ಅಮಿತಾಭ್ ಬಚ್ಚನ್ ಅವರ 'ನಿಗೂಢ' ಬರಹ: ಜಗತ್ತಿನ ಜೊತೆ ಏನಂತ ಶೇರ್ ಮಾಡ್ಕೊಂಡ್ರು ಬಾಲಿಬಿಡ್ 'ಬಿಗ್ ಬಿ'..?

Published : Feb 18, 2026, 12:22 PM IST
Amitabh Bachchan In KBC 17

ಸಾರಾಂಶ

"ಹಿಂದೆ ಸೌಲಭ್ಯಗಳು ಕಡಿಮೆ ಇದ್ದಾಗ ಸಿಗುತ್ತಿದ್ದ ಸುಖ ಮತ್ತು ತೃಪ್ತಿ, ಇಂದು ಎಲ್ಲವೂ ಹೇರಳವಾಗಿ ಸಿಗುತ್ತಿರುವಾಗ ಸಿಗುತ್ತಿಲ್ಲ. ಕಡಿಮೆ ಸೌಲಭ್ಯಗಳಲ್ಲಿ ಬದುಕಿದವರಿಗೆ, ಇಂದಿನ ಅತಿಯಾದ ಸೌಕರ್ಯಗಳು ಒಂದು ರೀತಿಯ ಅಸಮತೋಲನವನ್ನು ಉಂಟುಮಾಡುತ್ತವೆ” ಎಂದಿದ್ದಾರೆ ಅಮಿತಾಭ್ ಬಚ್ಚನ್.

ಬಾಲಿವುಡ್ ಬಿಗ್ ಬಿ ಹೇಳಿದ್ದೇನು?

ಮುಂಬೈ: ಬಾಲಿವುಡ್ ಚಿತ್ರರಂಗದ ದಂತಕಥೆ, ಮೆಗಾಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಅವರು ಕೇವಲ ಬೆಳ್ಳಿತೆರೆಯ ಮೇಲಷ್ಟೇ ಅಲ್ಲ, ಸಾಮಾಜಿಕ ಜಾಲತಾಣ ಹಾಗೂ ತಮ್ಮ ಬ್ಲಾಗ್ ಬರಹಗಳ ಮೂಲಕವೂ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. 80ರ ಹರೆಯದಲ್ಲೂ ಬಿಗ್ ಬಿ ಅವರ ಚಟುವಟಿಕೆ ಕಂಡು ಯುವಜನತೆಯೇ ನಾಚಬೇಕು. ಇತ್ತೀಚೆಗೆ ಅಮಿತಾಬ್ ಬಚ್ಚನ್ ಅವರು ತಮ್ಮ ಬ್ಲಾಗ್‌ನಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅವರ ಈ ಬರಹವು ಬದುಕಿನ ಆಳವಾದ ತತ್ವ ಹಾಗೂ 'ಅತಿಯಾದ ಆಲೋಚನೆ'ಯ (Overthinking) ಸುತ್ತ ಹೆಣೆಯಲ್ಪಟ್ಟಿದೆ.

ಆ ನಿಗೂಢ ಪುಸ್ತಕ ಮತ್ತು ಬಿಗ್ ಬಿ ಆಲೋಚನೆ:

ಅಮಿತಾಬ್ ಬಚ್ಚನ್ ಅವರು ಸದಾ ತಮ್ಮ ಮನಸ್ಸಿನಲ್ಲಿ ಓಡುತ್ತಿರುವ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಬಾರಿ ಅವರು "ಅತಿಯಾಗಿ ಯೋಚಿಸುವುದು ಅಥವಾ ಏನನ್ನೂ ಯೋಚಿಸದಿರುವುದು" ಎಂಬ ವಿಭಿನ್ನ ಆಯಾಮದ ಬಗ್ಗೆ ಬರೆದಿದ್ದಾರೆ. ಯಾರೋ ಒಬ್ಬರು ಅವರಿಗೆ ಒಂದು ಪುಸ್ತಕವನ್ನು ಉಡುಗೊರೆಯಾಗಿ ಕಳುಹಿಸಿದ್ದಾರಂತೆ. ಆದರೆ ಆ ಪುಸ್ತಕದ ಹೆಸರು ಅಥವಾ ಅದರ ಲೇಖಕ ಯಾರು ಎಂಬುದನ್ನು ಬಿಗ್ ಬಿ ಎಲ್ಲಿಯೂ ಬಹಿರಂಗಪಡಿಸಿಲ್ಲ.

ಅವರು ಬರೆದಿರುವಂತೆ, "ಹೆಚ್ಚು ಯೋಚಿಸುವುದು ಅಥವಾ ಏನನ್ನೂ ಯೋಚಿಸದಿರುವುದು.. ನನಗೆ ಕಳುಹಿಸಲಾದ ಪುಸ್ತಕದ ವಿಷಯವೂ ಇದೇ ಆಗಿರಬಹುದು. ಯಾವ ಉದ್ದೇಶದಿಂದ ಇದನ್ನು ನನಗೆ ಕಳುಹಿಸಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಇದನ್ನು ಓದುವ ಬಗ್ಗೆ ನಾನು 'ಯೋಚಿಸುತ್ತೇನೆ' (Think).. ಮತ್ತು ಇಲ್ಲಿ ಹಂಚಿಕೊಳ್ಳಲು ಏನಾದರೂ ವಿಷಯ ಸಿಕ್ಕಾಗ ಅದರ ಬಗ್ಗೆಯೂ 'ಯೋಚಿಸುತ್ತೇನೆ'.." ಎಂದು ಮಾರ್ಮಿಕವಾಗಿ ಬರೆದಿದ್ದಾರೆ. ಅವರ ಈ 'ಯೋಚನೆ'ಯ ಆಟ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಮೂಡಿಸಿದೆ.

ಬಡತನದ ಸರಳತೆ ಮತ್ತು ಇಂದಿನ ಐಷಾರಾಮಿ ಜೀವನ:

ಕೇವಲ ಆಲೋಚನೆಗಳ ಬಗ್ಗೆ ಮಾತ್ರವಲ್ಲದೆ, ಬಿಗ್ ಬಿ ಬದುಕಿನ ಏರಿಳಿತಗಳ ಬಗ್ಗೆಯೂ ಭಾವುಕರಾಗಿ ಬರೆದಿದ್ದಾರೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನ ಮೂಲ ಅಥವಾ ಬಾಲ್ಯದ ದಿನಗಳು ಅವನನ್ನು ಬಿಟ್ಟು ಹೋಗುವುದಿಲ್ಲ ಎಂಬುದು ಅವರ ಅಭಿಪ್ರಾಯ. "ನಾವು ಎಲ್ಲಿಂದ ಬೆಳೆದು ಬಂದೆವೋ, ಅದು ಸದಾ ನಮ್ಮೊಂದಿಗೆ ಇರುತ್ತದೆ. ಹಿಂದೆ ನಾವಿದ್ದ ಪರಿಸ್ಥಿತಿ ನಮ್ಮ ವ್ಯಕ್ತಿತ್ವದ ಮೇಲೆ ಅಚ್ಚೊತ್ತಿರುತ್ತದೆ. ಬಾಲ್ಯದ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ," ಎಂದು ಅವರು ಸ್ಮರಿಸಿದ್ದಾರೆ.

ವಿಶೇಷವಾಗಿ, "ಹಿಂದೆ ಸೌಲಭ್ಯಗಳು ಕಡಿಮೆ ಇದ್ದಾಗ ಸಿಗುತ್ತಿದ್ದ ಸುಖ ಮತ್ತು ತೃಪ್ತಿ, ಇಂದು ಎಲ್ಲವೂ ಹೇರಳವಾಗಿ ಸಿಗುತ್ತಿರುವಾಗ ಸಿಗುತ್ತಿಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ಕಡಿಮೆ ಸೌಲಭ್ಯಗಳಲ್ಲಿ ಬದುಕಿದವರಿಗೆ, ಇಂದಿನ ಅತಿಯಾದ ಸೌಕರ್ಯಗಳು ಒಂದು ರೀತಿಯ ಅಸಮತೋಲನವನ್ನು ಉಂಟುಮಾಡುತ್ತವೆ. ಆ ಹಳೆಯ ದಿನಗಳ ಸರಳ ಬದುಕಿನಲ್ಲಿ ಸಿಗುತ್ತಿದ್ದ ನೆಮ್ಮದಿ ಇಂದಿನ ಐಷಾರಾಮಿ ಬದುಕಿನಲ್ಲಿ ಸಿಗುವುದು ಕಷ್ಟ," ಎನ್ನುವ ಮೂಲಕ ಬಿಗ್ ಬಿ ಬದುಕಿನ ಕಟು ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಸಿನಿಮಾ ವಿಷಯಕ್ಕೆ ಬಂದರೆ:

ಅಮಿತಾಬ್ ಬಚ್ಚನ್ ಅವರು ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ 'ವೇಟ್ಟೈಯನ್' (Vettaiyan) ಸಿನಿಮಾದಲ್ಲಿ ನಟಿಸಿದ್ದರು. ದಶಕಗಳ ನಂತರ ಈ ಇಬ್ಬರು ದಿಗ್ಗಜರು ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದು ಸಿನಿಮಾ ಪ್ರೇಮಿಗಳಿಗೆ ಹಬ್ಬದಂತಿತ್ತು. ಚಿತ್ರವು ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ಅಮಿತಾಬ್ ಅವರ ಅಭಿನಯಕ್ಕೆ ಎಂದಿನಂತೆ ಪ್ರಶಂಸೆ ವ್ಯಕ್ತವಾಗಿದೆ. ಸದ್ಯ ಬಿಗ್ ಬಿ ಅವರ ಈ ಬ್ಲಾಗ್ ಬರಹಗಳು ಮಾತ್ರ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಫರ್ ಇದೆ ಬನ್ನಿ ಅಂತ ಕರೆದು, ಆಮೇಲೆ ಕೈ ಕೊಡ್ತಾರೆ; ನಟಿಯರ ಕಡೆಗಣನೆ ಬಗ್ಗೆ ಸುಪ್ರೀತಾ ಹೀಗಂದಿದ್ದೇಕೆ?
ನಯನತಾರಾ ಮಾಡಿದ ಅದೊಂದು ಸಣ್ಣ ತಪ್ಪು, ಅನುಷ್ಕಾ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತು!