Draupathi-2 Big Update: ಅಖಾಡಕ್ಕಿಳಿದ ಕ್ರೂರ ಖಳನಾಯಕ ತುಘಲಕ್; ಪ್ಯಾನ್ ಇಂಡಿಯಾ ಮೂವಿ, ಫಸ್ಟ್ ಲುಕ್ ವೈರಲ್!

Published : Jan 02, 2026, 11:15 PM IST
Draupadi 2 Unveils Fierce Villain Character Poster

ಸಾರಾಂಶ

ದ್ರೌಪದಿ' ಯಶಸ್ಸಿನ ನಂತರ, ನಿರ್ದೇಶಕ ಮೋಹನ್ ಜಿ ಅವರ 'ದ್ರೌಪದಿ 2' ಬಿಡುಗಡೆಗೆ ಸಜ್ಜಾಗಿದೆ. ಹೊಯ್ಸಳ ಚಕ್ರವರ್ತಿ ವೀರ ಬಲ್ಲಾಳ III ಮತ್ತು ಮೊಘಲ್ ಆಕ್ರಮಣದ ನೈಜ ಇತಿಹಾಸ ಆಧಾರಿತ ಈ ಐತಿಹಾಸಿಕ ಚಿತ್ರದಲ್ಲಿ, ಚಿರಾಗ್ ಜಾನಿ ಮೊಹಮ್ಮದ್ ಬಿನ್ ತುಘಲಕ್ ಎಂಬ ಕ್ರೂರ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮೋಹನ್ ಜಿ ಮತ್ತು ರಿಚರ್ಡ್ ರಿಷಿ ಕಾಂಬಿನೇಷನ್‌ನಲ್ಲಿ 2020ರಲ್ಲಿ ಬಿಡುಗಡೆಯಾದ 'ದ್ರೌಪದಿ' ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಈಗ ಅದೇ ಯಶಸ್ಸಿನ ಸರಣಿಯಲ್ಲಿ 'ದ್ರೌಪದಿ 2' ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಹೊಸ ಪೋಸ್ಟರ್ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಹುಟ್ಟಿಸುತ್ತಿದೆ.

ತುಘಲಕ್ ಅವತಾರದಲ್ಲಿ ಚಿರಾಗ್ ಜಾನಿ ಅಬ್ಬರ!

ಚಿತ್ರದ ಮೂವರು ಪ್ರಮುಖ ವಿಲನ್‌ಗಳ ಪೈಕಿ ಅತ್ಯಂತ ಘಾತಕ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಖ್ಯಾತ ನಟ ಚಿರಾಗ್ ಜಾನಿ ಈ ಚಿತ್ರದಲ್ಲಿ 'ಮೊಹಮ್ಮದ್ ಬಿನ್ ತುಘಲಕ್' ಎಂಬ ಕ್ರೂರ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೈಯಲ್ಲಿ ರಕ್ತಸಿಕ್ತ ಆಯುಧ ಹಿಡಿದು ವೈರಲ್ ಆಗಿರುವ ಚಿರಾಗ್ ಪೋಸ್ಟರ್, ಚಿತ್ರದಲ್ಲಿನ ಯುದ್ಧದ ತೀವ್ರತೆಯನ್ನು ಸಾರುತ್ತಿದೆ. ಈಗಾಗಲೇ 'ತುನಿವು' ಮತ್ತು 'ಕಾಪ್ಪಾನ್' ಚಿತ್ರಗಳ ಮೂಲಕ ಮಿಂಚಿರುವ ಚಿರಾಗ್, ಈ ಚಿತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವ ಸೂಚನೆ ನೀಡಿದ್ದಾರೆ.

ಹೊಯ್ಸಳ ವೀರ ಬಲ್ಲಾಳ ಮತ್ತು ಮೊಘಲರ ಸಂಘರ್ಷ

ಈ ಸಿನಿಮಾ ಕೇವಲ ಆಕ್ಷನ್ ಡ್ರಾಮಾ ಮಾತ್ರವಲ್ಲ, ಇದೊಂದು ಐತಿಹಾಸಿಕ ಸಮರ ಕಲೆಗಳ ಸಾಗರ. ಹೊಯ್ಸಳ ಚಕ್ರವರ್ತಿ ವೀರ ಬಲ್ಲಾಳ III ಮತ್ತು ಕಡವ ಸಾಮ್ರಾಜ್ಯದ ನಡುವಿನ ಹೋರಾಟದ ಕಥೆ ಇಲ್ಲಿದೆ. ತಮಿಳುನಾಡನ್ನು ನಡುಗಿಸಿದ್ದ ಮೊಘಲ್ ಆಕ್ರಮಣದ ನೈಜ ಇತಿಹಾಸವನ್ನು ಆಧರಿಸಿ ಈ ಪ್ಯಾನ್-ಇಂಡಿಯಾ ಸಿನಿಮಾ ನಿರ್ಮಾಣವಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಐತಿಹಾಸಿಕ ಕಥೆ ತೆರೆಯ ಮೇಲೆ ಅಬ್ಬರಿಸಲಿದೆ.

 

ಜನವರಿ ಅಂತ್ಯಕ್ಕೆ ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್

ಸಿನಿರಸಿಕರಿಗೆ ಸಿಹಿ ಸುದ್ದಿ ಎಂದರೆ, 'ದ್ರೌಪದಿ 2' ಈಗಾಗಲೇ ಸೆನ್ಸಾರ್ ಮಂಡಳಿಯಿಂದ U/A ಪ್ರಮಾಣಪತ್ರ ಪಡೆದಿದ್ದು, ಜನವರಿ ಅಂತ್ಯದ ವೇಳೆಗೆ ವಿಶ್ವದಾದ್ಯಂತ ತೆರೆಕಾಣಲಿದೆ. ಸಂಗೀತ ಮಾಂತ್ರಿಕ ಜಿಬ್ರಾನ್ ಅವರ ಹಿನ್ನೆಲೆ ಸಂಗೀತ ಈ ಚಿತ್ರದ ಜೀವಾಳವಾಗಿದ್ದು, ಲಹರಿ ಮ್ಯೂಸಿಕ್ ಹಾಡುಗಳ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ನಟಿ ರಕ್ಷಣಾ ಇಂದುಚೂಡನ್ ಈ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ತಾರಾಗಣದಲ್ಲಿ ದಿಗ್ಗಜರ ದಂಡು

ನೇತಾಜಿ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ನಟ್ಟಿ ನಟರಾಜ್, ವೈ.ಜಿ ಮಹೇಂದ್ರನ್, ವೇಲ ರಾಮಮೂರ್ತಿ ಮತ್ತು ದೇವಯಾನಿ ಶರ್ಮಾ ಸೇರಿದಂತೆ ಹಲವು ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ. ಫಿಲಿಪ್ ಆರ್. ಸುಂದರ್ ಅವರ ಛಾಯಾಗ್ರಹಣ ಮತ್ತು ಆಕ್ಷನ್ ಸಂತೋಷ್ ಅವರ ಸಾಹಸ ದೃಶ್ಯಗಳು ಚಿತ್ರದ ತಾಂತ್ರಿಕ ಶಕ್ತಿಯನ್ನು ಹೆಚ್ಚಿಸಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದ್ವೆ ಖುಷಿಯಲ್ಲಿರೋ ರಶ್ಮಿಕಾ ಮಂದಣ್ಣ ಮತ್ತೆ ಕಿರಿಕ್‌: ಮದುಮಗಳಿಗೆ ಇದೆಲ್ಲಾ ಬೇಕಿತ್ತಾ? ಕನ್ನಡಿಗರು ಗರಂ ಗರಂ
ಶಾರುಖ್​ ಖಾನ್​ ನಟನ ವೇಷದಲ್ಲಿರುವ ದೇಶದ್ರೋಹಿ- ಸಾಕ್ಷಿ ಸಹಿತ ತೆರೆದಿಟ್ಟ ಜಗದ್ಗುರು ರಾಮಭದ್ರಾಚಾರ್ಯ