ಸ್ಪಾಟ್‌ಬಾಯ್‌ನನ್ನು ಬಿಸಿನೆಸ್‌ಮನ್‌ ಮಾಡಿದ ಭೂಮಿ ಪೆಡ್ನೇಕರ್‌

Suvarna News   | Asianet News
Published : Feb 04, 2020, 03:36 PM IST
ಸ್ಪಾಟ್‌ಬಾಯ್‌ನನ್ನು ಬಿಸಿನೆಸ್‌ಮನ್‌ ಮಾಡಿದ ಭೂಮಿ ಪೆಡ್ನೇಕರ್‌

ಸಾರಾಂಶ

ಕಲಾವಿದರು ಒಳ್ಳೆಯ ಮನಸ್ಸು ಹೊಂದಿದರೆ ಎಷ್ಟುಒಳ್ಳೆಯ ಕೆಲಸ ಮಾಡಬಹುದು ಅನ್ನುವುದಕ್ಕೆ ಭೂಮಿ ಪೆಡ್ನೇಕರ್‌ ಉದಾಹರಣೆ.

ತನ್ನ ಜತೆ ಕೆಲಸ ಮಾಡುತ್ತಿದ್ದ ಸ್ಪಾಟ್‌ಬಾಯ್‌ ಉಪೇಂದ್ರ ಸಿಂಗ್‌ರನ್ನು ಆಕೆ ಈಗ ಬಿಸಿನೆಸ್‌ಮನ್‌ ಮಾಡಿದ್ದಾರೆ.

ಉಪೇಂದ್ರ ಸಿಂಗ್‌ಗೆ ಮೊದಲಿನಿಂದಲೂ ಕ್ಯಾರವಾನ್‌ ರೆಡಿ ಮಾಡುವ ಬಿಸಿನೆಸ್‌ ಶುರು ಮಾಡಬೇಕು ಎಂಬ ಆಸೆ ಇತ್ತು. ಆದರೆ ಹೇಗೆ ಅಂತ ಗೊತ್ತಿರಲಿಲ್ಲ. ಸುಮಾರು ವರ್ಷ ಈ ಕನಸನ್ನು ಹೊತ್ತು ಉಪೇಂದ್ರ ಸಿಂಗ್‌ ತಿರುಗಾಡುತ್ತಿದ್ದರು. ಒಂದು ದಿನ ಧೈರ್ಯ ಮಾಡಿ ಭೂಮಿ ಪೆಡ್ನೇಕರ್‌ರ ಬಳಿ ತಮ್ಮ ಆಸೆ ಹೇಳಿಕೊಂಡರು.

ಬೆಳ್ಳಗಿದ್ದ ನಟಿ ಕಪ್ಪಾಗಿದ್ಯಾಕೆ? ಸೋಷಿಯಲ್ ಮೀಡಿಯಾದಲ್ಲಿ ಈಕೆ ಬಗ್ಗೆ ಚರ್ಚೆಯಾಕೆ?

ಭೂಮಿ ಅದನ್ನು ಕೇಳಿ ಉಪೇಂದ್ರರಿಗೆ ಸ್ಫೂರ್ತಿ ತುಂಬಿ ಸಹಾಯ ಮಾಡಿ ಅವರ ಬಿಸಿನೆಸ್‌ ಶುರು ಮಾಡುವಂತೆ ಮಾಡಿದರು. ಅದೇ ಪ್ರೀತಿಯಿಂದ ಉಪೇಂದ್ರ ಸಿಂಗ್‌ ಮೊದಲಿಗೆ ಭೂಮಿ ಕ್ಯಾರವಾನ್‌ ಅನ್ನೇ ಚಂದಕ್ಕೆ ರೆಡಿ ಮಾಡಿ ಕೊಟ್ಟಿದ್ದಾರೆ. ತಾನು ಬಿಸಿನೆಸ್‌ ಶುರು ಮಾಡಲು ಭೂಮಿಯೇ ಕಾರಣ ಎಂದಿದ್ದಾರೆ. ಇಂಥಾ ಕತೆ ಆಗಾಗ ಕಿವಿಗೆ, ಕಣ್ಣಿಗೆ ಬೀಳುತ್ತಿದ್ದರೆ ಮನಸ್ಸು ಹಗುರಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!