ಮಹಾ ನಿರ್ದೇಶಕನಿಗೆ ನಾಯಿ ಬಿಸ್ಕೆಟ್ ಕೊಟ್ಟಿದ್ದ ನಟಿ ಶ್ರೀದೇವಿ; ಇದೆಂಥಾ ದುರಹಂಕಾರ!

By Sathish Kumar KHFirst Published Oct 1, 2024, 8:03 PM IST
Highlights

ರಾಮ್ ಗೋಪಾಲ್ ವರ್ಮ ಅವರಿಗೆ ಶ್ರೀದೇವಿ ಅಂದ್ರೆ ಎಷ್ಟು ಇಷ್ಟ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಒಂದು ಸಂದರ್ಭದಲ್ಲಿ ಶ್ರೀದೇವಿ ತನಗೆ ಡಾಗ್ ಬಿಸ್ಕಿಟ್ ಕೊಟ್ಟ್ರು ಅಂತ ವರ್ಮಾ ಮಾಡಿದ್ದ ಕಾಮೆಂಟ್ಸ್ ಎಲ್ಲೆಡೆ ಸದ್ದು ಮಾಡುತ್ತಿದೆ.

ರಾಮ್ ಗೋಪಾಲ್ ವರ್ಮ ಅವರಿಗೆ ಶ್ರೀದೇವಿ ಅಂದ್ರೆ ಎಷ್ಟು ಇಷ್ಟ ಅನ್ನೋದು ಎಲ್ಲರಿಗೂ ಗೊತ್ತು.  ವರ್ಮಗೆ ಒಮ್ಮೆ ಶ್ರೀದೇವಿ ಡಾಗ್ ಬಿಸ್ಕಿಟ್ ಕೊಟ್ಟರಂತೆ. ಇದೆಲ್ಲಾ ಯಾವಾಗ ಅಂತೀರಾ..?

ದೇಶದ ಮಹಾ ನಿರ್ದೇಶಕರಲ್ಲಿ ಒಬ್ಬರಾದ ರಾಮ್ ಗೋಪಾಲ್ ವರ್ಮಗೆ ನಟಿ ಶ್ರೀದೇವಿ  ಡಾಗ್ ಬಿಸ್ಕಿಟ್ ಕೊಡೋದೇನೂ ಅಂತ ನಿಮಗೆಲ್ಲಾ ಡೌಟ್ ಬರೋದು ಸಹಜ. ಆದ್ರೆ ಈ ವಿಷ್ಯವನ್ನ ಬೇರೆ ಯಾರೂ ಅಲ್ಲ, ಸ್ವತಃ ವರ್ಮಾ ಅವರೇ.. ಶ್ರೀದೇವಿ ಮುಂದೆಯೇ ಹೇಳಿದ್ದಾರೆ. ಯಾವ ಸಂದರ್ಭದಲ್ಲಿ ಹೀಗೆ ಹೇಳಿದ್ರು ಅಂತೀರಾ? ಶ್ರೀದೇವಿ ಮೇಲಿನ ಅಭಿಮಾನವನ್ನ ವರ್ಮಾ ಅನೇಕ ಬಾರಿ ವ್ಯಕ್ತಪಡಿಸಿದ್ದಾರೆ. ಅದರ ಭಾಗವಾಗಿಯೇ ಒಂದು ಕಾರ್ಯಕ್ರಮದಲ್ಲಿ ವರ್ಮಾ ಈ ಮಾತನ್ನ ಆಡಿದ್ದಾರೆ. ಇದಕ್ಕೆ ಕಾರಣ ಇಲ್ಲದೇನೂ ಇಲ್ಲ. 

Latest Videos

ಒಮ್ಮೆ ನಿರ್ದೇಶಕ ರಾಘವೇಂದ್ರ ರಾವ್ ಅವರ ನೂರು ಸಿನಿಮಾಗಳ ಕುರಿತು ಈಟಿವಿಯಲ್ಲಿ ಕಾರ್ಯಕ್ರಮ ಮಾಡಲಾಗಿತ್ತು. ಅದರಲ್ಲಿ ಒಂದು ಸಂಚಿಕೆಯಲ್ಲಿ ರಾಮ್ ಗೋಪಾಲ್ ವರ್ಮ ಭಾಗವಹಿಸಿದ್ದರು. ವರ್ಮಾ ಜೊತೆಗೆ ಶ್ರೀದೇವಿ ಕೂಡ ಈ ಸಂಚಿಕೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಶ್ರೀದೇವಿ ಅವರ ಚಿತ್ರರಂಗದ ಜೀವನದಲ್ಲಿ ಒಳ್ಳೆಯ ಹೆಸರು ತಂದುಕೊಟ್ಟ ಸಿನಿಮಾಗಳು.. ಅವರನ್ನ ಈ  ಸ್ಥಾನಕ್ಕೆ ಬೆಳೆಸಿದ ಟಾಲಿವುಡ್ ಸಿನಿಮಾಗಳ ಬಗ್ಗೆ ನಿರೂಪಕಿ ಸುಮಾ ಅವರು ಶ್ರೀದೇವಿ ಅವರನ್ನ ಪ್ರಶ್ನಿಸಿದ್ದರು. ಅದಕ್ಕೆ ಶ್ರೀದೇವಿ ನೀಡಿದ ಉತ್ತರ ಕೇಳಿ ರಾಮ್ ಗೋಪಾಲ್ ವರ್ಮ ಈ ಕಾಮೆಂಟ್ಸ್ ಮಾಡಿದ್ದಾರೆ. 

ಕೀರ್ತಿ ಸುರೇಶ್ ನಟಿಸಿದ ಮಹಾನಟಿಯೊಂದಿಗೆ ಒಂದೇ ದಿನದಲ್ಲಿ ಗಂಡ ಹಾಗೂ ಮಗನಾಗಿ ಪಾತ್ರ ಮಾಡಿದ ನಟನಾರು ಗೊತ್ತಾ?

ಶ್ರೀದೇವಿ ಏನಂದ್ರು ಗೊತ್ತಾ?.. 'ಜಗದೇಕ ವೀರುಡು ಅತಿಲೋಕ ಸುಂದರಿ' ಸಿನಿಮಾ ತಮ್ಮ ಚಿತ್ರರಂಗದ ಜೀವನದಲ್ಲಿ ಅದ್ಭುತ ಸಿನಿಮಾ ಅಂತ ಹೇಳಿದ್ರಂತೆ. ಇನ್ನೂ ಕೆಲವು ಸಿನಿಮಾಗಳ ಹೆಸರು ಹೇಳಿದ ಶ್ರೀದೇವಿ.. ಕೊನೆಯಲ್ಲಿ ಕ್ಷಣಂ ಕ್ಷಣಂ ಸಿನಿಮಾ ಕೂಡ ತಮ್ಮ ಚಿತ್ರರಂಗದ ಜೀವನಕ್ಕೆ ತುಂಬಾ ಮುಖ್ಯ ಅಂತ ಹೇಳಿದ್ರಂತೆ. ಇದನ್ನ ಕೇಳಿದ ವರ್ಮಾ, ಏನೋ ಔಟ್ ಆಫ್ ಸಿಲಬಸ್ ಅಂತ ಹೇಳುತ್ತಿದ್ದಾರೆ. ಡಾಗ್ ಬಿಸ್ಕಿಟ್ ಕೊಟ್ಟಂಗೆ.. ನಾನು ಇಲ್ಲೇ ಇದ್ದೀನಿ ಅಂತ ಗೊತ್ತಿದ್ರೂ.. ಜಸ್ಟ್ ಲೈಕ್ ದಟ್ ಹೇಳುತ್ತಿದ್ದಾರೆಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದರಂತೆ. 

ಇದಕ್ಕೆ ಶ್ರೀದೇವಿ ಜೊತೆಗೆ.. ಅಲ್ಲೇ ಇದ್ದ ರಾಘವೇಂದ್ರ ರಾವ್ ಕೂಡ ಉತ್ತರ ನೀಡುತ್ತಾ.. ಅದೇನಿಲ್ಲ. ಆ ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು. ಆಗ ಎಷ್ಟೊಂದು ಸದ್ದು ಮಾಡಿತ್ತು ಅನ್ನೋದು ಎಲ್ಲರಿಗೂ ಗೊತ್ತು ಅಂತ ಹೇಳಿದರು. ಇದನ್ನ ಕೇಳಿ ಎಲ್ಲರೂ ನಕ್ಕರು. ಹೀಗೆ ಶ್ರೀದೇವಿ ನನಗೆ ಡಾಗ್ ಬಿಸ್ಕಿಟ್ ಕೊಡ್ತಿದ್ದಾರೆ ಅಂತ ಆರ್‌ಜಿವಿ ಹೇಳಿದ್ದರು. 

ಆರ್‌ಜಿವಿಗೆ ಶ್ರೀದೇವಿ ಅಂದ್ರೆ ಪಂಚಪ್ರಾಣ: ರಾಮ್ ಗೋಪಾಲ್ ವರ್ಮ ಅವರಿಗೆ ನಟಿ ಶ್ರೀದೇವಿ ಅಂದ್ರೆ ಎಷ್ಟು ಇಷ್ಟ ಅನ್ನೋದನ್ನ ಬೇರೆ ಹೇಳಬೇಕಿಲ್ಲ. ಅಷ್ಟೊಂದು ದೊಡ್ಡ ನಿರ್ದೇಶಕ ಶ್ರೀದೇವಿ ಅವರ ಬಹಳ ದೊಡ್ಡ ಅಭಿಮಾನಿ.. ಶ್ರೀದೇವಿ ಅಂದ್ರೆ ತನಗೆ ಎಷ್ಟು ಇಷ್ಟ ಅನ್ನೋದನ್ನ ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ಒಂದು ರೀತಿಯಲ್ಲಿ ಅವರನ್ನ ಪ್ರೀತಿಸುತ್ತಾ.. ಆರಾಧಿಸುತ್ತಾ ಇರ್ತಾರೆ ಆರ್‌ಜಿವಿ. ಅವರ ಬಗ್ಗೆ ಯಾರಾದ್ರೂ ಏನಾದ್ರೂ ಅಂದ್ರೆ ಸುಮ್ಮನೆ ಬಿಡೋರು ಅಲ್ಲ. ರಾಮ್ ಗೋಪಾಲ್ ವರ್ಮ ಅಷ್ಟರಮಟ್ಟಿಗೆ ಶ್ರೀದೇವಿ ಅವರನ್ನು ಆರಾಧಿಸುತ್ತಾರೆ.

ದೇವಲೋಕದ ಅಪ್ಸರೆ ನನ್ನನ್ನು ಬಿಟ್ಟು ಮುದುಕನನ್ನು ಮದ್ವೆಯಾದ್ಲು! ರಾಮ್‌ ಗೋಪಾಲ್‌ ವರ್ಮಾ ಮಾತು ಮತ್ತೆ ಮುನ್ನೆಲೆಗೆ

ಎನ್‌ಟಿಆರ್ ಸೇರಿದಂತೆ ಹಲವರ ಜೊತೆ ಶ್ರೀದೇವಿ ಸಿನಿಮಾ ಮಾಡುವಾಗಲೇ ಅವರ ಮೇಲೆ ಹುಚ್ಚು ಅಭಿಮಾನ ಬೆಳೆಸಿಕೊಂಡಿದ್ದರಂತೆ ವರ್ಮಾ. ಇನ್ನು ಅವರ ಜೊತೆ ಸಿನಿಮಾ ಮಾಡೋದು ಅಂದ್ರೆ ತುಂಬಾನೇ ಖುಷಿಪಡುತ್ತಿದ್ದರಂತೆ. ಆಗ ವರ್ಮಾ ಅವರನ್ನ ನಿರ್ದೇಶಕರಾಗಿ ನಿಲ್ಲಿಸಿದ ಶಿವ ಸಿನಿಮಾದಲ್ಲಿ ನಾಗಾರ್ಜುನ ಜೊತೆ ಶ್ರೀದೇವಿ ಅವರನ್ನೇ ನಾಯಕಿಯಾಗಿ ತಗೊಳ್ಳಬೇಕು ಅಂತ ತುಂಬಾ ಪ್ರಯತ್ನ ಮಾಡಿದ್ರಂತೆ. ಆದ್ರೆ ಅವರು ಬ್ಯುಸಿಯಾಗಿರೋದ್ರಿಂದ ಅಮಲಾ ಅವರನ್ನ ನಾಯಕಿಯಾಗಿ ತೆಗೆದುಕೊಳ್ಳಬೇಕಾಯಿತಂತೆ. 

ಆದ್ರೆ ಆಮೇಲೆ ಕ್ಷಣ ಕ್ಷಣಂ, ಗೋವಿಂದಾ ಗೋವಿಂದ ಸಿನಿಮಾಗಳಲ್ಲಿ ಶ್ರೀದೇವಿ ಅವರನ್ನ ತಗೊಂಡ್ರು ವರ್ಮಾ. ಇದಿಷ್ಟು ಸಾಲದು ಅಂತ.. ರಾಮ್ ಗೋಪಾಲ್ ವರ್ಮ ತಮ್ಮನ್ನ ಇಷ್ಟೆಲ್ಲಾ ಆರಾಧಿಸಿದ್ರೂ.. ಅವರ ಜೊತೆ ಎರಡು ಸಿನಿಮಾಗಳಿಗಿಂತ ಹೆಚ್ಚು ಸಿನಿಮಾ ಮಾಡೋಕೆ ಆಗಲಿಲ್ಲ ರಾಮ್ ಗೋಪಾಲ್ ವರ್ಮಗೆ.   ಇನ್ನು ಶ್ರೀದೇವಿ ಸಾವಿನ ನಂತರ ಆರ್‌ಜಿವಿ ಎಷ್ಟು ನೋವು ಅನುಭವಿಸಿದ್ರು ಅನ್ನೋದನ್ನ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಂದ ನಾವೆಲ್ಲರೂ ನೋಡಿದ್ದೇವೆ. ಇಂದಿಗೂ ಆರ್‌ಜಿವಿ ಶ್ರೀದೇವಿ ಅವರನ್ನ ಹಾಗೆಯೇ ಆರಾಧಿಸುತ್ತಿದ್ದಾರೆ.

click me!