ಪುತ್ರಿ ಸಾರಾ ಜೊತೆ ನಟಿಸುವುದಕ್ಕೆ ಸೈಫ್‌ ರೆಡಿ! ಹಾಗಾದ್ರೆ ಕಂಡೀಶನ್ ಹಾಕಿದ್ಯಾಕೆ?

Suvarna News   | Asianet News
Published : Mar 17, 2020, 10:08 AM IST
ಪುತ್ರಿ ಸಾರಾ ಜೊತೆ ನಟಿಸುವುದಕ್ಕೆ ಸೈಫ್‌ ರೆಡಿ! ಹಾಗಾದ್ರೆ ಕಂಡೀಶನ್ ಹಾಕಿದ್ಯಾಕೆ?

ಸಾರಾಂಶ

ಸೈಫ್‌ ಅಲಿ ಖಾನ್‌ಗೂ ಕರೀನಾ ಕಪೂರ್‌ ಖಾನ್‌ಗೂ ‘ತಶಾನ್‌’ ಚಿತ್ರದ ವೇಳೆ ಲವ್‌ ಆಗಿತ್ತು. ನಂತರ ಇಬ್ಬರೂ ಮದುವೆಯಾದರು. ಆಮೇಲೆ ‘ಕುರ್ಬಾನ್‌’, ‘ಏಜೆಂಟ್‌ ವಿನೋದ್‌’ ಸೇರಿ ಕೆಲವೇ ಕೆಲವು ಬೆರಳೆಣಿಕೆಷ್ಟುಸಿನಿಮಾಗಳಲ್ಲಿ ಮಾತ್ರ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು. ಇದಕ್ಕೆ ಕಾರಣ ಸೈಫ್‌ ಅಲಿ ಖಾನ್‌ ನಿಲುವು. 

‘ನನ್ನ ಸಿನಿಮಾ ಕೆರಿಯರ್‌ಗೂ ವಯಕ್ತಿಕ ಬದುಕಿಗೂ ತುಂಬಾ ಅಂತರ ಇದೆ. ನನ್ನ ಪಾಲಿಗೆ ಇವೆರಡೂ ಬೇರೆ ಬೇರೆ’ ಎನ್ನುವ ಸೈಫ್‌ ಸಿನಿಮಾ ಆಯ್ಕೆಯಲ್ಲಿಯೂ ಜಾಣರು.

ಈಗ ಇದನ್ನೆಲ್ಲಾ ಹೇಳುವುದಕ್ಕೆ ಕಾರಣವೊಂದಿದೆ. ಅದು ಮಗಳು ಸಾರಾ ಅಲಿ ಖಾನ್‌ ಜೊತೆಗೆ ಹೊಸ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವುದು. ಸ್ಟಾರ್‌ಗಳು ತಮ್ಮ ಮಕ್ಕಳೊಂದಿಗೆ ಸ್ಕ್ರೀನ್‌ ಹಂಚಿಕೊಳ್ಳುತ್ತಾರೆ ಎಂದರೆ ಸಾಕಷ್ಟುನಿರೀಕ್ಷೆ ಇರುತ್ತದೆ. ಈ ನಿರೀಕ್ಷೆಯೇ ಒಂದು ಹಂತಕ್ಕೆ ಚಿತ್ರಕ್ಕೆ ಯಶಸ್ಸನ್ನೂ ತಂದುಕೊಡಬಲ್ಲದು. ಇದೆಲ್ಲವನ್ನೂ ತಿಳಿದ ಕೆಲವು ಮಂದಿ ಸೈಫ್‌ ಅಲಿ ಖಾನ್‌ ಜೊತೆಗೆ ಮಗಳು ಸಾರಾ ಅಲಿ ಖಾನ್‌ರನ್ನು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇದಕ್ಕೆ ಸೈಫ್‌ ಸುಲಭಕ್ಕೆ ಒಪ್ಪಿಲ್ಲ. ಒಪ್ಪಿದರೂ ಅದಕ್ಕೆ ಒಂದಷ್ಟುಕಂಡೀಷನ್‌ ಅಪ್ಲೈ ಎಂದಿದ್ದಾರೆ.

ಇದ್ದರೆ ಅಮ್ಮ- ಮಗಳು ಕರೀನಾ- ಸಾರಾ ರೀತಿ ಇರಬೇಕಪ್ಪ!

ತಾವು ಮತ್ತು ಮಗಳು ಸರಾ ಒಟ್ಟಿಗೆ ಸಿನಿಮಾ ಮಾಡಬೇಕು ಎಂದರೆ ಮೊದಲಿಗೆ ಅತ್ಯುತ್ತಮವಾದ ಸ್ಕಿ್ರಪ್ಟ್‌ ಮತ್ತು ಅನುಭವಿ ಡೈರೆಕ್ಟರ್‌ ಸಿಕ್ಕಬೇಕು. ನನ್ನ ಪಾತ್ರವನ್ನು ನಾನು ಮತ್ತು ಅವಳ ಪಾತ್ರವನ್ನು ಅವಳು ಒಪ್ಪಬೇಕು. ಜೊತೆಗೆ ಸಿನಿಮಾದಲ್ಲಿ ಯಾವುದೇ ಗಿಮಿಕ್‌ಗಳು ಇರಬಾರದು. ಹಾಗಿದ್ದರೆ ನಾನು ಮಗಳು ಸರಾ ಜೊತೆಗೆ ನಟಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದೆಲ್ಲಾ ಸಾಧ್ಯವಾದರೆ ಸೈಫ್‌ ಅಲಿ ಖಾನ್‌ ಮತ್ತು ಸಾರಾ ಅಲಿ ಖಾನ್‌ರನ್ನು ಒಟ್ಟಿಗೆ ಸಿನಿಮಾದಲ್ಲಿ ನೋಡಬಹುದು.

ಸಪೂರ ಸುಂದರಿ ಸಾರಾ; ತೆಳ್ಳಗಾಗಲು ಮಾಡಿದ ವರ್ಕೌಟ್ ಭಾಳಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?