Bhavana Menon: 'ಮಲಯಾಳಂ ಚಿತ್ರರಂಗದ ಹೆಮ್ಮೆ' ಎಂದ ಸಚಿವರು; ನಟಿ ಭಾವನಾಗೆ ಪ್ರಶಂಸೆ ಸುರಿಮಳೆ

Published : Dec 17, 2025, 11:44 AM IST
Bhavana Menon

ಸಾರಾಂಶ

ಕೇರಳ ಸಿಎಂ ಆಯೋಜಿಸಿದ್ದ ಈ 'ಕ್ರಿಸ್ಮಸ್ ವಿತರಣೆ' ಕಾರ್ಯಕ್ರಮದಲ್ಲಿ ಭಾವನಾ ಅವರ ನಗು ಮತ್ತು ಸಚಿವರ ಮೆಚ್ಚುಗೆಯ ಮಾತುಗಳು ಇಂಟರ್ನೆಟ್‌ನಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿವೆ. ನಟಿ ಭಾವಾನಾ ಮೆನನ್ ಸದ್ಯ ಸೋಷಿಯಲ್ ಮೀಡಿಯಾ ಸೇರಿದಂತೆ ಇಡೀ ಇಂಡಿಯಾದಲ್ಲಿ ವೈಯಕ್ತಿಕ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಭಾವನಾ ಮೆನನ್‌ಗೆ ಸಂದ ಗೌರವ

ಕೇರಳ ಸರ್ಕಾರದ ಕ್ರಿಸ್ಮಸ್ ಔತಣಕೂಟದಲ್ಲಿ ಮಿಂಚಿದ ನಟಿ ಭಾವನಾ; 'ಮಲಯಾಳಂ ಚಿತ್ರರಂಗದ ಹೆಮ್ಮೆ' ಎಂದು ಕೊಂಡಾಡಿದ ಸಚಿವ!

ದಕ್ಷಿಣ ಭಾರತದ ಬಹುಭಾಷಾ ತಾರೆ, ಕನ್ನಡಿಗರ ಅಚ್ಚುಮೆಚ್ಚಿನ ನಟಿ ಭಾವನಾ ಅವರಿಗೆ ಕೇರಳ ಸರ್ಕಾರದಿಂದ ವಿಶೇಷ ಗೌರವ ದೊರೆತಿದೆ. ಕೇರಳದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಈ ಪ್ರಯುಕ್ತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಆಯೋಜಿಸಿದ್ದ ಅದ್ಧೂರಿ ಕ್ರಿಸ್ಮಸ್ ಔತಣಕೂಟದಲ್ಲಿ ಭಾವನಾ ಅವರು 'ಮುಖ್ಯ ಅತಿಥಿ'ಯಾಗಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ತಿರುವನಂತಪುರಂನಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು, ಧಾರ್ಮಿಕ ಮುಖಂಡರು ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜರು ಉಪಸ್ಥಿತರಿದ್ದರು. ಇವರೆಲ್ಲರ ನಡುವೆ ನಟಿ ಭಾವನಾ ಅವರ ಉಪಸ್ಥಿತಿ ಕಾರ್ಯಕ್ರಮದ ಹೈಲೈಟ್ ಆಗಿತ್ತು. ಅತ್ಯಂತ ಸರಳ ಹಾಗೂ ಸುಂದರ ಉಡುಗೆಯಲ್ಲಿ ಕಾಣಿಸಿಕೊಂಡ ಭಾವನಾ, ಮುಖ್ಯಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡರು.

"ಮಲಯಾಳಂ ಚಿತ್ರರಂಗದ ಹೆಮ್ಮೆ"

ಈ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಮುಖ್ಯ ಕಾರಣ ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ (V Sivankutty) ಅವರ ಒಂದು ಪೋಸ್ಟ್. ಔತಣಕೂಟದಲ್ಲಿ ಭಾವನಾ ಅವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಸಚಿವರು, ಭಾವನಾ ಅವರನ್ನು ಮನಸಾರೆ ಹೊಗಳಿದ್ದಾರೆ. ಫೋಟೋಗೆ ಅವರು "ಮಲಯಾಳಂ ಚಿತ್ರರಂಗದ ಹೆಮ್ಮೆ" (Pride of Malayalam Cinema) ಎಂದು ಕ್ಯಾಪ್ಷನ್ ನೀಡಿದ್ದಾರೆ. ಸಚಿವರ ಈ ಸಾಲುಗಳು ಅಭಿಮಾನಿಗಳ ಹೃದಯ ಗೆದ್ದಿದ್ದು, ಭಾವನಾ ಅವರ ಧೈರ್ಯ ಮತ್ತು ಪ್ರತಿಭೆಗೆ ಸರ್ಕಾರ ನೀಡಿದ ಮನ್ನಣೆ ಇದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಿಗರ ಪ್ರೀತಿಯ 'ಜಾಕಿ' ಬೆಡಗಿ

ನಟಿ ಭಾವನಾ ಕೇವಲ ಮಲಯಾಳಂಗೆ ಸೀಮಿತವಾಗಿಲ್ಲ. ಪುನೀತ್ ರಾಜ್‌ಕುಮಾರ್ ಅವರ ಜೊತೆಗಿನ 'ಜಾಕಿ', ಸುದೀಪ್ ಅವರೊಂದಿಗಿನ 'ವಿಷ್ಣುವರ್ಧನ್', ಮತ್ತು ಗಣೇಶ್ ಜೊತೆಗಿನ 'ರೋಮಿಯೋ' ಸೇರಿದಂತೆ ಹಲವು ಸೂಪರ್ ಹಿಟ್ ಕನ್ನಡ ಸಿನಿಮಾಗಳ ಮೂಲಕ ಅವರು ಕರ್ನಾಟಕದ ಮನೆಮಾತಾಗಿದ್ದಾರೆ. ಕಷ್ಟದ ಸಮಯದಲ್ಲೂ ಕುಗ್ಗದೆ, ಛಲದಿಂದ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಭಾವನಾ ಅವರಿಗೆ ಕೇರಳ ಸರ್ಕಾರ ಈ ರೀತಿ ಗೌರವ ನೀಡಿರುವುದು, ಅವರನ್ನು ಮುಖ್ಯವಾಹಿನಿಯಲ್ಲಿ ಗುರುತಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಒಟ್ಟಿನಲ್ಲಿ, ಕೇರಳ ಸಿಎಂ ಆಯೋಜಿಸಿದ್ದ ಈ 'ಕ್ರಿಸ್ಮಸ್ ವಿತರಣೆ' ಕಾರ್ಯಕ್ರಮದಲ್ಲಿ ಭಾವನಾ ಅವರ ನಗು ಮತ್ತು ಸಚಿವರ ಮೆಚ್ಚುಗೆಯ ಮಾತುಗಳು ಇಂಟರ್ನೆಟ್‌ನಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿವೆ. ನಟಿ ಭಾವಾನಾ ಮೆನನ್ ಸದ್ಯ ಸೋಷಿಯಲ್ ಮೀಡಿಯಾ ಸೇರಿದಂತೆ ಇಡೀ ಇಂಡಿಯಾದಲ್ಲಿ ವೈಯಕ್ತಿಕ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಲೈಫ್‌ನ ಕಹಿ ಘಟನೆಯು ಮುಂದೆ ಅದ್ಯಾವ ತಿರುವು ಪಡೆಯುತ್ತೆ ಎಂಬುದನ್ನು ಕಾದು ನೋಡವ ಸಂದರ್ಭ ಒದಗಿಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆ 'XYZ' ವ್ಯಕ್ತಿ ಯಾರೆಂದೇ ಗೊತ್ತಿಲ್ಲ.. ನಾನು ಯಾರನ್ನೂ ಮದುವೆಯಾಗಿಲ್ಲ; ನಟಿ ಮೆಹ್ರೀನ್ ಪೀರ್ಜಾದಾ ಕೆಂಡಾಮಂಡಲ!
'ಜನರದ್ದು ಎಮ್ಮೆಯ ಚರ್ಮ'.. ಅಂದು ಹೇಳಿದ್ದ ಅಕ್ಷಯ್ ಖನ್ನಾ ಮಾತೀಗ ವೈರಲ್.. ಈಗ ನೆಟ್ಟಿಗರು ಹೇಳ್ತಿರೋದೇನು?