ರಜನಿಕಾಂತ್ ಮಗಳ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್; ಮತ್ತೊಂದು ದೂರು ದಾಖಲಿಸಿದ ಐಶ್ವರ್ಯಾ

By Shruthi KrishnaFirst Published Apr 1, 2023, 11:11 AM IST
Highlights

ರಜನಿಕಾಂತ್ ಮಗಳ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಐಶ್ವರ್ಯಾ ರಜನಿಕಾಂತ್ ಮತ್ತೊಂದು ದೂರು ದಾಖಲಿಸಿದ್ದಾರೆ. 

ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿನ ಕಳ್ಳತನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. 60 ಪವನ್ ಚಿನ್ನಾಭಾರಣ ಕಳವು ಆಗಿದೆ ಎಂದು ತೇನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಮನೆ ಕೆಲಸದ ಇಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿ ಐಶ್ವರ್ಯಾ ದೂರು ದಾಖಲಿಸಿದ್ದರು. ಮನೆ ಕೆಲಸದಾಕೆ ಈಶ್ವರಿ ಮತ್ತು ಕಾರು ಚಾಲಕ  ವೆಂಕಟೇಶನ್ ಎಂಬ ಇಬ್ಬರನ್ನೂ ಪೊಲೀಸರು ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಐಶ್ವರ್ಯಾ ಮತ್ತೊಂದು ದೂರ ದಾಖಲಿಸಿದ್ದಾರೆ. 200 ಪವನ್ ಚಿನ್ನಾಭರಣ ಮಿಸ್ ಆಗಿದೆ ಎಂದು ಐಶ್ವರ್ಯಾ ದೂರಿನಲ್ಲಿ ತಿಳಿಸಿದ್ದಾರೆ.  

ಐಶ್ವರ್ಯಾ ಸಹೋದರಿ ಸೌಂದರ್ಯ ರಜನಿಕಾಂತ್ ಅವರ ವಿವಾಹ ಸಮಾರಂಭದಲ್ಲಿ ತೆಗೆದ ಫೋಟೋಗಳನ್ನು ಪರಿಶೀಲಿಸಿದ ನಂತರ ಅವರು ಮತ್ತೊಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐಶ್ವರ್ಯಾಅವರ ಮನೆಯ ಕೆಲಸದಾಕೆ ಮತ್ತು ಕಾರು ಚಾಲಕನನ್ನು ಬಂಧಿಸಿ ವಿಚಾರಣೆ ವೇಳೆ ಹೆಚ್ಚಿನ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.  95 ಲಕ್ಷ ಮೌಲ್ಯದ ಭೂ ದಾಖಲೆಗಳು, 100 ಪವನ್ ಚಿನ್ನ, 30 ಗ್ರಾಂ ವಜ್ರ ಮತ್ತು 4 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

Latest Videos

ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ವಶ ಪಡಿಸಿಕೊಂಡ ಬಳಿಕ ಐಶ್ವರ್ಯಾ ಮತ್ತೊಂದು ದೂರು ನೀಡಿದ್ದು ಅದರಲ್ಲಿ 200 ಪವನ್ ಚಿನ್ನ ಕಳುವಾಗಿದೆ ಎಂದು ಹೇಳಿದ್ದಾರೆ. ಐಶ್ವರ್ಯಾ ದೂರಿನ ಬಳಿಕ ಮತ್ತೋರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮತ್ತಷ್ಟು ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.   

Aishwarya Rajinikanth ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಭರಣ ದೋಚಿದ್ದ ಮನೆ ಕೆಲಸದಾಕೆ, ಡ್ರೈವರ್‌ ಅಂದರ್

ಮೊದಲ ದೂರಿನಲ್ಲಿ ಏನಿತ್ತು?

ಐಶ್ವರ್ಯಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳುನಾಡಿನ ಅನೇಕ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದಾರೆ. ಐಶ್ವರ್ಯಾ ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಂದಹಾಗೆ ಈ ಘಟನೆ ಸಂಭವಿಸಿ ಒಂದು ತಿಂಗಳಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಫೆಬ್ರವರಿಯಲ್ಲಿ  ಐಶ್ವರ್ಯಾ ರಜನಿಕಾಂತ್ ಅವರು ಚಿನ್ನಾಭರಣ ಕಳ್ಳತನದ ಬಗ್ಗೆ ದೂರು ದಾಖಲಿಸಿದ್ದರು. 2019 ರಲ್ಲಿ ತನ್ನ ಸಹೋದರಿ ಸೌಂದರ್ಯ ಅವರ ಮದುವೆಯಲ್ಲಿ ಆಭರಣಗಳನ್ನು ಧರಿಸಿದ ಬಳಿಕ ಮತ್ತೆ ಆಭರಣಗಳನ್ನು ಅವರು ನೋಡಿಲ್ಲ. ಅದೇ ಕೊನೆಯ ಬಾರಿಗೆ ಆಭರಣಗಳನ್ನು ನೋಡಿದ್ದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮದುವೆಯ ನಂತರ ಅವುಗಳನ್ನು ತನ್ನ ಬಳಿಯಿದ್ದ ಲಾಕರ್‌ನಲ್ಲಿಯೇ ಇರಿಸಿದ್ದೆ ಎಂದು ಹೇಳಿದ್ದಾರೆ. 

ರಜನಿಕಾಂತ್ ಮಗಳು ಐಶ್ವರ್ಯಾ ಮನೆಯಲ್ಲಿ ಕಳ್ಳತನ, ಚಿನ್ನಾಭರಣ ದೋಚಿದ ಖದೀಮರು; ದೂರು ದಾಖಲು

ಐಶ್ವರ್ಯಾ ರಜನಿಕಾಂತ್ 2022ರಲ್ಲಿ ನಟ ಧನುಷ್ ಜೊತೆ ವಿಚ್ಛೇದನ ಪಡೆದು ದೂರ ಆದರು. ಅದಕ್ಕೂ ಮೊದಲು ಲಾಕರ್ ಅನ್ನು ಮೂರು ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಆಗಸ್ಟ್ 21, 2021 ರಲ್ಲಿ ಆ ಲಾಕರ್ ಅನ್ನು ಸಿಐಟಿ ನಗರದಲ್ಲಿದ್ದ ಐಶ್ವರ್ಯಾ ಮಾಜಿ ಪತಿ ಧನುಷ್ ಅವರ ಫ್ಲಾಟ್‌ಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಅದನ್ನು ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಅಪಾರ್ಟ್ಮೆಂಟ್‌ಗೆ ಸ್ಥಳಾಂತರಿಸಲಾಯಿತು. ಏಪ್ರಿಲ್ 2022 ರಲ್ಲಿ ಪೋಯಸ್ ಗಾರ್ಡನ್ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಲಾಕರ್‌ನ ಕೀಗಳು ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಅವರ ಫ್ಲಾಟ್‌ನಲ್ಲಿ ಉಳಿದಿತ್ತು ಎಂದು ದೂರಿನಲ್ಲಿ ತಿಳಿಸಿದ್ದರು.

click me!