ್ನು ಸಂಪಾದಿಸಿದ್ದು, ಮೂರೇ ದಿನದಲ್ಲಿ 35 ಕೋಟಿ ರು.ಗಳನ್ನು ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದೆ.

32 ಸಾವಿರ ಮಹಿಳೆಯರನ್ನು ಕೇರಳ(Kerala)ದಲ್ಲಿ ಇಸ್ಲಾಂಗೆ ಮತಾಂತರಿಸಿ ಕುಖ್ಯಾತ ಇಸ್ಲಾಮಿಕ್‌ ಉಗ್ರವಾದಿ ಸಂಘಟನೆ(Islamic extremist organization) ‘ಐಸಿಸ್‌’ಗೆ ಸೇರಿಸುವ ಮೂಲಕ ಭಯೋತ್ಪಾದನಾ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಕಥಾಹಂದರವನ್ನು ಚಿತ್ರ ಹೊಂದಿದೆ. ಈ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿತ್ತು ಹಾಗೂ ಕೇರಳಕ್ಕೆ ಈ ಚಿತ್ರದ ಮೂಲಕ ಮಸಿ ಬಳಿಯಲಾಗಿದೆ ಎಂದು ದೂರಲಾಗಿತ್ತು. ಆದರೆ ಕೇರಳ ಹೈಕೋರ್ಚ್‌ ಇದರ ಪ್ರದರ್ಶನಕ್ಕೆ ತಡೆ ನೀಡಲು ನಿರಾಕರಿಸಿತ್ತು.

The Kerala Story ಬ್ಯಾನ್​ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?

‘ಆದರೂ ಸಹ ಮೇ 5ರಂದು ಬಿಡುಗಡೆಯಾಗಿದ್ದ ಸಿನಿಮಾ 35 ಕೋಟಿ ರು. ಗಳಿಕೆ ಮಾಡಿದ್ದು, ಜನರು ಚಿತ್ರದತ್ತ ಆಕರ್ಷಿತರಾಗಿದ್ದಾರೆ ಎಂಬುದರ ಸೂಚಕವಾಗಿದೆ. ಸೋಮವಾರ ಕೆಲಸದ ದಿನ ಇದ್ದರೂ ಜನ ಮುಗಿಬಿದ್ದು ಸಿನಿಮಾ ನೋಡಿದ್ದು, 15 ಕೋಟಿ ರು. ಗಳಿಸಿದ್ದು ಗಮನಾರ್ಹ’ ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ ಕೂಡ ಚಿತ್ರಕ್ಕೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗರ ಮೆಚ್ಚುಗೆಗೂ ಚಿತ್ರ ಪಾತ್ರವಾಗಿದೆ. ಆದರೆ ಮಮತಾ ಬ್ಯಾನರ್ಜಿ ಆಡಳಿತದ ಪ.ಬಂಗಾಳದಲ್ಲಿ ಮಾತ್ರ ಚಿತ್ರ ನಿಷೇಧಕ್ಕೆ ಒಳಗಾಗಿದೆ.

ಈ ಸಿನಿಮಾವನ್ನು ಸುದಿಪ್ತೋ ಸೇನ್‌ ನಿರ್ದೇಶನ ಮಾಡಿದ್ದು, ಅದಾ ಶರ್ಮಾ, ಯೋಗಿತಾ ಬಿಹಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

The Kerala Story ಚಿತ್ರ ನಿಷೇಧ ಮಾಡಿದ ಪಶ್ಚಿಮ ಬಂಗಾಳ, ದೀದಿ ವಿರುದ್ಧ ಬೀದಿಗಿಳಿದ ಬಿಜೆಪಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!