ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ಗೆ ಜಗಪತಿ ಬಾಬು ವಿಲನ್‌!

Suvarna News   | Asianet News
Published : Aug 14, 2021, 02:58 PM IST
ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ಗೆ ಜಗಪತಿ ಬಾಬು ವಿಲನ್‌!

ಸಾರಾಂಶ

ಪ್ರಭಾಸ್ 'ಸಲಾರ್' ಅಡ್ಡಕ್ಕೆ ಎಂಟ್ರಿ ಕೊಟ್ಟ ಜಗಪತಿ ಬಾಬು. ದೊಡ್ಡ ತಾರಾ ಬಳಗವನ್ನೇ ಸೇರಿಸುತ್ತಿದ್ದಾರೆ ಪ್ರಶಾಂತ್.

ಇಡೀ ಭಾರತೀಯ ಚಿತ್ರರಂಗವೇ ವೀಕ್ಷಿಸಲು ಕಾಯುತ್ತಿರುವ ಸಿನಿಮಾ ಕೆಜಿಎಫ್ ಚಾಪ್ಟರ್ 2 ಹಾಗೂ ಸಲಾರ್ ಸಿನಿಮಾ. ಎರಡೂ ಚಿತ್ರಗಳಿಗೆ ನಾಯಕರು ಬೇರೆ ಬೇರೆಯಾದರೂ ನಿರ್ದೇಶಕ ಒಬ್ಬರೇ.  ಹಿಸ್ಟರಿ ಕ್ರಿಯೇಟರ್ ಪ್ರಶಾಂತ್ ನೀಲ್. ಕೆಜಿಎಫ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ನಡುವೆ ಸಲಾರ್ ಅಡ್ಡದಿಂದ ಬ್ಯಾಕ್ ಟು ಬ್ಯಾಕ್ ಗುಡ್ ನ್ಯೂಸ್ ನೀಡುತ್ತಿದ್ದಾರೆ.

ಸಲಾರ್‌ಗೂ ಮೈಸೂರಿಗೂ ಇದೆ ನಂಟು..! ಏನದು ?

ಹೌದು! ಪ್ರಶಾಂತ್‌ ನೀಲ್‌ ಹಾಗೂ ಪ್ರಭಾಸ್‌ ಕಾಂಬಿನೇಶನ್‌ನ ‘ಸಲಾರ್‌’ ಚಿತ್ರಕ್ಕೆ ಖಡಕ್‌ ವಿಲನ್‌ ಎಂಟ್ರಿ ಆಗಿದ್ದಾರೆ. ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ವಿಲನ್‌ ಆಗಿ ಮಿಂಚುತ್ತಿರುವ ಆ ದಿನಗಳ ಫ್ಯಾಮಿಲಿ ಹೀರೋ ಜಗಪತಿ ಬಾಬು ಈಗ 'ಸಲಾರ್‌' ಅಡ್ಡಾಗೆ ಎಂಟ್ರಿ ನೀಡಿದ್ದಾರೆ. ಸಲಾರ್ ಚಿತ್ರದಲ್ಲಿ ಮಾತ್ರವಲ್ಲ ಶ್ರೀಮುರಳಿ ನಟನೆಯ, ಮಹೇಶ್‌ ನಿರ್ದೇಶನದ 'ಮದಗಜ' ಚಿತ್ರದಲ್ಲೂ ಖಳನಾಯಕನಾಗಿ ನಟಿಸಿದ್ದಾರೆ. ಸಲಾರ್ ಚಿತ್ರದಲ್ಲಿ ಜಗಪತಿ ಅವರ ದೃಶ್ಯಗಳ ಭಾಗದ ಚಿತ್ರೀಕರಣ ಶುರುವಾಗಿದೆ.

ಪ್ರಭಾಸ್‌ಗೆ ಜೋಡಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಚಿತ್ರದಲ್ಲಿರುವ ಸ್ಪೆಷಲ್ ಹಾಡಿಗೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಹೆಜ್ಜೆ ಹಾಕುತ್ತಿದ್ದಾರೆ. ಇದೀಗ ಜಗಪತಿ ಎಂಟ್ರಿ. ದೊಡ್ಡ ತಾರಾಬಳಗದ ಜೊತೆ ಪ್ರಭಾಸ್ ಮತ್ತೊಂದು ಹಿಸ್ಟರಿ ಕ್ರಿಯೇಟ್ ಮಾಡಲು ರೆಡಿಯಾಗುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಸಲಾರ್‌ ಬಿಡುಗಡೆ ಮಾಡಲಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?