ಗಂಡನಿಂದ ವಿಷ್ಯ ಮುಚ್ಚಿಡೋ ಮೊದ್ಲು ಸ್ವಲ್ಪ ಯೋಚ್ನೆ ಮಾಡ್ರಮ್ಮಾ ಅಂತಿರೋದ್ಯಾಕೆ ನೆಟ್ಟಿಗರು!

Published : May 06, 2024, 12:21 PM ISTUpdated : May 06, 2024, 12:31 PM IST
ಗಂಡನಿಂದ ವಿಷ್ಯ ಮುಚ್ಚಿಡೋ ಮೊದ್ಲು ಸ್ವಲ್ಪ ಯೋಚ್ನೆ ಮಾಡ್ರಮ್ಮಾ ಅಂತಿರೋದ್ಯಾಕೆ ನೆಟ್ಟಿಗರು!

ಸಾರಾಂಶ

ತನ್ನಿಂದ ಒಡವೆ ವಿಷಯ ಮುಚ್ಚಿಟ್ಟು ಅದನ್ನು ಅಡವಿಟ್ಟಿರುವ ಭೂಮಿಕಾ ಮೇಲೆ ಗೌತಮ್​ಗೆ ಬೇಸರವಾಗಿದೆ. ಇದಕ್ಕೆ ನೆಟ್ಟಿಗರು ಕೊಡ್ತಿರೋ ಸಲಹೆ ಏನು?   

ಕೆಲವೊಮ್ಮೆ ಯಾವುದೋ ಕಾರಣಕ್ಕೆ ಗಂಡನಿಂದ ಹೆಣ್ಣುಮಕ್ಕಳು ವಿಷಯವನ್ನು ಮುಚ್ಚಿಡುತ್ತಾರೆ. ಮುಂದೆ ಯಾವಾಗಲಾದರೂ ಈ ವಿಷಯವನ್ನು ಹೇಳಿದರಾಯ್ತು, ಸಮಯ ಸಂದರ್ಭ ಬಂದಾಗ ಹೇಳಬಹುದು ಎಂದೆಲ್ಲಾ ಯೋಚನೆ ಮಾಡಿರುತ್ತಾರೆ. ಕೆಲವು ಸಮಯದಲ್ಲಿ ಇದು ಅನಿವಾರ್ಯವೂ ಆಗಿರುತ್ತದೆ. ಆದರೆ ಇದೇ ಒಂದು ಘಟನೆ ಸಂಸಾರವನ್ನೇ ಹಾಳು ಮಾಡಬಲ್ಲುದು. ಆದ್ದರಿಂದ ಕೊನೆಗೆ ವಿಷಯ ಹೇಳುವ ಬದಲು ಮೊದಲೇ ವಿಷಯ ಹೇಳಿಬಿಡಿ, ಆ ವಿಷಯ ನಿಮಗೆ ಚಿಕ್ಕದ್ದು ಎನಿಸಿದ್ರೂ ಅದು ಗಂಡನಿಗೆ ದೊಡ್ಡ ವಿಷಯವೇ ಆಗಿರಬಹುದು. ಇದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಗಂಡಸರಿಗೂ ಅನ್ವಯಿಸುತ್ತದೆ ಎಂದು ಬುದ್ಧಿಮಾತು ಹೇಳುತ್ತಿದ್ದಾರೆ ಅಮೃತಧಾರೆ ಫ್ಯಾನ್ಸ್​.

ಅಷ್ಟಕ್ಕೂ ಇವರು ಈ ರೀತಿ ಬುದ್ಧಿಮಾತು ಹೇಳುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಭೂಮಿಕಾ ಮತ್ತು ಗೌತಮ್​ ನಡುವೆ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಾಗಲೇ ಚಿನ್ನದ ಒಡವೆ ಅಡವಿಟ್ಟ ವಿಷಯದಿಂದ ಇಬ್ಬರ ನಡುವೆ ಬಿರುಕು ಮೂಡುವ ಮಟ್ಟಿಗೆ ಸ್ಥಿತಿ ಬಂದಿದೆ.  ಇಲ್ಲಿ ಗೌತಮ್​ ಮತ್ತು ಭೂಮಿಕಾಳನ್ನು ಬೇರೆ ಮಾಡಲು, ಅವರಿಬ್ಬರ ನಡುವೆ ಮೂಡುತ್ತಿರುವ ಪ್ರೀತಿಯನ್ನು ದ್ವೇಷಕ್ಕೆ ಬದಲಿಸಲು ಶಕುಂತಲಾ ತಂತ್ರ ರೂಪಿಸುತ್ತಲೇ ಬಂದಿದ್ದಾಳೆ. ಅವರ ಎಲ್ಲಾ ತಂತ್ರಗಳೂ ಸದ್ಯ ಬೇರೆ ಸೀರಿಯಲ್​ಗಳ ರೀತಿಯಲ್ಲಿ ಸಫಲವಾಗದೇ ಗೌತಮ್​ ಮತ್ತು ಭೂಮಿಕಾ ನಡುವೆ ಇರುವ ಪ್ರೀತಿಯಿಂದ ವಿಫಲವಾಗುತ್ತಲೇ ಬಂದಿವೆ. ಅಲ್ಲದೇ ಶಕುಂತಲಾ ತಂತ್ರ ರೂಪಿಸಿದಷ್ಟೂ ಪತಿ-ಪತ್ನಿ ಹತ್ತಿರವಾಗುತ್ತಿದ್ದಾರೆ. ಆದರೆ  ಇದೀಗ ಈ ವಿಷಯವೇ ದೊಡ್ಡದಾಗುವ ಹಾಗೆ ಕಾಣಿಸುತ್ತಿದೆ.

ಬಿಂಕದ ಸಿಂಗಾರಿಗೆ ಸಿಹಿಯ ಭರ್ಜರಿ ಸ್ಟೆಪ್​: ಅಶೋಕ್​ ಜತೆ ಪ್ರಿಯಾ ಬದ್ಲು ಚಾಂದನಿ ಯಾಕೆ ಅಂತಿದ್ದಾರೆ ನೆಟ್ಟಿಗರು!

ಆನಂದ್​ ಈ ವಿಷಯವನ್ನು ಗೌತಮ್​ಗೆ ಹೇಳುವಂತೆ ಹೇಳಿದ್ದಾನೆ. ಟೈಮ್​ ನೋಡಿಕೊಂಡು ಈ ವಿಷಯ ಹೇಳುವುದಾಗಿ ಭೂಮಿಕಾ ಹೇಳುವಷ್ಟರಲ್ಲಿಯೇ ಗೌತಮ್​ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾನೆ. ತನಗೆ ಹೇಳದೇ ಭೂಮಿಕಾ ಈ ರೀತಿ ಮಾಡಿರುವುದು, ಅದಕ್ಕೆ ಶಕುಂತಲಾ ದೇವಿ ಉಪ್ಪು-ಖಾರ ಸೇರಿಸಿ ಹೇಳಿರುವ ಕಾರಣ, ಪತ್ನಿಯ ಬಗ್ಗೆ ಗೌತಮ್​ಗೆ ನೋವಾಗಿದೆ. ಅಷ್ಟಕ್ಕೂ  ಕೆಲಸ ಕಳೆದುಕೊಂಡಿರೋ ತಮ್ಮನಿಗೆ ಹಣದ ಸಹಾಯ ಮಾಡಲು ಸ್ವಾಭಿಮಾನಿ ಭೂಮಿಕಾ, ತನ್ನ ಚಿನ್ನವನ್ನು ಅಡುವು ಇಟ್ಟು ಐದು ಲಕ್ಷ ರೂಪಾಯಿ ಕೊಟ್ಟಿದ್ದಾಳೆ. ಇದು ಯಾರಿಗೂ ಗೊತ್ತಿಲ್ಲದ ವಿಷಯ. ಗಂಡ ಗೌತಮ್​ಗೆ ಹೇಳಿದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಕೋಟಿ ಕೋಟಿ ಹಣವನ್ನೇ ಕೊಡುತ್ತಿದ್ದ. ಆದರೆ ಭೂಮಿಕಾ ಸ್ವಾಭಿಮಾನಿಯಾಗಿರೋ ಕಾರಣ, ಐದು ಲಕ್ಷ ರೂಪಾಯಿ ಸಾಲವನ್ನು ತಾನೇ ತೀರಿಸಲು ಕೆಲಸಕ್ಕೆ ಹೋಗುತ್ತಿದ್ದಾಳೆ. ಈ ವಿಷಯ ಅತ್ತೆ ಶಕುಂತಲಾಗೆ ತಿಳಿದಿದೆ. ಐದು ಲಕ್ಷ ರೂಪಾಯಿ ಹಣದ ಚೀಟಿ ಅವಳಿಗೆ ಸಿಕ್ಕಿದೆ. ಇದರೊಂದಿದಲೇ ಇಬ್ಬರನ್ನೂ ಬೇರೆ ಬೇರೆ ಮಾಡಬಹುದು ಎನ್ನುವ ಪ್ಲ್ಯಾನ್​ ಮಾಡಿದ್ದಾಳೆ ಅವಳು.
 
ಅದನ್ನು ಗೌತಮ್​ಗೆ ಹೇಳಿದ್ದಾಳೆ.  ತನಗೆ ಹೇಳದೇ ಒಡವೆಗಳನ್ನೇ ಭೂಮಿಕಾ ಒತ್ತೆ ಇಟ್ಟಿರುವ ಕಾರಣ ಗೌತಮ್​ ಕೆಂಡಾಮಂಡಲನಾಗಿ ಇಬ್ಬರ ನಡುವೆ ದೊಡ್ಡ ಗಲಾಟೆ ಮಾಡಿಸುವ ಪ್ಲ್ಯಾನ್​ ಶಕುಂತಲಾದ್ದು.  ಈ ಪ್ಲ್ಯಾನ್​ ಸಕ್ಸಸ್​ ಆಗದೇ ಇರಲಿ ಎನ್ನುವುದು ಅಭಿಮಾನಿಗಳ ಅಭಿಮತ. ಅದೇ ವೇಳೆ, ಹೀಗೆಲ್ಲಾ ಗಂಡನಿಗೆ ಹೇಳದೇ ವಿಷಯ ಮುಚ್ಚಿಡಬೇಡಿ, ಇದು ದೊಡ್ಡದಾಗಿ ಬೆಳೆಯಬಹುದು ಎಂದು ಸೀರಿಯಲ್​ ಪ್ರೇಮಿಗಳು ಮಹಿಳೆಯರಿಗೆ ಬುದ್ಧಿಮಾತನ್ನೂ ಹೇಳುತ್ತಿದ್ದಾರೆ. 
 

ಮಂಟಪಕ್ಕೆ ನನ್​ ಕರ್ಕೊಂಡು ಬರ್ಬೇಕಿದ್ದ ಮಾವ ಕಾಣೆಯಾಗೋದ್ರು! ಅದೊಂದ್​ ದೊಡ್ಡ ಕಥೆ, ಆ ದಿನ ಸ್ಮರಿಸಿದ ರಕ್ಷಿತಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?