ನನ್ನ ಮದುವೆ ಬಗ್ಗೆ ಗಾಸಿಪ್ ಮಾಡುವ ಬದಲು ಕೋವಿಡ್ 19 ಬಗ್ಗೆ ಯೋಚಿಸಿ: ಕೀರ್ತಿ ಫುಲ್ ಗರಂ

Suvarna News   | Asianet News
Published : Apr 11, 2020, 12:38 PM IST
ನನ್ನ ಮದುವೆ ಬಗ್ಗೆ ಗಾಸಿಪ್ ಮಾಡುವ ಬದಲು ಕೋವಿಡ್ 19 ಬಗ್ಗೆ ಯೋಚಿಸಿ: ಕೀರ್ತಿ ಫುಲ್ ಗರಂ

ಸಾರಾಂಶ

'ನನ್ನ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್‌ ಮಾಡುವ ಬದಲು ಬೇರೆ ಪ್ರಮುಖ ವಿಚಾರಗಳ ಬಗ್ಗೆ ಗಮನ ಹರಿಸಿ. ದೇಶದಲ್ಲಿ ಸದ್ಯಕ್ಕೆ ಕೊರೋನಾ ಆತಂಕವಿದೆ. ಕೋವಿಡ್ 19 ವಿರುದ್ಧ ಹೋರಾಡುವ ಬಗೆ ಹೇಗೆ ಎಂಬುದನ್ನು ಚಿಂತಿಸಿ' ಎಂದು ಕೀರ್ತಿ ಸುರೇಶ್ ಖಾರವಾಗಿ ಹೇಳಿದ್ದಾರೆ. 

'ಮಹಾನಟಿ' ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ. ಮನೆಯವರೇ ನೋಡಿ ಮಾಡುತ್ತಿರುವ ಅರೇಂಜ್ ಮ್ಯಾರೇಜ್ ಇದು ಎಂದೆಲ್ಲಾ ಗುಸುಗುಸು ಕೇಳಿ ಬಂದಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೀರ್ತಿ ಸುರೇಶ್, ಮದುವೆ ವದಂತಿಯನ್ನು ತಳ್ಳಿ ಹಾಕಿದ್ದಾರೆ. 

'ನನ್ನ ಮದುವೆ ವಿಚಾರ ಕೇಳಿ ನನಗೆ ಆಶ್ಚರ್ಯವಾಯಿತು. ಹೇಗೆ ಮದುವೆ ವಿಚಾರ ಶುರುವಾಯಿತೆಂದೇ ಅರ್ಥವಾಗುತ್ತಿಲ್ಲ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲ. ನಾನು ಮದುವೆ ಆಗುತ್ತಿಲ್ಲ' ಎಂದಿದ್ದಾರೆ. 

ಮಹಾನಟಿ ಕೀರ್ತಿಗೆ ಕೂಡಿ ಬಂದ ಕಂಕಣ ಭಾಗ್ಯ; ಮದುವೆ ಆಗ್ತಾ ಇರೋ ಹುಡುಗ ಯಾರು?

' ನನ್ನ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್‌ ಮಾಡುವ ಬದಲು ಬೇರೆ ಪ್ರಮುಖ ವಿಚಾರಗಳ ಬಗ್ಗೆ ಗಮನ ಹರಿಸಿ. ದೇಶದಲ್ಲಿ ಸದ್ಯಕ್ಕೆ ಕೊರೋನಾ ಆತಂಕವಿದೆ. ಕೋವಿಡ್ 19 ವಿರುದ್ಧ ಹೋರಾಡುವ ಬಗೆ ಹೇಗೆ ಎಂಬುದನ್ನು ಚಿಂತಿಸಿ' ಎಂದು ಖಾರವಾಗಿ ಹೇಳಿದ್ದಾರೆ. 

'ಲವ್‌ಸ್ಟೋರಿ' ಕೇಳಿ ಸಾಯಿ ಪಲ್ಲವಿ ಜಾತಿ ಹಿಂದೆ ಬಿದ್ದ ಸೋಷಿಯಲ್ ಮೀಡಿಯಾ

ಲಾಕ್‌ಡೌನ್ ಮುಂಚೆ ಕೀರ್ತಿ 'ಗುಡ್ ಲಕ್ ಸಖಿ' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ಶಾರ್ಪ್‌ ಶೂಟರ್ ಪಾತ್ರ ಮಾಡುತ್ತಿದ್ದಾರೆ. 2020 ರ ಮಧ್ಯದಲ್ಲಿ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!