ತಂದೆಯ 2ನೇ ಮದುವೆ ಸುಶಾಂತ್‌ಗೆ ಇಷ್ಟವಿರಲಿಲ್ಲ: ಹೇಳಿಕೆ ಕೊಟ್ಟ ಶಿವಸೇನಾ MPಗೆ ಸಂಕಟ

Suvarna News   | Asianet News
Published : Aug 11, 2020, 03:57 PM ISTUpdated : Aug 11, 2020, 03:59 PM IST
ತಂದೆಯ 2ನೇ ಮದುವೆ ಸುಶಾಂತ್‌ಗೆ ಇಷ್ಟವಿರಲಿಲ್ಲ: ಹೇಳಿಕೆ ಕೊಟ್ಟ ಶಿವಸೇನಾ MPಗೆ ಸಂಕಟ

ಸಾರಾಂಶ

ಸುಶಾಂತ್‌ಗೆ ತಂದೆಯೊಂದಿಗೆ ಒಳ್ಳೆಯ ಸಂಬಂಧವಿರಲಿಲ್ಲ. ತಂದೆಯ ಎರಡನೇ ಮದುವೆ ಬಗ್ಗೆ ಸುಶಾಂತ್ ಬೇಸರಿಸಿಕೊಂಡಿದ್ದ ಎಂದು ಹೇಳಿಕೆ ಕೊಟ್ಟಿದ್ದ ಶಿವಸೇನಾ ಸಂದನಿಗೆ ಈಗ ಸಂಕಟ ಎದುರಾಗಿದೆ.

ಸುಶಾಂತ್‌ಗೆ ತಂದೆಯೊಂದಿಗೆ ಒಳ್ಳೆಯ ಸಂಬಂಧವಿರಲಿಲ್ಲ. ತಂದೆಯ ಎರಡನೇ ಮದುವೆ ಬಗ್ಗೆ ಸುಶಾಂತ್ ಬೇಸರಿಸಿಕೊಂಡಿದ್ದ ಎಂದು ಹೇಳಿಕೆ ಕೊಟ್ಟಿದ್ದ ಶಿವಸೇನಾ ಸಂದನಿಗೆ ಈಗ ಸಂಕಟ ಎದುರಾಗಿದೆ.

ಶಿವಸೇನಾ ಎಂಪಿ ಸಂಜಯ್ ರಾವತ್ ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕು. ಇಲ್ಲವಾದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ ಎಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಹೋದರ ನೀರಜ್ ಬಾಬ್ಲು ತಿಳಿಸಿದ್ದಾರೆ.

ಸುಶಾಂತ್ ಸಾವಿಗೂ ಮುನ್ನ ಯಾರ ಸಂಪರ್ಕದಲ್ಲಿದ್ದರು ರಿಯಾ? ಮೊಬೈಲ್‌ ನಿಂದ ಶಾಕಿಂಗ್ ಮಾಹಿತಿ!

ಸುಶಾಂತ್ ತಂದೆ ಕೆಕೆ ಸಿಂಗ್ ಬಗ್ಗೆ ಸಂಜಯ್ ರಾವತ್‌ ಹೇಳಿಕೆ ಶುದ್ಧ ಸುಳ್ಳು. ಸಂಸದ ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವುದನ್ನು ಆರಂಭದಿಂದಲೇ ವಿರೋಧಿಸಿದ ಸಂಜಯ್ ರಾವತ್, ತನಿಖೆಯಲ್ಲಿ ಸುಶಾಂತ್ ಹಾಗೂ ಆತನ ತಂದೆ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ ಎಂದು ತಿಳಿದು ಬಂದಿದೆ. ಸುಶಾಂತ್ ತಂದೆಯನ್ನು ಎಷ್ಟು ಸಲ ಭೇಟಿಯಾಗಿದ್ದ ಎಂದು ಪ್ರಶ್ನಿಸಿದ್ದರು.

ಸುಶಾಂತ್‌ಗೆ ಓವರ್‌ಡೋಸ್ ಔಷಧ ಕೊಟ್ಟಿದ್ದ ಗರ್ಲ್‌ಫ್ರೆಂಡ್ ರಿಯಾ..!

ಸುಶಾಂತ್ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಈ ಕೇಸನ್ನು ಮುಂಬೈ ಪೊಲೀಸರ ಕೈಯಿಂದ ತೆಗೆದುಕೊಳ್ಳುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದ್ದರು.

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಮುಂಬೈನಲ್ಲಿ, ಬಿಹಾರದಲ್ಲಿ ಎಫ್‌ಐಆರ್ ದಾಖಲಿಸಿದ್ದೇಕೆ..? ಘಟನೆ ನಡೆದು 40 ದಿನಗಳ ಬಳಿಕ ಕುಟುಂಬ ಕೇಸ್ ಕೊಡಲು ಮುಂದಾಗಿದೆ ಎಂದು ಸಂಜಯ್ ತಮ್ಮ ಅಂಕಣದಲ್ಲಿ ಹೇಳಿದ್ದರು.

ಸುಶಾಂತ್ ಆತ್ಮಹತ್ಯೆ ಪ್ರಕರಣ: ತನಿಖೆ ನಡೆದು ಬಂದ ಹಾದಿ ಇದು..!

ಈ ಸಂಬಂಧ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಅವರು ಸಂಜಯ್ ರಾವತ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತಂದೆ ಮಗನ ಸಂಬಂಧದ ಬಗ್ಗೆ ಹೇಳಿಕೆ ನೀಡಿರುವುದನ್ನು ಖಂಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?