ಸ್ಯಾಂಡಲ್ ವುಡ್ ನ ಅತೀ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇದೀಗ ಆರ್ ಸಿ ಬಿ ಜೊತೆ ಕೈಜೋಡಿಸಿದೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ತಂಡದ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಕೈಜೋಡಿಸಿದೆ. ಇದು ಮತ್ತೊಂದು ಲೆವೆಲ್ ನ ಪ್ರಮೋಷನ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಕೆಜಿಎಫ್-2 ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ದೇಶದಾದ್ಯಂತ ಕೆಜಿಎಫ್-2 ಹವಾ ಜೋರಾಗಿದೆ. ಅಭಿಮಾನಿಗಳು ಸಿನಿಮಾ ನೋಡಲು ಕಾರತದಿಂದ ಕಾಯುತ್ತಿದ್ದಾರೆ. ಕೆಜಿಎಫ್-2 ಕ್ರೇಜ್ ಜೊತೆಗೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಬ್ಬರ ಕೂಡ ಜೋರಾಗಿದೆ. ಇದೀಗ ಕೆಜಿಎಫ್ 2 ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಕ್ರೀಡೆ ಮತ್ತು ಸಿನಿಮಾ ಕ್ಷೇತ್ರ ಒಂದಾಗಿ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಲು ಹೊಂಬಾಳೆ ಫಿಲ್ಮ್ಸ್ ಮತ್ತು ಆರ್ ಸಿ ಬಿ ಸಜ್ಜಾಗಿದೆ.
ಸ್ಯಾಂಡಲ್ ವುಡ್ ನ ಅತೀ ದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇದೀಗ ಆರ್ ಸಿ ಬಿ ಜೊತೆ ಕೈಜೋಡಿಸಿದೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ತಂಡದ ಜೊತೆ ಸಿನಿಮಾ ನಿರ್ಮಾಣ ಸಂಸ್ಥೆ ಕೈಜೋಡಿಸಿದೆ. ಹೊಂಬಾಳೆ ಫಿಲ್ಮ್ಸ ಅತೀ ದೊಡ್ಡ ಅನೌನ್ಸ್ ಮೆಂಟ್ ಮಾಡುವುದಾಗಿ ಬಹಿರಂಗ ಪಡಿಸಿತ್ತು. ಜೊತೆಗೆ ಆರ್ ಸಿ ಬಿ ಕೂಡ ಘೋಷಿಸಿತ್ತು. ಹಾಗಾಗಿ ಕ್ರೀಡೆ ಮತ್ತು ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೀಗ ಇಬ್ಬರು ಒಟ್ಟಿಗೆ ಸೇರಿ ಪ್ರಮೋಷನ್ ಮಾಡುತ್ತಿದೆ. ಸದ್ಯ ಕೆಜಿಎಫ್-2 ಟ್ರೈಲರ್ ನಲ್ಲಿ ಆರ್ ಸಿ ಬಿ ಆಟಗಾರನ್ನು ಸೇರಿಸಿ ಹೊಸ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕೆಜಿಎಫ್2 ಪಾತ್ರಕ್ಕೆ ಆರ್ ಸಿ ಬಿ ಆಟಗಾರರನ್ನು ಹೋಲಿಸಲಾಗಿದೆ. ಈ ಪ್ರೋಮೋಗೆ ಮನರಂಜನೆಯ ಹೊಸ ಯುಗಕ್ಕೆ ನಾಂದಿ ಹಾಡೋಣ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. ಈ ಟ್ರೈಲರ್ ಈಗ ಅಭಿಮಾನಿ ವಲಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದಕ್ಕೆ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳು ಇದು ನೆಕ್ಸ್ಟ್ ಲೆವೆಲ್ ಪ್ರಮೋಷನ್ ಎಂದು ಹೇಳುತ್ತಿದ್ದಾರೆ. ಐಪಿಎಲ್ ನಲ್ಲಿ ಕನ್ನಡ ಸಿನಿಮಾವನ್ನು ಪ್ರಮೋಷನ್ ಮಾಡಲಾಗುತ್ತಿತ್ತು. ಆದರೆ ಅವರ ಜೊತೆ ಸಹಯೋಗದಲ್ಲಿ ಪ್ರಚಾರ ಮಾಡುವುದು ಗ್ರೇಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಅನೇಕರು ಕಾಮೆಂಟ್ ಮಾಡಿ ಕೆಜಿಎಫ್2 ಆಡಿಯೋ ರಿಲೀಸ್ ಕಾರ್ಯಕ್ರಮ ಮಾಡಿ ವಿರಾಟ್ ಕೊಹ್ಲಿಯನ್ನು ಗೆಸ್ಟ್ ಆಗಿ ಕರೆಸಿ ಎಂದು ಬೇಡಿಕೆ ಇಡುತ್ತಿದ್ದಾರೆ.
is proud & ecstatic to associate with
Together let’s usher into a new era of entertainment with infinite possibilities
Born in Bangalore to thrill the nation pic.twitter.com/jDJy1wcsVT
ಧರ್ಮಸ್ಥಳದಲ್ಲಿ KGF 2 ತಂಡ; ಶ್ರೀ ಮಂಜುನಾಥನ ಆಶೀರ್ವಾದ ಪಡೆದ ಯಶ್
ಧರ್ಮಸ್ಥಳದಲ್ಲಿ ಕೆಜಿಎಫ್ 2 ತಂಡ
ಸದ್ಯ ಎಲ್ಲಾ ಕಡೆ ಪ್ರಚಾರ ನಡೆಸಿ ಕರ್ನಾಟಕಕ್ಕೆ ವಾಪಸ್ ಆಗಿರುವ ಕೆಜಿಎಫ್-2 ಟೀಂ ಇದೀಗ ದೇವರ ದರ್ಶನಕ್ಕೆ ಹೊರಟಿದೆ. ಸಿನಿಮಾ ಬಿಡುಗಡೆಗೂ ಮೊದಲು ಶ್ರೀಮಂಜುನಾಥನ ದರ್ಶನ ಪಡೆಯುತ್ತಿದೆ. ಯಶ್ ಮತ್ತು ಕೆಜಿಎಫ್ 2 ತಂಡ ಇಂದು (ಏಪ್ರಿಲ್ 10) ಧರ್ಮಸ್ಥಳಕ್ಕೆ(Dharmasthala) ಭೇಟಿ ನೀಡಿದೆ. ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ತಂಡವರು ವಿಶೇಷ ವಿಮಾನದಲ್ಲಿ ಇಂದು ಧರ್ಮಸ್ಥಳಕ್ಕೆ ತೆರಳಿದ್ದಾರೆ. ಯಶ ಮತ್ತು ತಂಡ ಶ್ರೀಮಂಜುನಾಥನ ದರ್ಶನಕ್ಕೆ ಹೊರಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇಲ್ಲಿ ಯಾವುದೂ ಶಾಶ್ವತವಲ್ಲ; ಶಾರುಖ್, ಸಲ್ಮಾನ್ ಗೆ ಹೋಲಿಸಿದ್ದಕ್ಕೆ ಯಶ್ ಪ್ರತಿಕ್ರಿಯೆ
ಏಪ್ರಿಲ್ 14ಕ್ಕೆ ಸಿನಿಮಾ ಬಿಡುಗಡೆ
ಕೆಜಿಎಫ್ ಮೊದಲ ಭಾಗಕ್ಕಿಂತ 2ನೇ ಭಾಗ ಮತ್ತಷ್ಟು ರೋಚಕವಾಗಿದ್ದು ರಾಕಿ ಭಾಯ್ ಅನ್ನು ಕಣ್ತುಂಬಿಕೊಳ್ಳಲು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಧೀರಾ ಎನ್ನುವ ಭಯಾನಕ ಪಾತ್ರ ನಿರ್ವಾಹಿಸಿರುವ ಸಂಜಯ್ ದತ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ಎಲ್ಲಾ ಕುತೂಹಲ, ನಿರೀಕ್ಷೆ ಗಳಿಗೆ ತೆರೆ ಬೀಳಲಿದೆ.