ನಾವು ಮಂಗಗಳಾಗೋಣ ಎಂದ ನಟ: ರಾಮ ಮಂದಿರ ಬಗ್ಗೆ ಅಕ್ಷಯ್ ಮಾತು

Suvarna News   | Asianet News
Published : Jan 17, 2021, 04:45 PM IST
ನಾವು ಮಂಗಗಳಾಗೋಣ ಎಂದ ನಟ: ರಾಮ ಮಂದಿರ ಬಗ್ಗೆ ಅಕ್ಷಯ್ ಮಾತು

ಸಾರಾಂಶ

ನಮಲ್ಲಿ ಕೆಲವರು ಮಂಗಗಳಾಗೋಣ, ಕೆಲವರು ಅಳಿಲುಗಳಾಗೋಣ ಎಂದ ಬಾಲಿವುಡ್ ನಟ | ಅಯೋಧ್ಯೆಯ ಭವ್ಯ ರಾಮ ಮಂದಿರದ ಬಗ್ಗೆ ಅಕ್ಷಯ್ ಕುಮಾರ್ ಹೇಳಿದ್ದಿಷ್ಟು

ನಮ್ಮಲ್ಲಿ ಕೆಲವರು ಮಂಗಗಳಾಗೋಣ, ಕೆಲವರು ಅಳಿಲುಗಳಾಗೋಣ ಎಂದಿದ್ದಾರೆ ಬಾಲಿವುಡ್ ನಟ ಅಕ್ಷಯ್ ಕುಮಾರ್. ನಟ ಹೀಗಂದಿದ್ದಾಕೆ..? ಇಂಟ್ರೆಸ್ಟಿಂಗ್ ಕಥೆಯನ್ನೂ ಹೇಳಿದ್ದಾರೆ ಅಕ್ಕಿ. ಏನದು..?

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ. ಈ ಸಂಬಂಧ ನಟ ಅಕ್ಷಯ್ ಕುಮಾರ್ ಮಹತ್ವದ ಸಂದೇಶವೊಂದನ್ನು ನೀಡಿದ್ದಾರೆ. ಪುಟ್ಟದೊಂದು ಕಥೆಯ ಮೂಲಕ ದೊಡ್ಡ ಮೆಸೇಜ್ ಕೊಟ್ಟಿದ್ದಾರೆ.

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದಲ್ಲೇ ತಮ್ಮನ್ನು ಪರಿಚಯಿಸಿಕೊಂಡ ಕಿಚ್ಚ ಸುದೀಪ್‌!

ಲಂಕೆಗೆ ಸೇತುವೆ ಕಟ್ಟುವ ಸಂದರ್ಭ ನೀರಲ್ಲಿ ನೆನೆದು ಮರಳಿನ ಮೇಲೆ ಹೊರಳಿ ಕಲ್ಲಿನ ಮೇಲೆ ಬಂದು ಬೀಳುತ್ತಿದ್ದ ಅಳಿಲಿನ ಸೇವೆಯ ಕಥೆಯನ್ನು ಹೆಳಿದ್ದಾರೆ ಅಕ್ಷಯ್. ಅಳಿಲಿನ ಸೇವೆ ನೋಡಿ ರಾಮ ಆಶ್ಚರ್ಯಚಕಿತನಾಗಿದ್ದರ ಬಗ್ಗೆಯೂ ವಿವರಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಈಗ ನಾವೂ ಕೆಲವರು ವಾನರಗಳಾಗಬೇಕು, ಅಳಿಲುಗಳಾಗಬೇಕು, ನಮ್ಮಿಂದಾದಷ್ಟು ನೆರವನ್ನು ನೀಡಬೇಕು ಎಂದಿದ್ದಾರೆ ಅಕ್ಷಯ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ