ಕ್ರಿಕೆಟ್​ ಲೆಜೆಂಡ್​ ಸೌರವ್​ ಗಂಗೂಲಿ ಬಯೋಪಿಕ್​ಗೆ ಕೊನೆಗೂ ನಾಯಕನ ಆಯ್ಕೆ: ಯಾರಿಗೆ ಒಲಿದಿದೆ ಈ ಪಟ್ಟ?

Published : Jan 13, 2024, 03:55 PM IST
ಕ್ರಿಕೆಟ್​ ಲೆಜೆಂಡ್​ ಸೌರವ್​ ಗಂಗೂಲಿ ಬಯೋಪಿಕ್​ಗೆ ಕೊನೆಗೂ ನಾಯಕನ ಆಯ್ಕೆ: ಯಾರಿಗೆ ಒಲಿದಿದೆ ಈ ಪಟ್ಟ?

ಸಾರಾಂಶ

ಕ್ರಿಕೆಟ್​ ಲೆಜೆಂಡ್​ ಸೌರವ್​ ಗಂಗೂಲಿ ಬಯೋಪಿಕ್​ಗೆ ಕೊನೆಗೂ ನಾಯಕನ ಆಯ್ಕೆ ಆಗಿದೆ. ದಾದಾ ರೋಲ್​ ಮಾಡಲಿರುವ ನಟ ಯಾರು?    

ಕ್ರಿಕೆಟ್‌ನ ಲೆಜೆಂಡ್‌ಗಳಾದ ಎಂಎಸ್ ಧೋನಿ ಮತ್ತು ಕಪಿಲ್ ದೇವ್ ಅವರ ಬಯೋಪಿಕ್ ಸಿನಿಮಾಗಳಾಗಿದ್ದು, ಈ ಸಾಲಿಗೆ ಇದೀಗ ಮತ್ತೋರ್ವ ಕ್ರಿಕೆಟ್​ ತಾರೆ ಸೇರ್ಪಡೆಯಾಗಲಿದ್ದಾರೆ. ಅವರೇ   ಭಾರತ ತಂಡ ಶ್ರೇಷ್ಠ ಕ್ರಿಕೆಟರ್​, ಅತ್ಯುತ್ತಮ ನಾಯಕ ಸೌರವ್ ಗಂಗೂಲಿ. ಗಂಗೂಲಿ (Sourav Ganguly ) ಅವರ ಬಯೋಪಿಕ್​ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.  ಭಾರತದ ಮಾಜಿ ಕ್ರಿಕೆಟಿಗ ಮತ್ತು ನಾಯಕ ಸೌರವ್ ಗಂಗೂಲಿ ಅವರ ಜೀವನವನ್ನು ಆಧರಿಸಿ ನಿರ್ಮಾಪಕರಾದ ಲುವ್ ರಂಜನ್ ಮತ್ತು ಅಂಕುರ್ ಗರ್ಗ್ ಸಿನಿಮಾ ಮಾಡುತ್ತಿದ್ದಾರೆ. ಉಡಾನ್, ಲೂಟೆರಾ ಮತ್ತು ಜುಬಿಲಿ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿ ಹೆಸರುವಾಸಿಯಾಗಿದ್ದಾರೆ ಅಂಕುರ್​.  ಮಾಧ್ಯಮ ವರದಿಗಳ ಪ್ರಕಾರ, ವಿಕ್ರಮಾದಿತ್ಯ ಮೋಟ್ವಾನೆ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದ್ದರೂ, ಬಾಲಿವುಡ್‌ನ ಕಾರಿಡಾರ್‌ಗಳಿಂದ ಬರುತ್ತಿರುವ ಸುದ್ದಿಗಳನ್ನು ನಂಬಬೇಕಾದರೆ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.  

ಇದೀಗ ಸೌರವ್​ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ವಿಷಯವನ್ನು ಚಿತ್ರತಂಡ ರಿವೀಲ್​ ಮಾಡಿದೆ.  ಸುಶಾಂತ್ ಸಿಂಗ್ ರಜಪೂತ್ ಅವರು ಎಂಎಸ್ ಧೋನಿ ಬಯೋಪಿಕ್ ಸಿನಿಮಾದಲ್ಲಿ ಎಂಎಸ್ ಧೋನಿ ಅವರ ಪಾತ್ರದಲ್ಲಿ ನಟಿಸಿದರೆ, ರಣವೀರ್ ಸಿಂಗ್ ಅವರು 1983 ಸಿನಿಮಾದಲ್ಲಿ ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಬಾಲಿವುಡ್​ ಸ್ಟಾರ್​ ಆಯುಷ್ಮಾನ್​ ಖುರಾನಾ ಗಂಗೂಲಿ ಬಯೋಪಿಕ್​ಗೆ  ಆಯ್ಕೆಯಾಗಿದ್ದಾರೆ. ಅಂಧಾಧುನ್ ಸಿನಿಮಾದ ಜತೆಗೆ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ಪಡೆದಿರುವ  ಖುರಾನಾ ಈಗ ಗಂಗೂಲಿ ಪಾತ್ರಧಾರಿಯಾಗಿ ಮಿಂಚಲಿದ್ದಾರೆ. ಪೀಪಿಂಗ್ ಮೂನ್ ನ ಸಂಸ್ಥೆ ಈ ಕುರಿತು ಮಾಹಿತಿ ನೀಡಿದೆ. ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಈ ಚಿತ್ರಕ್ಕಾಗಿ ಆಯುಷ್ಮಾನ್ ಖುರಾನಾ ಜತೆ ಒಪ್ಪಂದಕ್ಕೆ ಸಹಿ ಹಾಕಿಕೊಂಡಿದ್ದಾರೆ ಎಂದು ಹೇಳಿದೆ.

ಮಾಜಿ ಭಾವಿ ಪತಿಯೇ ಬೇರೆ, ಮದ್ವೆಯಾಗಿದ್ದೇ ಬೇರೆಯವರನ್ನಾ? ಏನಿದು ಆಮೀರ್​ ಖಾನ್​ ಪುತ್ರಿಯ ಹೊಸ ವಿಷ್ಯ?

ಅಷ್ಟಕ್ಕೂ ಆಯುಷ್ಮಾನ್ ಖುರಾನಾ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಲು ಕಾರಣವೂ ಇದೆ. ಅದೇನೆಂದರೆ, ಕ್ರಿಕೆಟ್​ ಪ್ರಿಯರಿಗೆ ತಿಳಿದಿರುವಂತೆ ಸೌರವ್ ಗಂಗೂಲಿಯವರು  ಎಡಗೈ ಬ್ಯಾಟ್ಸ್‌ಮನ್. ಆಯುಷ್ಮಾನ್​ ಖುರಾನಾ ಕೂಡ ಎಡಗೈ ಬ್ಯಾಟ್ಸ್​ಮನ್​. ಆದ್ದರಿಂದ ಗಂಗೂಲಿ  ಜೀವನಚರಿತ್ರೆಗೆ ಪರಿಪೂರ್ಣ ಫಿಟ್ ಆಗಿದ್ದಾರೆ ಎಂದಿದೆ ಚಿತ್ರತಂಡ. ಖುರಾನಾ ಅವರಿಗೂ ಮುನ್ನ ರಣವೀರ್​ ಕಪೂರ್​ ಹೆಸರು ಚಾಲ್ತಿಯಲ್ಲಿತ್ತು.  ಕಾರ್ತಿಕ್ ಆರ್ಯನ್ ಹೆಸರೂ ಕೇಳಿ ಬಂದಿತ್ತು.  ಆದರೆ ಸೌರವ್ ಗಂಗೂಲಿ ಅವರೇ ಆಯುಷ್ಮಾನ್ ಖುರಾನಾಗೆ ಈ ಪಾತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.  

 ಇನ್ನು ಕುತೂಹಲದ ಸಂಗತಿಯೆಂದರೆ ಈ ಬಯೋಪಿಕ್​ನಲ್ಲಿ  ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.  ಚಿತ್ರದ ಶೂಟಿಂಗ್ 2024ರ ಕೊನೆಯ ಹಂತಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಮಿಸ್ಟರಿ ಮ್ಯಾನ್ ಜೊತೆ ನಟಿ ಕಂಗನಾ ರಣಾವತ್!​ ಕೈಕೈಹಿಡಿದು ನಡೆದ ಈ ವಿದೇಶಿಗ ಯಾರು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?