#BetheREALMAN ಖ್ಯಾತ ನಿರ್ದೇಶಕರ ಕೈಯಲ್ಲಿ ಕ್ಯಾಮೆರಾ ಬದಲು ಬಂತು ಕಸ ಪೊರಕೆ, ಎಂಜಲು ಪಾತ್ರೆ!

Suvarna News   | Asianet News
Published : Apr 21, 2020, 04:51 PM ISTUpdated : Apr 21, 2020, 11:34 PM IST
#BetheREALMAN ಖ್ಯಾತ ನಿರ್ದೇಶಕರ ಕೈಯಲ್ಲಿ ಕ್ಯಾಮೆರಾ ಬದಲು ಬಂತು ಕಸ ಪೊರಕೆ, ಎಂಜಲು ಪಾತ್ರೆ!

ಸಾರಾಂಶ

ಲಾಕ್‌ಡೌನ್‌ ವೇಳೆ ವರ್ಕೌಟ್‌, ಫೇಸ್‌ಬುಕ್‌ ಲೈವ್‌, ಇನ್‌ಸ್ಟಾಗ್ರಾಂ ಲೈವ್‌ ಮಾಡುತ್ತಿದ್ದ ನಟ ಹಾಗೂ ನಿರ್ದೇಶಕರಿಗೆ ಹೊಸ ಚಾಲೆಂಜ್‌ ಎದುರಾಗಿದೆ...

ಕೊರೋನಾ ವೈರಸ್‌ ಲಾಕ್‌ಡೌನ್‌ 2.0ನಲ್ಲಿರುವ ನಾವೆಲ್ಲರೂ ಮೇ 3ರ ವರೆಗೂ ಗೃಹಬಂಧಿತರಾಗಿರುತ್ತೇವೆ, ದಿನದ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಮನೆಯಿಂದ ಹೊರಗೆ ಬರುತ್ತೇವೆ ಅದೂ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಹಿಡಿದು.  ವೃತ್ತಿ ಜೀವನದಲ್ಲಿ ಫುಲ್‌ ಬ್ಯುಸಿಯಾಗಿರುವವರಿಗೆ  ಕುಟುಂಬಸ್ಥರ ಜೊತೆ ಸಮಯ ಕಳೆಯುವುದಕ್ಕೆ ಇದು ರೈಟ್‌ ಟೈಂ ಎಂದೇ ಹೇಳಬಹುದು.

ಇನ್ನು ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿರುವ  ಕಾರಣ ಸಿನಿಮಾ ನಟ-ನಟಿರಯ ಲೈವ್‌ ವಿಡಿಯೋಗಳ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಈ ಲೈವ್‌ ಚ್ಯಾಟ್‌ ನಡುವೆ ನಟರು, ನಿರ್ಮಾಪಕರು ಹಾಗೂ ನಿರ್ದೇಶಕರು ಹೊಸ ಚ್ಯಾಲೆಂಜ್‌  ಶುರು ಮಾಡಿದ್ದಾರೆ ಅದುವೇ   #BetheREALMAN ಎಂದು.

ಕಥೆ ಹಿಂದಿನ ವ್ಯಥೆ ಎಂದಿಗೂ ಸ್ಪೂರ್ತಿದಾಯಕ: ಕೇಳಿ ನವೀನ್ ಕೃಷ್ಣ ಅವರ ಕ್ಲೋಸಪ್ ಕಥೆ

ಅರ್ಜುನ್‌ ರೆಡ್ಡಿ ಚಿತ್ರದ ನಿರ್ದೇಶಕ ಸಂದೀಪ್‌ ರೆಡ್ಡಿ ವಾಂಗ ಈ ಚಾಲೆಂಚ್‌ಗೆ ಕಾರಣ. ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವ ವಿಡಿಯೋ ಶೇರ್ ಮಾಡಿಕೊಂಡು 'Man can be a great domestic worker and a real man will never let his woman work all by herself specially during this No maid times & Quarantine' ಎಂದು ಬರೆದುಕೊಂಡು ಬಾಹುಬಲಿ ನಿರ್ದೇಶಕ ರಾಜಮೌಳಿಗೆ ಚಾಲೆಂಜ್  ಮಾಡಿದ್ದಾರೆ.

 

ಚಾಲೆಂಜ್  ಸ್ವೀಕರಿಸಿದ ರಾಜಮೌಳಿ ಮನೆಯಲ್ಲಿ ಕಸ ಪೊರಕೆ ಹಿಡಿದು ಕೆಲಸ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆ ನಂತರ ಇನ್ನಿತ್ತರಿಗೆ ಟ್ಯಾಗ್ ಮಾಡಿ ಸವಾಲು  ಸ್ವೀಕರಿಸಲು ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!