ದುನಿಯಾ ವಿಜಯ್​ಗೆ 'ದೇವತೆ' ತಂದ ಸಂಕಷ್ಟ! ತಮಿಳಿನ ಚೊಚ್ಚಲ ಚಿತ್ರದಲ್ಲೇ ಕಿರಿಕ್​- ಶೂಟಿಂಗ್​ ಕ್ಯಾನ್ಸಲ್​...

ದೇವತೆಯ ಪಾತ್ರದಿಂದಾಗಿ ನಟ ದುನಿಯಾ ವಿಜಯ್​ಗೆ ಮೊದಲ ತಮಿಳಿನ ಚಿತ್ರದಲ್ಲಿಯೇ ಭಾರಿ ವಿಘ್ನ ಎದುರಾಗಿದ್ದು, ಶೂಟಿಂಗ್​ ಸ್ಥಗಿತವಾಗಿದೆ. ಆಗಿದ್ದೇನು? 
 

Actor Duniya Vijay stared Mookuthi Amman 2 faces an on set controversy involving Nayanthara and Sundar C suc

ಭೀಮಾ ಚಿತ್ರದ ಬಳಿಕ ತಮ್ಮ ಕ್ರೇಜ್​ ಇನ್ನಷ್ಟು ಹೆಚ್ಚಿಸಿಕೊಂಡಿರುವ ದುನಿಯಾ ವಿಜಯ್​ ಅವರಿಗೆ ಈಗ ತಮಿಳಿನಲ್ಲಿಯೂ ಅವಕಾಶ ಸಿಕ್ಕಿದೆ. ಆದರೆ, ಇವರಿಗೆ ಚೊಚ್ಚಲ ಚಿತ್ರದಲ್ಲಿಯೇ ವಿಘ್ನ ಎದುರಾಗಿದೆ. ದೇವತೆ ಪಾತ್ರ ದುನಿಯಾ ವಿಜಯ್​ ಅವರಿಗೆ ಸಂಕಷ್ಟ ತಂದಿದ್ದು, ಮೊದಲ ಚಿತ್ರದಲ್ಲಿಯೇ ಕಿರಿಕ್​ನಿಂದಾಗಿ ಶೂಟಿಂಗ್​ ಕ್ಯಾನ್ಸಲ್​ ಆಗಿದೆ. ಇದುದ ತಮಿಳಿನ "ಮೂಕುತಿ ಅಮ್ಮನ್ 2" ಸಿನಿಮಾದ ಕಥೆ. ಇದಾಗಲೇ ಈ ಸಿನಿಮಾದ ಮೊದಲ ಭಾಗ ತಮಿಳು ಮತ್ತು ತೆಲಗುವಿನಲ್ಲಿ ಸಕತ್​ ಹಿಟ್​ ಆಗಿದೆ. ಇದೀಗ ಎರಡನೆಯ ಭಾಗ ಮಾಡುತ್ತಿದ್ದು, ಇದರಲ್ಲಿ ದುನಿಯಾ ವಿಜಯ್​ ಅವರು ವಿಲನ್​ ಆಗಿ ಮಿಂಚುತ್ತಿದ್ದಾರೆ. ಆದರೆ, ಇದೀಗ ದೇವತೆ ಪಾತ್ರದಲ್ಲಿ ಮಿಂಚಬೇಕಿದ್ದ ನಟಿ ನಯನತಾರಾ ಅವರಿಂದಾಗಿ ಶೂಟಿಂಗ್​ ತಾತ್ಕಾಲಿಕ ಸ್ಥಗಿತಗೊಂಡಿದೆ.


  ಈ ಚಿತ್ರದಲ್ಲಿ,   ನಯನತಾರಾ ದೇವತೆಯಾಗಿ ನಟಿಸುತ್ತಿದ್ದಾರೆ. ಇವರು ದೇವತೆಯಾಗಿದ್ದ ಮೊದಲ ಭಾಗ ಬ್ಲಾಕ್​ ಬಸ್ಟರ್ ಆಗಿತ್ತು. ಕೊನೆಗೆ ಅದನ್ನು ತೆಲುಗುವಿನಲ್ಲಿ  'ಅಮ್ಮೋರು ತಲ್ಲಿ'  ಹೆಸರಿನಲ್ಲಿ ಡಬ್​ ಮಾಡಲಾಗಿತ್ತು.  ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಇದು ಬಿಡುಗಡೆಯಾಗಿ ಸಕ್ಸಸ್​ ಕಂಡಿತ್ತು. ಇದೀಗ  2ನೇ ಭಾಗ ಸೆಟ್ಟೇರಿದೆ. ವೇಲ್ಸ್ ಫಿಲ್ಮ್ ಇಂಟರ್​ನ್ಯಾಷನಲ್​  ಬ್ಯಾನರ್ ಅಡಿಯಲ್ಲಿ ಐಸರಿ ಕೆ. ಗಣೇಶ್ ನಿರ್ಮಿಸಿದ ಈ ಚಿತ್ರವನ್ನು ಆರ್ ಜೆ ಬಾಲಾಜಿ ಮತ್ತು ಎನ್.ಜೆ. ಸರವಣನ್ ನಿರ್ದೇಶಿಸಿದ್ದಾರೆ. ಆದರೆ, ಇದೀಗ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.

Latest Videos

ಮಗನ ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟ ವಿಜಯ ರಾಘವೇಂದ್ರ: ಸ್ಪಂದನಾ ಫೋಟೋಗೆ ಅಭಿಮಾನಿಗಳ ಕಣ್ಣೀರು!

 ಸದ್ಯ ಸಿಕ್ಕಿರುವ ಮಾಹಿತಿ  ಪ್ರಕಾರ ನಟಿ ನಯನತಾರಾ ಮತ್ತು ಸಹಾಯಕ ನಿರ್ದೇಶಕರ ನಡುವೆ ಕಿರಿಕ್‌ ಆಗಿದೆ ಎನ್ನಲಾಗಿದೆ. ಅದು ನಟಿಯ  ವೇಷಭೂಷಣದ ವಿಷಯದಲ್ಲಿ ಕಿರಿಕ್​ ಆಗಿದೆಯಂತೆ.   ಇದರಿಂದಾಗಿ  ನಯನತಾರಾ ಚಿತ್ರತಂಡದ ವಿರುದ್ಧ ಗರಂ ಆಗಿದ್ದು, ಶೂಟಿಂಗ್​ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ವಾಪಸ್​ ಕರೆಸಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ವರದಿಯಾಗಿದ್ದರೂ, ನಯನತಾರಾ ಜಾಗಕ್ಕೆ ನಟಿ ತಮನ್ನಾ ಅವರನ್ನು ಕರೆತರಲಾಗುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಈ ಸಮಸ್ಯೆಯನ್ನು ಪರಿಹರಿಸಲು ಚಿತ್ರ ನಿರ್ಮಾಪಕ ಇಶಾರಿ ಕೆ.ಗಣೇಶ್ ಪ್ರಯತ್ನಿಸುತ್ತಿದ್ದಾರೆ.  ಇವೆಲ್ಲವುಗಳ ನಡುವೆ ದುನಿಯಾ ವಿಜಯ್​ಗೆ ಆರಂಭದ ಚಿತ್ರದಲ್ಲಿಯೇ ವಿಘ್ನ ಉಂಟಾಗಿದೆ. 

ಅಂದಹಾಗೆ ಈ ಚಿತ್ರದಲ್ಲಿ, ವಿಲನ್​ ಆಗಿ ದುನಿಯಾ ವಿಜಯ್ ಮಿಂಚಿದ್ದರೆ, ರೆಜಿನಾ ಕ್ಯಾಸಂಡ್ರ, ಯೋಗಿ ಬಾಬು, ಊರ್ವಶಿ, ಅಭಿನಯ ಸೇರಿದಂತೆ ಹಲವರು ಇದ್ದಾರೆ. ಇದರ  ಶೂಟಿಂಗ್‌ ಚೆನ್ನೈನಲ್ಲಿ ನಡೆಯುತ್ತಿದೆ. ಮುಂದಿನ ಶೂಟಿಂಗ್​ ಪೊಲ್ಲಾಚಿಯಲ್ಲಿ ಶೆಡ್ಯೂಲ್​ ಮಾಡಲಾಗಿದೆ. ನಟಿ ನಯನತಾರಾ,  ಎಲ್ಲರ ಮುಂದೆ ಸಹಾಯಕ ನಿರ್ದೇಶಕರ ಮೇಲೆ ಕೂಗಾಡಿದರು ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಮುಂದೆ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆಯಷ್ಟೇ. ಅಂದಹಾಗೆ ಈ ಚಿತ್ರಕ್ಕಾಗಿ ನಯನತಾರಾ ಮಾಂಸಾಹಾರವನ್ನೂ ತ್ಯಜಿಸಿದ್ದರಂತೆ. ಅವರದ್ದು ದೇವಿಯ ಪಾತ್ರವಾಗಿರುವ ಕಾರಣ ಹೀಗೆ ಮಾಡಿದ್ದರು ಎನ್ನಲಾಗುತ್ತಿದೆ. ಆದರೆ ಈಗ ಕಿರಿಕ್​ ಆಗಿದೆ.

ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಬಿಗ್​ಬಾಸ್​ ಐಶ್ವರ್ಯಾ ಸಿಂಧೋಗಿ: ಹುಡುಗನ ಡಿಟೇಲ್ಸ್​ ಹೇಳಿದ್ದು ಹೀಗೆ...

vuukle one pixel image
click me!