ಪತ್ನಿಗೆ 'ದುಬಾರಿ' ಇಯರ್ ರಿಂಗ್ ಗಿಫ್ಟ್‌ ಕೊಟ್ಟ ಅಕ್ಷಯ್ ಕುಮಾರ್!

Suvarna News   | Asianet News
Published : Dec 13, 2019, 11:51 AM ISTUpdated : Dec 13, 2019, 11:54 AM IST
ಪತ್ನಿಗೆ 'ದುಬಾರಿ' ಇಯರ್ ರಿಂಗ್ ಗಿಫ್ಟ್‌ ಕೊಟ್ಟ ಅಕ್ಷಯ್ ಕುಮಾರ್!

ಸಾರಾಂಶ

ಪತ್ನಿಯನ್ನು ಆಗಾಗ ಖುಷಿಪಡಿಸಲು ಗಂಡಂದಿರು ದುಬಾರಿ ಗಿಫ್ಟ್‌ಗಳನ್ನು ಕೊಡುತ್ತಿರುತ್ತಿರುತ್ತಾರೆ. ಬಾಲಿವುಡ್ ಸ್ಮೈಲಿಂಗ್ ಮ್ಯಾನ್ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾಗೆ ದುಬಾರಿ ಇಯರ್ ರಿಂಗನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಹೇಗಿದೆ ನೋಡಿ! 

'ಮಿಷನ್ ಮಂಗಲ್' ಹೀರೋ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ಮಾತ್ರವಲ್ಲ ಹೊರಗಡೆಯೂ ಅವರ ಸೆನ್ಸ್ ಆಫ್ ಹ್ಯೂಮರ್ ಸೂಪರ್.  ಸದ್ಯ ಎಲ್ಲಾ ಕಡೆ ಈರುಳ್ಳಿ ಬೆಲೆ ಏರಿಕೆಯದ್ಧೇ ಸುದ್ದಿ.  ಇದರ ಬಗ್ಗೆ ಸಾಕಷ್ಟು ಜೋಕ್‌ಗಳು ಹರಿದಾಡುತ್ತಲೇ ಇವೆ.  ನಮ್ಮ ಆfಯಕ್ಷನ್ ಹೀರೋ ಕೂಡಾ ಈರುಳ್ಳಿ ಬಗ್ಗೆ ಜೋಕ್ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. 

ರಿಲೀಸ್ ದಿನವೇ ಕಣ್ಣೀರಿಟ್ಟ 'ಒಡೆಯ' ಚಿತ್ರದ ನಟಿ!

ಅಕ್ಷಯ್ ಕುಮಾರ್, ಕರೀನಾ ಕಪೂರ್, ಕಿಯಾರಾ ಅಡ್ವಾನಿ ಜೊತೆ 'ಗುಡ್ ನ್ಯೂಸ್' ಎನ್ನುವ ಸಿನಿಮಾ ಮಾಡ್ತಾ ಇದ್ದಾರೆ.  ಚಿತ್ರದ ಪ್ರಮೋಶನ್‌ಗಾಗಿ ಚಿತ್ರತಂಡ ಕಪಿಲ್ ಶರ್ಮಾ ಶೋಗೆ ಹೋಗಿತ್ತು. ಆಗ ಕರೀನಾಗೆ ಇಂಪ್ರೆಸ್ ಮಾಡಲು ಅಕ್ಷಯ್ ಆನಿಯನ್ ಇಯರ್ ರಿಂಗನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಅದನ್ನು ನೋಡಿ ಕರೀನಾ ಇಂಪ್ರೆಸ್ ಆಗಲೇ ಇಲ್ಲ! ಕೊನೆಗೆ ವಿಧಿಯಿಲ್ಲದೇ ಅದನ್ನು ತಂದು ಪತ್ನಿಗೆ ಕೊಟ್ಟಿದ್ದಾರೆ. 

ಅನುಗೆ ಟ್ರಾನ್ಸಫರ್ ಕೊಟ್ಟಿದ್ದೇ TRP ಕುಸಿಯೋದಕ್ಕೆ ಕಾರಣವಾಯ್ತಾ?

ಆನಿಯನ್ ರಿಂಗ್ ಫೋಟೋ ಶೇರ್ ಮಾಡಿದ ಅಕ್ಷಯ್,  ಕಪಿಲ್ ಶರ್ಮಾ ಶೋನಲ್ಲಿ ಕರೀನಾಳನ್ನು ಇಂಪ್ರೆಸ್ ಮಾಡಲು ಅಕ್ಷಯ್ ಇದನ್ನು ಕೊಟ್ಟಿದ್ದಾರೆ.  ಅವರು ಇಂಪ್ರೆಸ್ ಆದಂತೆ ಕಾಣಿಸಲಿಲ್ಲ. ಅಕ್ಷಯ್ ಈ ಸೆನ್ಸ್ ಆಫ್ ಹ್ಯೂಮರ್ ನಿಮಗೆಲ್ಲಾ ಇಷ್ಟವಾಯಿತು ಅಂದುಕೊಳ್ಳುತ್ತೇನೆ. ಕೆಲವೊಮ್ಮೆ ಸಣ್ಣ ಸಣ್ಣ ವಿಚಾರಗಳು, ಸಿಲ್ಲಿ ಸಿಲ್ಲಿ ಸಂಗತಿಗಳು ಮನಸ್ಸಿಗೆ ಖುಷಿ ಕೊಡುತ್ತವೆ' ಎಂದು ಬರೆದುಕೊಂಡಿದ್ದಾರೆ. 

 

ಸದ್ಯ ಅಕ್ಷಯ್ ಕುಮಾರ್ ಗುಡ್ ನ್ಯೂಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.  ಕಿಯಾರಾ ಅಡ್ವಾಣಿ, ಕರೀನಾ ಕಪೂರ್ ಹಾಗೂ ದಿಲ್ಜಿತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?