ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿಬಿದ್ದ ಯುವ ನಟನಿಗೆ ಸರ್ಕಾರದ ರಕ್ಷಣೆ..?

Suvarna News   | Asianet News
Published : Nov 06, 2020, 01:38 PM ISTUpdated : Nov 06, 2020, 06:06 PM IST
ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿಬಿದ್ದ ಯುವ ನಟನಿಗೆ ಸರ್ಕಾರದ ರಕ್ಷಣೆ..?

ಸಾರಾಂಶ

ಮಾಲಿವುಡ್ ನಟನ ಮನೆಯ ಮೇಲೆ ಕರ್ನಾಟಕ ಜಾರಿ ನಿರ್ದೇಶನಾಲಯ ತಂಡ ದಾಳಿ | ನಟನ ಬಗ್ಗೆ ಸಿಪಿಎಂ ನಿಲುವೇನು ? ಬಿನೀಶ್ ನೆರವಿಗೆ ಬರುತ್ತಾ ಸರ್ಕಾರ?

ತಿರುವನಂತಪುರಂ(ನ.07): ಡ್ರಗ್ಸ್ ಮಾಫಿಯಾ ಸಂಬಂಧ ಮಾಲಿವುಡ್ ನಟ ಬಿನೀಶ್ ಕೊಡಿಯೇರಿ ಮನೆ ಮೇಲೆ ದಾಳಿ ನಡೆದ ಬೆನ್ನಲ್ಲೇ ಸರ್ಕಾರ ಮೇಲೆ ಕೆಂದ್ರ ತನಿಖಾ ಸಂಸ್ಥೆಗಳ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಪಿಎಂ ಶುಕ್ರವಾರದಿಂದ ಎರಡು ದಿನದ ಸಭೆ ನಡೆಸಲಿದೆ. ನಟನ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ಕೇರಳದ ಆಡಳಿತ ಪಕ್ಷದ ಸ್ಪಷ್ಟ ನಿಲುವು ಈ ಸಭೆಯ ನಂತರ ಸಿಗಲಿದೆ.

ನಟ ಬಿನೀಶ್ ಮನೆ ಮೇಲೆ ನಡೆದ ಇಡಿ ದಾಳಿ ರಾಜಕೀಯ ಪ್ರೇರಿತ ಎಂಬ ಭಾವನೆ ಸಿಪಿಎಂನಲ್ಲಿದೆ. ಆದರೆ ಈವರೆಗೂ ಪಕ್ಷ ಈ ಘಟನೆಯಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗಿಲ್ಲ. ಈ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡುವಲ್ಲಿಯೂ ಸಿಪಿಎಂ ಹೆಚ್ಚಿನ ಜಾಗರೂಕತೆ ವಹಿಸುತ್ತಿದೆ.

ಬೆಂಗಳೂರು ಡ್ರಗ್ಸ್ ಜಾಲಕ್ಕೆ ಕೇರಳದಿಂದ ಹಣ: ಬೇನಾಮಿ ಹೆಸರಲ್ಲಿ ಯುವನಟನ ಅಕ್ರಮ ಆಸ್ತಿ

ಈ ಪ್ರಕರಣದ ಸಂಬಂಧ ಬಹಳಷ್ಟು ಪ್ರಶ್ನೆಗಳನ್ನು ಕೇಳಿದರೂ ಸಿಎಂ ಪಿಣರಾಯಿ ವಿಜಯನ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಈ ಘಟನೆಯಲ್ಲಿ ಕುಟುಂಬವು ಕಾನೂನು ನೆರವು ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಗುರುವಾರ ಬೆಳಗ್ಗೆ, ಬಿನೀಶ್ ಅವರ ಮನೆಯಲ್ಲಿ ನಡೆದ ನಾಟಕೀಯ ಘಟನೆ ವೈರಲ್ ಆದಾಗ ಸಿಪಿಎಂನ ಲಭ್ಯವಿರುವ ಕಾರ್ಯದರ್ಶಿಗಳು ಇಲ್ಲಿನ ಎಕೆಜಿ ಕೇಂದ್ರದಲ್ಲಿ ಭೇಟಿಯಾಗಿದ್ದಾರೆ.

ತಂದೆ ಪಕ್ಷ ಕಟ್ಟಿದ್ದಾರೆ, ನನಗದು ಸಂಬಂಧವಿಲ್ಲ; ವಿಜಯ್ ದಳಪತಿ!

ಸಭೆಯಲ್ಲಿ ಸಿಎಂ ಪಿಣರಾಯಿ ವಿಜಯ್, ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ಸದಸ್ಯರಾದ ಎಸ್‌. ರಾಮಚಂದ್ರನ್ ಪಿಳ್ಳೈ, ಎಂಎ ಬೇಬಿ ಇದ್ದರು. ಬಿನೀಶ್ ಮನೆಯಲ್ಲಿ ನಡೆದ ಘಟನೆಗಳು ಮಾನವ ಹಕ್ಕಿನ ಉಲ್ಲಂಘನೆ ಎಂದೂ ಆರೋಪಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್